Don't Miss!
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ನಿರ್ದೇಶಕನಿಗೆ ಚಾರ್ಮಿ ಕೌರ್ ಕಪಾಳಮೋಕ್ಷ
ಇದೇ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತಿರುವ 'ಯಾರೇ ಕೂಗಾಡಲಿ' ಚಿತ್ರದಲ್ಲಿ ಐಟಂ ಡಾನ್ಸ್ ಮಾಡಿರುವ ಚಾರ್ಮಿ ಕೌರ್ ಖ್ಯಾತ ನಿರ್ದೇಶಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಕಿಗೆ ಬಂದಿದೆ. ತೆಲುಗು ಚಿತ್ರರಂಗದ ಮೂಲಗಳ ಪ್ರಕಾರ, ನಿರ್ದೇಶಕನೊಬ್ಬನ ಕೆನ್ನೆ ಚಾರ್ಮಿ ಕೆಂಪಗೆ ಮಾಡಿದ್ದಾರೆ ಎನ್ನಲಾಗಿದೆ.
ಈ ಖ್ಯಾತ ನಿರ್ದೇಶಕನನ್ನು ಭೇಟಿ ಮಾಡಲು ಅವರ ಕಚೇರಿಗೆ ಚಾರ್ಮಿ ಹೋಗಿದ್ದರಂತೆ. ಆ ನಿರ್ದೇಶಕನೋ ಗುಂಡಿನ ಗಮ್ಮತ್ತಿನಲ್ಲಿ ಮೈಮರೆತಿದ್ದ. ಮೊದಲೇ ಕಿಕ್ ನಲ್ಲಿ ಕುದುರೆ ಹತ್ತಿದ್ದ ಈತ ಚಾರ್ಮಿ ಬಳಿ ಅದೂ ಇದೂ ಮಾತನಾಡುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ.
ಕೂಡಲೆ ಚಾರ್ಮಿ ಈತನ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ. ಈ ನಿರ್ದೇಶಕ ಬೇರಾರು ಅಲ್ಲ ಮೆಗಾಸ್ಟಾರ್ ಚಿರಂಜೀವಿ 'ತಮ್ಮುಡು' ಪವನ್ ಕಲ್ಯಾಣ್ ಅವರ 'ಗಬ್ಬರ್ ಸಿಂಗ್' ಚಿತ್ರವನ್ನು ನಿರ್ದೇಶಿಸಿದ ಹರೀಶ್ ಶಂಕರ್ ಎನ್ನಲಾಗಿದೆ. 'ಗಬ್ಬರ್ ಸಿಂಗ್' ಚಿತ್ರ ತೆಲುಗು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿರುವುದು ಗೊತ್ತೇ ಇದೆ.
ಸದ್ಯಕ್ಕೆ ಈತ ಜೂ.ಎನ್ಟಿಆರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಾರ್ಮಿ ಈತನಿಗೆ ಕಪಾಳಮೋಕ್ಷ ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರೋದ್ಯಮದ ತೂಕದ ವ್ಯಕ್ತಿಗಳೆಲ್ಲಾ ಬಂದು ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಲು ನೋಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಪಾಳಮೋಕ್ಷ ಸುದ್ದಿ ಮಾಧ್ಯಗಳ ಕಿವಿಗೆ ಬಿದ್ದಿದೆ.
ಅಂದಹಾಗೆ ಚಾರ್ಮಿ ಕೌರ್ ಇತ್ತೀಚೆಗೆ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲಿ ಮಸ್ತ್ ಐಟಂ ಸಾಂಗ್ ಮಾಡಿದ್ದರು. ಇದಕ್ಕೂ ಮುನ್ನ 'ಲವಕುಶ' ಚಿತ್ರದಲ್ಲೂ ಅಭಿನಯಿಸಿದ್ದರು. ಈಗ 'ಯಾರೇ ಕೂಗಾಡಲಿ' ಮೂಲಕ ಮತ್ತೊಮ್ಮೆ ತಮ್ಮ ಸೊಂಟ ಬಳುಕಿಸಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.