Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಿಗ್ಬಾಸ್ಗೆ ನಾಗಾರ್ಜುನ ಪಡೆಯುತ್ತಿರುವ ಸಂಭಾವನೆ ಇಷ್ಟೋಂದಾ?
ಮತ್ತೆ ಬಿಗ್ಬಾಸ್ ಶಖೆ ಪ್ರಾರಂಭವಾಗಿದೆ. ಕನ್ನಡದಲ್ಲಿ ಈಗಾಗಲೇ ಬಿಗ್ಬಾಸ್ ಒಟಿಟಿ ಕನ್ನಡ ಪ್ರಸಾರವಾಗುತ್ತಿದೆ. ಅದು ಮುಗಿಯುತ್ತಿದ್ದಂತೆ ಟಿವಿ ಬಿಗ್ಬಾಸ್ ಪ್ರಾರಂಭವಾಗಲಿದೆ.
ಇದೀಗ ತೆಲುಗಿನಲ್ಲಿಯೂ ಬಿಗ್ಬಾಸ್ ಹೊಸ ಸೀಸನ್ ಪ್ರಾರಂಭವಾಗುತ್ತಿದೆ. ತೆಲುಗು ಬಿಗ್ಬಾಸ್ನ ಆರಂಭದ ಕೆಲವು ಸೀಸನ್ಗಳು ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ ಆದರೆ ಕಳೆದೆರಡು ಸೀಸನ್ನಿಂದ ದಾಖಲೆ ಸಂಖ್ಯೆಯ ಟಿಆರ್ಪಿಯನ್ನು ಈ ಶೋ ಗಳಿಸುತ್ತಿದ್ದು, ಒಂದರ ಹಿಂದೊಂದು ಸೀಸನ್ಗಳು ಬರುತ್ತಿವೆ.
ಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್ಬಾಸ್ ಮನೆಯ ಹೆಣ್ಮಕ್ಳ ದೂರು
ಕಳೆದ ಮೂರು ಸೀಸನ್ ಅನ್ನು ನಟ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದು, ಇವರ ನಿರೂಪಣೆಯೂ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ. ಇದೀಗ ಹೊಸ ಸೀಸನ್ ಶುರುವಾಗಲಿದ್ದು, ಹೊಸ ಸೀಸನ್ಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನಾಗಾರ್ಜುನ ಪಡೆಯುತ್ತಿದ್ದಾರೆ.
ತೆಲುಗು ಬಿಗ್ಬಾಸ್ನ ಸೀಸನ್ ಆರು, ಸೆಪ್ಟೆಂಬರ್ 4 ರಿಂದ ಪ್ರಾರಂಭವಾಗಲಿದೆ. ಶೋನ ಹೊಸ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ನಾಗಾರ್ಜುನ ಅವರೇ ಈ ಶೋ ಅನ್ನು ನಿರೂಪಣೆ ಮಾಡಲಿರುವುದು ಖಾತ್ರಿ. ಬಿಗ್ಬಾಸ್ ಒಟಿಟಿ ಶೋ ಅನ್ನೂ ಅವರು ಹೋಸ್ಟ್ ಮಾಡಲಿದ್ದಾರೆ.
ತೆಲುಗಿನಲ್ಲಿ ಬಿಗ್ಬಾಸ್ ಸೀಸನ್ನಿಂದ ಸೀಸನ್ಗೆ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಕಾರಣ ನಾಗಾರ್ಜುನ ಅವರ ಸಂಭಾವನೆಯೂ ಏರಿಕೆ ಆಗುತ್ತಿದೆ. ಕಳೆದ ಸೀಸನ್ಗೆ ಅವರು ಒಂದು ಎಪಿಸೋಡ್ಗೆ 12 ಲಕ್ಷ ಸಂಭಾವನೆ ಪಡೆದಿದ್ದರು. ಅಲ್ಲಿಗೆ ಎಲ್ಲ ಎಪಿಸೋಡ್ಗಳನ್ನು ಸೇರಿಸಿ ಸುಮಾರು 12 ಕೋಟಿ ಸಂಭಾವನೆ ಪಡೆದಿದ್ದರು. ಆದರೆ ಈ ಹೊಸ ಸೀಸನ್ಗೆ ನಾಗಾರ್ಜುನ ಬರೋಬ್ಬರಿ 15 ಕೋಟಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ ತೆಲುಗು ಬಿಗ್ಬಾಸ್ ಶೋನಲ್ಲಿ ಯಾವ-ಯಾವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಈ ಬಾರಿ ದೀಪಿಕಾ ಪಿಲ್ಲಿ, ನೇಹಾ ಚೌಧರಿ, ಆಂಕರ್ ಉದಯ್ ಭಾನು, ನಟ ಅಮರ್ದೀಪ್, ಆದಿ ರೆಡ್ಡಿ, ಚಾಲಾಕಿ ಚಂಟಿ, ಗೀತು ರಾಯಲ್, ಕೋರಿಯಾಗ್ರಫರ್ ಪೋಪಿ ಮಾಸ್ಟರ್, ಶ್ರೀ ಸತ್ಯ, ಆರ್ಜೆ ಸೂರ್ಯ ಅವರುಗಳು ಬಿಗ್ಬಾಸ್ ಮನೆಯ ಒಳಗೆ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ, ಟಿವಿ ಹಾಗೂ ಇತರೆ ರಂಗಗಳಿಂದ ಸ್ಪರ್ಧಿಗಳನ್ನು ಆರಿಸಲಾಗಿದೆ.