Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಸಿನಿ ತಾರೆಯ ನೋವು ನಿವಾರಿಸಿದ ನಿತ್ಯಾನಂದ
ಈಕೆ ಬೇರಾರು ಅಲ್ಲ, ರೀ ಸ್ವಲ್ಪ ಬರ್ತೀರಾ, ಗಾಂಧಿ ನಗರ, ಬದ್ರಿ ಮತ್ತು ಇತ್ತೀಚೆಗೆ ಗೌತಮ್ ಕನ್ನಡ ಚಿತ್ರದಲ್ಲಿ ನಟಿಸಿರುವ ಹಾಗೂ 30ಕ್ಕೂ ಅಧಿಕ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿರುವ ಕೌಸಲ್ಯ. ಈಕೆಗೆ ಅಸಾಧ್ಯ ಬೆನ್ನು ನೋವು ಕಾಡುತ್ತಿತ್ತಂತೆ. ಹಲವಾರು ವೈದ್ಯರನ್ನು ಭೇಟಿ ಮಾಡಿದರೂ ಪ್ರಯೋಜನವಾಗಲಿಲ್ಲವಂತೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದದ್ದೇ ಬಂತು. ಆದರೆ ನೋವು ಮಾತ್ರ ಹಾಗೆಯೇ ಉಳಿಕೊಂಡಿತ್ತು.
ಕಡೆಗೆ ಈಕೆ ನಿತ್ಯಾನಂದ ಆಶ್ರಮಕ್ಕೆ ಭೇಟಿ ನೀಡಿದರಂತೆ. ಅದೇನಾಶ್ಚರ್ಯವೊ ಏನೋ ಆಕೆಯ ನೋವು ಉಶ್ ಪಟಾಕ್ ಆಗಿದೆ. ನಿತ್ಯಾನಂದ ಸೂತ್ರವೇ ಇದಕ್ಕೆ ಕಾರಣ ಎನ್ನುತ್ತಾರೆ ಅರಳು ಹುರಿದಂತೆ ಕನ್ನಡದಲ್ಲಿ ಮಾತನಾಡುವ ಅಭಿನೇತ್ರಿ ಕೌಸಲ್ಯ. ಒಟ್ಟು ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆದೆ. ಬಳಿಕ ತಮ್ಮ ಬೆನ್ನುನೋವು ಮಾಯವಾಯಿತು ಎಂದಿದ್ದಾರೆ.
ಇದೀಗ ಈಕೆ ಇಡೀ ತಮ್ಮ ಜೀವನವನ್ನೇ ಸ್ವಾಮಿ ನಿತ್ಯಾನಂದ ಅವರಿಗೆ ಮುಡಿಪಾಗಿಡಲು ನಿರ್ಧರಿಸಿದ್ದಾರಂತೆ. ಒಟ್ಟಿನಲ್ಲಿ ತಾರೆ ರಂಜಿತಾ ಹಾದಿಯಲ್ಲಿ ಕೌಸಲ್ಯಾ ಕೂಡ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಅಂದಹಾಗೆ ರಂಜಿತಾ ಅವರು ನಿತ್ಯಾನಂದ ಮೇಲೆ ಸಾಕ್ಷ್ಯಚಿತ್ರ ತೆಗೆಯಲು ಮುಂದಾಗಿದ್ದರು.
ಈ ಸಾಕ್ಷ್ಯಚಿತ್ರದಲ್ಲಿ ಸ್ವಾಮಿ ನಿತ್ಯಾನಂದರ ಹಾಗೂ ಅವರ ಭಕ್ತ ಸಮೂಹದ ಹಲವಾರು ಉತ್ತಮ ಕೆಲಸ ಕಾರ್ಯಗಳನ್ನು ತೋರಿಸಲಾಗುತ್ತದೆ. ಹಿಂದೂ ಧರ್ಮವನ್ನು ಮುನ್ನಡೆಸಲು ಸ್ವಾಮಿ ನಿತ್ಯಾನಂದ ಅವರೇ ಸೂಕ್ತ ವ್ಯಕ್ತಿ. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ಕೋಟ್ಯಂತರ ಅನುಯಾಯಿಗಳನ್ನು ಸಂಪಾದಿಸಿದರು ಎಂದು ರಂಜಿತಾ ವರ್ಣರಂಜಿತವಾಗಿ ಬಣ್ಣಿಸಿದ್ದನ್ನು ಇಲ್ಲಿ ನೆನೆಯಬಹುದು. (ಏಜೆನ್ಸೀಸ್)