ಕನ್ನಡಿಗರ ಕ್ಷಮೆಯಾಚಿಸಿದ ಅಜಯ್ ದೇವಗನ್
ಬಾಲಿವುಡ್ ನಟ ಅಜಯ್ ದೇವಗನ್ ಕಡೆಗೂ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಅವರ ಅಭಿನಯದ ಸಿಂಗಂ ಚಿತ್ರದಲ್ಲಿ "ಕನ್ನಡಿಗರನ್ನು ನಾಯಿಗಳು" ಎಂದು ಡೈಲಾಗ್ ಹೊಡೆದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಸರಿಯಾಗಿ ಮೂತಿಗೆ ಇಕ್ಕಿಸಿಕೊಂಡಿದ್ದರು.
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಈಗ ಎಚ್ಚೆತ್ತುಕೊಂಡ ಅಜಯ್ ದೇವಗನ್ ಅಯ್ಯೋ ತಪ್ಪಾಯ್ತು ನನ್ನನ್ನು ಕ್ಷಮಿಸಿಬಿಡಿ ಎಂದು ಅಂಗಲಾಚಿದ್ದಾರೆ. ಕೆಚ್ಚೆದೆಯ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದರೆ ಏನಾಗುತ್ತದೆ ಎಂಬುದು ಬಾಲಿವುಡ್ ಚಿತ್ರಮಂದಿಗೆ ಈ ಮೂಲಕ ಗೊತ್ತಾಗಿದೆ.
ಅಜಯ್ ದೇವಗನ್ ಹಾಗೂ ಪ್ರಕಾಶ್ ರೈ ನಡುವೆ ನಡೆಯುವ ಚಿತ್ರದಲ್ಲಿನ ಡೈಲಾಗ್ ಹೀಗಿದೆ. ಪ್ರಕಾಶ್ ರೈ: ಕರ್ನಾ ಟಕದ ಗಡಿಯಿಂದ ಸಾವಿರ ಜನ ಕರೆದುಕೊಂಡು ಬರುತ್ತೇನೆ; ಅಜಯ್ ದೇವಗನ್: ನಾನು 10 ಸಾವಿರ ಜನ ಕರೆದುಕೊಂಡು ಬರ್ತೀನಿ. ನನ್ನ ಹಿಂದೆ ಇಡೀ ಜಿಲ್ಲೆಯುಎ ಇದೆ. ಸಾವಿರ ನಾಯಿಗಳಿಗೆ ನಾನೊಬ್ಬ ಸಿಂಹ ಸಾಕು ಎನ್ನುವ ಡೈಲಾಗ್ ಕನ್ನಡಿಗರ ಸ್ವಾಭಿಮನ ಕೆಣಕಿತ್ತು. (ದಟ್ಸ್ಕನ್ನಡ ಸಿನಿವಾರ್ತೆ)
More from Filmibeat
English summary
Actor Ajay Devgn along with Kannadiga actor Prakash Raj, director Rohit Shetty have apologised to the people of Karnataka for the offensive statements on Kannadigas made in their film Singham.


Click it and Unblock the Notifications











