Don't Miss!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೌಢಶಾಲಾ ಶಿಕ್ಷಕಿ ಕೆಲಸಕ್ಕೆ ತಾರೆ ಐಶ್ವರ್ಯ ರೈ ಅರ್ಜಿ!
ಈ ಅನುಮಾನಕ್ಕೆ ಕಾರಣವಾಗಿದ್ದು ಭಾನುವಾರ (ಜು.15) ನಡೆದ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ. ಕಾರವಾರ-ಕೋಡಿಬಾಗ ಮುಖ್ಯರಸ್ತೆಯಲ್ಲಿರುವ ಸರ್ಕಾರಿ ಹೈಸ್ಕೂಲಿನಲ್ಲಿ ಪರೀಕ್ಷೆ ನಡೆಯಿತು. ಆಶ್ಚರ್ಯಕರ ಸಂಗತಿ ಎಂದರೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇರುವುದು.
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯಲು ಐಶ್ವರ್ಯ ರೈ ಬರುತ್ತಾರಾ ಎಂಬ ಕುತೂಹಲ ಪರೀಕ್ಷಾ ಮೇಲ್ವಿಚಾರಕರನ್ನೂ ಕಾಡುತ್ತಿತ್ತು. ಆದರೆ ಪರೀಕ್ಷೆಗೆ ಐಶ್ವರ್ಯ ಬಾರದೆ ಅವರನ್ನು ನಿರಾಸೆಗೊಳಿಸಿದರು. ಪರೀಕ್ಷಾರ್ಥಿಗಳ ಪಟ್ಟಿಯಲ್ಲಿ ಐಶ್ವರ್ಯ ರೈ ಫೋಟೋ ಇದದ್ದೇ ಈ ಕುತೂಹಲಕ್ಕೆ ಕಾರಣವಾಯಿತು.
ನಾರಾಯಣ ಗೊಂಡ (ನೋಂದಣಿ ಸಂಖ್ಯೆ 2199534) ಎಂಬುವವರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಫೋಟೋ ಇದ್ದ ಜಾಗದಲ್ಲಿ ತಾರೆ ಐಶ್ವರ್ಯ ರೈ ಫೋಟೋ ಇತ್ತು. ಹೆಸರು ಮಾತ್ರ ನಾರಾಯಣ ಗೊಂಡ ಎಂದೇ ಇತ್ತು.
ಈ ಅಚಾತುರ್ಯ ಹೇಗಾಯಿತು ಎಂದು ಈ ಬಗ್ಗೆ ವಿಚಾರಿಸೋಣ ಎಂದರೆ ನಾರಾಯಣ ಗೊಂಡ ಪರೀಕ್ಷೆಗೆ ಬರಲೇ ಇಲ್ಲ. ಆತ ಗೈರು ಹಾಜರಾಗಿದ್ದ. ಸರಿ ಈತ ಕೊಟ್ಟಿರುವ ವಿಳಾಸದಲ್ಲಾದರೂ ಹುಡುಕೋಣ ಎಂದರೆ ಅದೂ ತಪ್ಪಾಗಿತ್ತು. ಬಹುಶಃ ಆತ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಬಹುದು ಎಂದು ಪರೀಕ್ಷಾ ಮೇಲ್ವಿಚಾರಕರು ಅಂದಾಜಿಸಿದರು.
ಎನ್ಆರ್ ಶೀಟ್ನಲ್ಲಿ ಆಗಿರುವ ಪ್ರಮಾದವನ್ನು ಕೇಂದ್ರದ ಮೇಲ್ವಿಚಾರಕರು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣ ಸಿದ್ದಪ್ಪ ಕೇಂದ್ರಕ್ಕೆ ಭೇಟಿ ಪರಿಶೀಲಿಸಿದರು.
ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ಎಲ್ಲಿಂದ ಬೇಕಾದರೂ ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿತ್ತು. ಈ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಬಳಸಿಕೊಂಡು ಯಾರೋ ಐಶ್ವರ್ಯ ರೈ ಫೋಟೋ ಹಾಕಿರಬಹುದು. ಅಥವಾ ಭಾವಚಿತ್ರ ಅಪ್ ಲೋಡ್ ಮಾಡುವಾಗ ಕಣ್ತಪ್ಪಿನಿಂದಲೂ ಆಗಿರುವ ಸಾಧ್ಯತೆ ಇದೆ ಎಂದು ಪರೀಕ್ಷೆಗಳ ಉಸ್ತುವಾರಿ ವಹಿಸಿರುವ ಅಧಿಕಾರಿ ಎಸ್ ಜಯಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್)