ಟಿವಿ ಮಾಧ್ಯಮಗಳ ಮೇಲೆ ಸುದೀಪ್ ಆವಾಜ್ F**K

ಈ ಘಟನೆ ನಡೆದಿರುವುದು ಕನ್ನಡ ಚಿತ್ರಗಳ ನಿರ್ಮಾಪಕ, ನಟ ಕಮ್ ನಿರ್ದೇಶಕ ದ್ವಾರಕೀಶ್ ಮನೆಯಂಗಳದಲ್ಲಿ. 'ವಿಷ್ಣುವರ್ಧನ' ಚಿತ್ರಕ್ಕೆ ಸಂಬಂಧ ಪಟ್ಟಂತೆ ವಿಶೇಷ ಪ್ರೆಸ್ಮೀಟನ್ನು ದ್ವಾರಕೀಶ್ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಕೇವಲ ಟಿವಿ ಮಾಧ್ಯಮ ಮಿತ್ರರನ್ನು ಮಾತ್ರ ದ್ವಾರಕೀಶ್ ಆಹ್ವಾನಿಸಿದ್ದರು.
ಟಿವಿ ಮಾಧ್ಯಮ ಮಿತ್ರರು ಸಮಯಕ್ಕೆ ಸರಿಯಾಗಿಯೇ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ದ್ವಾರಕೀಶ್ ಬಿಟ್ಟರೆ ಅಲ್ಲಿ ಬೇರೆಯವರ ಸುಳಿವಿರಲಿಲ್ಲ. ಸುದೀಪ್ ಆಗ ಬರಹಬಹುದು ಈಗ ಬರಬಹುದು ಎಂದು ಕಾದದ್ದೇ ಬಂತು. ಒಂದು ಗಂಟೆ, ಎರಡು ಗಂಟೆ ಕಾದರೂ ಪತ್ತೆ ಇಲ್ಲ ಆಸಾಮಿ.
ಕಡೆಗೆ ಮೂರು ಮುಕ್ಕಾಲು ಗಂಟೆ ಕಾಯಿಸಿದ ಸುದೀಪ್ ಬರುತ್ತಿದ್ದಂತೆ ಟಿವಿ ಮಾಧ್ಯಮಗಳ ಪಿತ್ತ ನೆತ್ತಿಗೇರಿತ್ತು. ಸಹನೆ ಕಳೆದುಕೊಂಡ ಪತ್ರಕರ್ತರು ಸುದೀಪ್ರನ್ನು ತರಾಟೆಗೆ ತೆಗೆದುಕೊಂಡರು. ಅದೂ ಇದೂ ಸಮಜಾಯಿಷಿ ನೀಡಿದ ಸುದೀಪ್, ತಮ್ಮ ಮಗನಿಗೆ, ಹೆಂಡತಿಗೆ ಹುಷಾರಿರಲಿಲ್ಲ ಎಂದು ಏನೋ ಒಂದು ಕಾರಣ ಕೊಟ್ಟಿದ್ದಾರೆ.
ಮಾಧ್ಯಮಗಳ ಕಿವಿಗೆ ಹೂವಿಡುವ ಈ ಮಾತುಗಳಲ್ಲಿ ಯಾಕೋ ಏನೋ ಮಾಧ್ಯಮ ಮಿತ್ರರಿಗೆ ನಂಬಿಕೆ ಬಂದಿಲ್ಲ. ಕಡೆಗೆ ಅದೂ ಇದೂ ಮಾತಿನ ಚಕಮಕಿ ನಡೆದು, ಸಿಟ್ಟಿಗೆದ್ದ 'ಗೂಳಿ'ಯಂತೆ ಗುಟುರು ಹಾಕಿರುವ ಸುದೀಪ್, F**K ಯು ಚಾನಲ್ಸ್ ಎಂಬ ಮಾತು ಅವರ ಬಾಯಿಂದ ಅಚಾನಕ್ ಆಗಿ ಹೊರಬಿದ್ದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.


Click it and Unblock the Notifications











