Don't Miss!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- News ಚಿಕ್ಕಬಳ್ಳಾಪುರದಲ್ಲಿ ಮತಭೇಟೆ ಆರಂಭ: ದೇವಾಂಗ ಮಠದ ದಯಾನಂದಪುರಿ ಸ್ವಾಮೀಜಿ ಭೇಟಿಯಾದ ಡಾ.ಕೆ. ಸುಧಾಕರ್
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Automobiles ಇದು ಮಹೀಂದ್ರಾ ಥಾರ್ ಹೊಸ ಅಧ್ಯಾಯ: ಸ್ವಾತಂತ್ರ್ಯ ದಿನದಂದು 5-ಡೋರ್ ಅವತಾರದಲ್ಲಿ ಲಗ್ಗೆ
- Sports IPL 2024: 14 ವರ್ಷಗಳ ಹಿಂದಿನ ಬೃಹತ್ ಐಪಿಎಲ್ ದಾಖಲೆಯನ್ನು ಮುರಿದ SRH vs MI ಪಂದ್ಯ
- Lifestyle ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೋಮೂರ್ತಿ ಬಗ್ಗೆ ಬೇಸರಗೊಂಡ ನಂದಿತಾ
'ಸೋನು ನಿಗಮ್ ಹೀರೋ ಬೇರೆ ಆಗ್ತಾರಂತೆ? ಅದೊಂದು ಆದರೆ ಮುಗೀತು ಬಿಡಿ' ಗಾಯಕಿ ನಂದಿತಾ ಮಾತಿನಲ್ಲಿ ದೊಡ್ಡ ವ್ಯಂಗ್ಯವಿತ್ತು. ಪರಭಾಷಾ ಗಾಯಕ, ಗಾಯಕಿಯರಿಗೆ ಮಣೆಹಾಕುವ ಪ್ರವೃತ್ತಿಯಿಂದ ರೋಸಿಹೋಗಿರುವವರಲ್ಲಿ ಅವರು ಪ್ರಮುಖರು. 'ಮುಂಗಾರು ಮಳೆ' ಬರುವವರೆಗೂ ನಂದಿತಾ ಕನ್ನಡದ ಲೀಡ್ ಗಾಯಕಿ. ಈಗ ಅವರ ಜಾಗವನ್ನು ಶ್ರೇಯಾ ಘೋಷಾಲ್ ಆಕ್ರಮಿಸಿಕೊಂಡಿದ್ದಾರೆ.
'ಶ್ರೇಯಾ ಹಾಡಿನ ಬಗ್ಗೆ ಎರಡು ಮಾತಿಲ್ಲ. ಆಕೆ ನಿಜಕ್ಕೂ ಪ್ರತಿಭಾವಂತೆ. ಆದರೆ, ನಮ್ಮ ಭಾಷೆಯ ಜಾಯಮಾನದ ಅರಿವು ಅವರಿಗಿಲ್ಲ. ಹಾಗಾಗಿ ಭಾಷಾ ದೃಷ್ಟಿಯಿಂದ ಕೆಲವು ತಪ್ಪುಗಳು ಅವರಿಂದ ಆಗುತ್ತವೆ. ಕನ್ನಡದ ಕೆಲವು ಪದಗಳ ಮೇಲೆ ವಿಪರೀತ ಗಮಕ ಮಾಡುವುದು ತಪ್ಪು. ಅಂಥ ತಪ್ಪುಗಳನ್ನು ಕನ್ನಡ ಬರದೇ ಇರುವವರು ಮಾಡುವುದು ಸಹಜವೇ. ಆದರೆ, ತಪ್ಪುಗಳನ್ನೆಲ್ಲಾ ನಾವು ಒಪ್ಪಿಕೊಂಡು ಬೇರೆಯವರು ಹಾಡಿದ್ದನ್ನು ಕೇಳುವುದಿದೆಯಲ್ಲ; ಅದು ದುರಂತ...' ಹೀಗೆ ನಂದಿತಾ ಲಹರಿ ಮುಂದುವರಿಯಿತು.
ಒಂದು ಕಾಲದಲ್ಲಿ ತಮ್ಮನ್ನು ಕರೆದು ಚಾನ್ಸ್ ಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿ ಧೋರಣೆಯೇ ಈಗ ಬದಲಾಗಿರುವುದಕ್ಕೆ ನಂದಿತಾ ಉದಾಹರಣೆಗಳನ್ನು ಕೊಡುತ್ತಾರೆ. ಮಿಲನ ಚಿತ್ರದ 'ಮದರಂಗಿಯಲ್ಲಿ' ಹಾಗೂ 'ಮಾತಾಡ್ ಮಾತಾಡ್ ಮಲ್ಲಿಗೆ' ಸಿನಿಮಾದ ಒಂದು ಹಾಡನ್ನು ಮೊದಲು ನಂದಿತಾ ಹಾಗೂ ರಾಜೇಶ್ ಹಾಡಿದ್ದರು.
ಆಮೇಲೆ ಮನೋಮೂರ್ತಿ ನಂದಿತಾ ಕಂಠದ ಬದಲು ಶ್ರೇಯಾ ಕಂಠ ಬಳಸಿಕೊಂಡಿದ್ದಾರೆ. ಹೀಗಾದದ್ದು ಯಾಕೆ ಎಂದು ನಂದಿತಾ ಪ್ರಶ್ನಿಸಿದ್ದಾರೆ ಕೂಡ. ಅದಕ್ಕೆ ಮನೋಮೂರ್ತಿ ನಿರ್ಮಾಪಕ, ನಿರ್ದೇಶಕರ ಕಡೆ ಬೆರಳು ತೋರಿಸಿ ಸುಮ್ಮನಾಗಿದ್ದಾರೆ. ಇನ್ನು ಮುಂದೆ ಮನೋಮೂರ್ತಿ ಕರೆದರೆ ಹಾಡಲು ಒಲ್ಲೆ ಎನ್ನುವಿರಾ ಅಂದರೆ, 'ನಮಗೆ ಸಿಗುವ ಹಾಡುವ ಅವಕಾಶವನ್ನು ಈ ಪರಿಸ್ಥಿತಿಯಲ್ಲಿ ಬಿಡುವುದಾದರೂ ಹೇಗೆ?" ಎಂದು ಮರುಪ್ರಶ್ನೆ ಹಾಕುತ್ತಾರೆ.
ಪರಭಾಷಾ ಗಾಯಕ, ಗಾಯಕಿಯರಿಂದ ವ್ಯಾಪಕವಾಗಿ ಹಾಡಿಸುತ್ತಿರುವುದನ್ನು ಪ್ರತಿಭಟಿಸಲು ಮೆರವಣಿಗೆ ಹಮ್ಮಿಕೊಳ್ಳುವ ನಿರ್ಧಾರ ನೆರವೇರದಿರಲು ಏನು ಕಾರಣ ಎಂಬ ಪ್ರಶ್ನೆಗೆ ನಂದಿತಾ ಮೊದಲು ಮೌನವಾದರು. ಆಮೇಲೆ ಹೇಳಿದ್ದು ಹೀಗೆ: 'ನಮ್ಮಲ್ಲಿ ಯಾರೂ ನಾಯಕತ್ವ ವಹಿಸಿಕೊಳ್ಳಲಿಲ್ಲ. ಪ್ರತಿಭಟನೆಯಂಥ ದೊಡ್ಡ ಕೆಲಸ ಮಾಡುವಾಗ ಯಾರಾದರೂ ನೇತೃತ್ವ ವಹಿಸಿಕೊಳ್ಳಲೇಬೇಕು. ನಾಯಕರೇ ಇಲ್ಲದ ಕಾರಣ ಆ ಉದ್ದೇಶ ಈಡೇರಲಿಲ್ಲವಷ್ಟೆ".
ಅಪ್ಪ ಅಮ್ಮನಿಗಾಗಿ ಹೊಸ ಫ್ಲಾಟ್ ಕೊಂಡಿರುವ ನಂದಿತಾ 'ರಿಯಾಲಿಟಿ ಶೋ"ಗಳ ತೀರ್ಪುಗಾರರಾಗಿ ಈಗ ಮಿಂಚುತ್ತಿದ್ದಾರೆ. ಆದರೂ, ಹಿನ್ನೆಲೆ ಗಾಯನದ ಅವಕಾಶ ಕಡಿಮೆಯಾಗಿರುವುದರ ಕುರಿತು ಅವರಿಗೆ ಬೇಸರವಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)