Don't Miss!
- News Everest Fish Curry Masala: ಎವರೆಸ್ಟ್ ಫಿಶ್ ಕರಿ ಮಸಾಲೆ ಬ್ಯಾನ್: ಕಾರಣ ಇಲ್ಲಿದೆ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೌಢಶಾಲಾ ಶಿಕ್ಷಕಿ ಕೆಲಸಕ್ಕೆ ತಾರೆ ಐಶ್ವರ್ಯ ರೈ ಅರ್ಜಿ!
ಈ ಅನುಮಾನಕ್ಕೆ ಕಾರಣವಾಗಿದ್ದು ಭಾನುವಾರ (ಜು.15) ನಡೆದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ. ಕಾರವಾರ-ಕೋಡಿಬಾಗ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಹೈಸ್ಕೂಲಿನಲ್ಲಿ ಪರೀಕ್ಷೆ ನಡೆಯಿತು. ಆಶ್ಚರ್ಯಕರ ಸಂಗತಿ ಎಂದರೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇರುವುದು.
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಐಶ್ವರ್ಯ ರೈ ಬರುತ್ತಾರಾ ಎಂಬ ಕುತೂಹಲ ಪರೀಕ್ಷಾ ಮೇಲ್ವಿಚಾರಕರನ್ನೂ ಕಾಡುತ್ತಿತ್ತು. ಆದರೆ ಪರೀಕ್ಷೆಗೆ ಐಶ್ವರ್ಯ ಬಾರದೆ ಅವರನ್ನು ನಿರಾಸೆಗೊಳಿಸಿದರು. ಪರೀಕ್ಷಾರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇದದ್ದೇ ಈ ಕುತೂಹಲಕ್ಕೆ ಕಾರಣವಾಯಿತು.
ನಾರಾಯಣ ಗೊಂಡ (ನೋಂದಣಿ ಸಂಖ್ಯೆ 2199534) ಎಂಬುವವರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಫೋಟೋ ಇದ್ದ ಜಾಗದಲ್ಲಿ ತಾರೆ ಐಶ್ವರ್ಯ ರೈ ಫೋಟೋ ಇತ್ತು. ಹೆಸರು ಮಾತ್ರ ನಾರಾಯಣ ಗೊಂಡ ಎಂದೇ ಇತ್ತು.
ಈ ಅಚಾತುರ್ಯ ಹೇಗಾಯಿತು ಎಂದು ಈ ಬಗ್ಗೆ ವಿಚಾರಿಸೋಣ ಎಂದರೆ ನಾರಾಯಣ ಗೊಂಡ ಪರೀಕ್ಷೆಗೆ ಬರಲೇ ಇಲ್ಲ. ಆತ ಗೈರು ಹಾಜರಾಗಿದ್ದ. ಸರಿ ಈತ ಕೊಟ್ಟಿರುವ ವಿಳಾಸದಲ್ಲಾದರೂ ಹುಡುಕೋಣ ಎಂದರೆ ಅದೂ ತಪ್ಪಾಗಿತ್ತು. ಬಹುಶಃ ಆತ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಬಹುದು ಎಂದು ಪರೀಕ್ಷಾ ಮೇಲ್ವಿಚಾರಕರು ಅಂದಾಜಿಸಿದರು.
ಎನ್ಆರ್ ಶೀಟ್ನಲ್ಲಿ ಆಗಿರುವ ಪ್ರಮಾದವನ್ನು ಕೇಂದ್ರದ ಮೇಲ್ವಿಚಾರಕರು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣ ಸಿದ್ದಪ್ಪ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು.
ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಎಲ್ಲಿಂದ ಬೇಕಾದರೂ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿತ್ತು. ಈ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡು ಯಾರೋ ಐಶ್ವರ್ಯ ರೈ ಫೋಟೋ ಹಾಕಿರಬಹುದು. ಅಥವಾ ಭಾವಚಿತ್ರ ಅಪ್ ಲೋಡ್ ಮಾಡುವಾಗ ಕಣ್ತಪ್ಪಿನಿಂದಲೂ ಆಗಿರುವ ಸಾಧ್ಯತೆ ಇದೆ ಎಂದು ಪರೀಕ್ಷೆಗಳ ಉಸ್ತುವಾರಿ ವಹಿಸಿರುವ ಅಧಿಕಾರಿ ಎಸ್ ಜಯಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)