Don't Miss!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನ್ನ ಪ್ರಭು ನಡುವೆ ಏನಿಲ್ಲ ಏನಿಲ್ಲ ಎಂದ ನಯನತಾರಾ
ನಯನತಾರಾ ಅವರು ಕುಟುಂಬದ ಒತ್ತಡ ಹಾಗೂ ಸಿನಿಮಾ ಜಗತ್ತಿನ ಆಕರ್ಷಣೆಯ ಸಲುವಾಗಿ ಪ್ರಭುದೇವ ಅವರ ಪ್ರೇಮವನ್ನು ತ್ಯಾಗ ಮಾಡುವ ಹಂತಕ್ಕೆ ತಲುಪಿದ್ದಾರೆ ಎಂದುಒನ್ ಇಂಡಿಯಾ ತಮಿಳು ಬಾತ್ಮೀದಾರರು ಹೇಳಿದ್ದಾರೆ.
'ಈಗ ಕೈಲಿರುವ ಹೊಸ ಚಿತ್ರಗಳನ್ನು ಮುಗಿಸಿಬಿಡುತ್ತೇನೆ ಮತ್ತೆ ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ' ಎಂದು ನಯನತಾರಾ ಹೇಳಿದ್ದಾರೆ. ಆದರೆ,ಪ್ರೀತಿಯ ಸಲುವಾಗಿಯೇ ಪತ್ನಿ ರಾಮಲತಾರಿಂದ ವಿಚ್ಛೇದನ ಪಡೆದ ಪ್ರಭುದೇವ ಈಗ ಪೆಚ್ಚಾಗಿದ್ದಾರೆ.
ನಯನತಾರಾ ಮತ್ತೆ ತೆಲುಗು ಚಿತ್ರರಂಗದಲ್ಲಿ ಮಿಂಚಲು ಆರಂಭಿಸಿದ್ದು, ನಾಗಾರ್ಜುನ ಜೊತೆ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಪ್ರಭುದೇವ ಕೂಡಾ ನಿರ್ದೇಶಕನಾಗಿ ಹಿಂದಿಯಲ್ಲಿ ಹೆಸರು ಗಳಿಸುವತ್ತ ಯೋಜನೆ ಹಾಕಿಕೊಂಡಿದ್ದಾರೆ. ಇಬ್ಬರನ್ನು ಬೇರೆ ಮಾಡಲು ಚಿತ್ರರಂಗವೇ ಕಾರಣ ಎನ್ನಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇದು ಮೊದಲ ಪತ್ನಿ ಶಾಪ ಹಾಗೂ ನಯನತಾರಾ ಕ್ರಿಶ್ಚಿಯನ್ ಧರ್ಮ ಬಿಟ್ಟು ಹಿಂದೂ ಧರ್ಮ ಸೇರಿದ ಫಲ ಎಂದು ಸುದ್ದಿ ಹಬ್ಬುತ್ತಿದೆ. ಈ ನಡುವೆ ಪ್ರಭು ಹಾಗೂ ನಯನತಾರಾ ಮತ್ತೆ ಒಂದಾಗಿ ನಲಿದಾಡಿದರೆ ಅದರಲ್ಲಿ ಆಶ್ಚರ್ಯ ಏನಿಲ್ಲ ಎಂದು ಕಾಲಿವುಡ್ ಮಂದಿ ಹೇಳುತ್ತಿದ್ದಾರೆ.