Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾರೆ ಕರಿಷ್ಮಾ ಕಪೂರ್ ದಾಂಪತ್ಯ ಜೀವನ ನುಚ್ಚುನೂರು
2010ರಲ್ಲಿ ಎರಡನೆ ಮಗು ಕಿಯಾನ್ ರಾಜ್ ನನ್ನು ಹೆತ್ತ ಬಳಿಕ ಕರಿಷ್ಮಾ ತಮ್ಮ ಪತಿ ಸಂಜಯ್ ಮೇಲೆ ಆಸಕ್ತಿ ಕಳೆದುಕೊಂಡಿದ್ದರು. ಆತನೊಬ್ಬ ಸ್ತ್ರೀಲೋಲ ಎಂಬ ಕಾರಣಕ್ಕೆ ಕರಿಷ್ಮಾ ಕಪೂರ್ ದೂರಾಗಿದ್ದರು. ಈ ಕಾರಣಕ್ಕೆ ತಮ್ಮ ಗಂಡನಿಗೆ ಸೋಡಾಚೀಟಿ ನೀಡಿದ್ದಾಗಿ ತಿಳಿಸಿದ್ದರು.
ಈಗ ಇಬ್ಬರೂ ಪರಸ್ಪರ ಬೇರ್ಪಡಲು ಒಪ್ಪಿದ್ದು ವಿಚ್ಛೇದನ ಪತ್ರಗಳಿಗೆ ಸಹಿಹಾಕಿದ್ದಾರೆ. ಇನ್ನೇನಿದ್ದರೂ ಕಾನೂನಿನ ಮುದ್ರೆ ಬೀಳುವುದೊಂದು ಬಾಕಿ ಉಳಿದಿದೆ. ಕರಿಷ್ಮಾ ಹಾಗೂ ಸಂಜಯ್ ಅವರು 2003ರಲ್ಲಿ ಮದುವೆಯಾದ ಸ್ವಲ್ಪ ದಿನಗಳಲ್ಲೇ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು.
ಇಬ್ಬರೂ ಅದು ಹೇಗೋ ಹೊಂದಾಣಿಕೆ ಮಾಡಿಕೊಂಡು ಬಾಳದೋಣಿಯನ್ನು ಮುಂದೂಡುತ್ತಿದ್ದರು. 2005ರಲ್ಲಿ ಮಗಳು ಸಮೈರಾ ಹುಟ್ಟಿದ ಬಳಿಕ ಕರಿಷ್ಮಾ ಕಪೂರ್ ತನ್ನ ಗಂಡನನ್ನು ದೆಹಲಿಯಲ್ಲೇ ಬಿಟ್ಟು ಮುಂಬೈಗೆ ಸ್ಥಳಾಂತರವಾಗಿದ್ದರು. ಕರಿಷ್ಮಾ ಪೋಷಕರು ಇವರಿಬ್ಬರನ್ನು ಒಂದು ಮಾಡಲು ಮಾಡಿದ ಪ್ರಯತ್ನಗಳೆಲ್ಲವೂ ಹೊಳೆಯಲ್ಲಿ ಹುಣೆಸೆಹಣ್ಣು ತೊಳೆದಂತಾಯಿತು.
ಕಡೆಗೆ ಇಬ್ಬರನ್ನೂ ಒಂದು ಮಾಡಲು ಸಾಧ್ಯವಾಗಲಿಲ್ಲ. ಸಂಜಯ್ ಹೇಳಿಕೇಳಿ ಸ್ತ್ರೀಲೋಲ. ಈ ಬಗ್ಗೆ ಕರಿಷ್ಮಾ ಆತನಿಗೆ ಎಷ್ಟು ಬುದ್ಧಿ ಹೇಳಿದರು ಆತ ತನ್ನ ಚಾಳಿ ಬಿಡಲಿಲ್ಲ. ಕಡೆಗೆ ಆತನ ವರ್ತನೆಗೆ ರೋಸಿಹೋಗಿ ಆತನಿಂದ ಬೇರ್ಪಡಲು ಕೈಗೆತ್ತಿಕೊಂಡ ಅಸ್ತ್ರವೇ ವಿವಾಹ ವಿಚ್ಛೇದನ. (ಏಜೆನ್ಸೀಸ್)