Don't Miss!
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಂದ್ಗೂ ನಮಗೂ ಸಂಬಂಧವಿಲ್ಲ -ಗಂಗರಾಜು
ಬೆಂಗಳೂರು : ನಿರ್ಮಾಪಕರ ಸಂಘಕ್ಕೆ ಸೇರಿದ ಕೆಲವು ಸದಸ್ಯರಷ್ಟೇ ಸಿನಿಮಾ ಚಟುವಟಿಕೆಗಳನ್ನು ನಿಲ್ಲಿಸಿ ಬಂದ್ನಲ್ಲಿ ತೊಡಗಿದ್ದಾರೆ. ಉಳಿದ ನಿರ್ಮಾಪಕರು ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು ಹೇಳಿದ್ದಾರೆ. ಇದರೊಂದಿಗೆ ಚಿತ್ರೋದ್ಯಮದ ಪ್ರಬಲ ಗುಂಪಿನೊಂದಿಗೆ ವಾಣಿಜ್ಯ ಮಂಡಳಿ ಪ್ರತ್ಯೇಕವಾಗಿ ಗುರ್ತಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.
ಬಂದ್ಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ . ಚಿತ್ರೋದ್ಯಮದ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ನಿರ್ಮಾಪಕರ ಸಂಘಕ್ಕೆ ಸೇರಿದ ಕೆಲವರು ಮಾತ್ರ ಬಂದ್ನಲ್ಲಿ ಭಾಗವಹಿಸಿದ್ದಾರೆ ಎಂದು ಪಿಟಿಐ ಪ್ರತಿನಿಧಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಸೋಮವಾರ ತಿಳಿಸಿದರು.
ಪರಭಾಷಾ ಚಿತ್ರಗಳ ಲಾಬಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎನ್ನುವ ಆರೋಪದ ಮೇರೆಗೆ, ಮಂಡಳಿಯನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂದು ಇತ್ತೀಚೆಗೆ ಕೆಲವು ನಿರ್ಮಾಪಕ-ನಿರ್ದೇಶಕರು ಬದಲಿಸಿದ ಕುರಿತು ಪ್ರತಿಕ್ರಿಯಿಸಿದ ಗಂಗರಾಜು- ಈ ರೀತಿಯ ಬದಲಾವಣೆ ಸಾಧ್ಯವಿಲ್ಲ . ಇದಕ್ಕೆಲ್ಲ ನೀತಿಸಂಹಿತೆ ಅವಕಾಶ ಮಾಡಿಕೊಡುವುದಿಲ್ಲ . ದಾಳಿ ಪ್ರಕರಣವನ್ನು ಮಂಡಳಿಯ ಕಾರ್ಯಕಾರಿ ಸಮಿತಿ ಖಂಡಿಸಿದೆ ಎಂದು ಗಂಗರಾಜು ಹೇಳಿದರು.
ಚಿತ್ರೋದ್ಯಮ ಬಂದ್ : ಚಿತ್ರೋದ್ಯಮ ಭಾಗಶಃ ಬಂದ್ ಆಚರಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ಗಂಗರಾಜು ಹೇಳಿಕೆಯ ಬೆನ್ನಿಗೇ- ಬಂದ್ನಲ್ಲಿ ತೊಡಗಿರುವ ಚಿತ್ರೋದ್ಯಮದ ಗುಂಪಿನ ಹೇಳಿಕೆಯೂ ಬಿಡುಗಡೆಯಾಗಿದೆ. ನಿರ್ಮಾಣ, ಡಬ್ಬಿಂಗ್, ರೆಕಾರ್ಡಿಂಗ್, ಚಿತ್ರೀಕರಣ ಸೇರಿದಂತೆ ಉದ್ಯಮದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿವೆ ಎಂದು ಈ ಪ್ರಕಟಣೆ ಹೇಳಿದೆ.
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್