ಚಿರಂಜೀವಿ ಪುತ್ರಿ ಶ್ರೀಜಾ- ಕಲ್ಯಾಣ್ ದೇವ್ ದಂಪತಿ ಡಿವೋರ್ಸ್ ತಗೊಂಡುಬಿಟ್ರಾ? ಇನ್ಸ್ಟಾ ಪೋಸ್ಟ್ ವೈರಲ್
ಮೆಗಾ ಫ್ಯಾಮಿಲಿಯಲ್ಲಿ ಒಂದ್ಕಡೆ ನಾಗಬಾಬು ಪುತ್ರಿ ನಿಹಾರಿಕಾ ಹಾಗೂ ಚೈತನ್ಯಾ ಡಿವೋರ್ಸ್ ಗುಸುಗುಸು ಶುರುವಾಗಿದೆ. ಮತ್ತೊಂದ್ಕಡೆ ಚಿರಂಜೀವಿ ಪುತ್ರಿ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೂಡ ದೂರಾಗುತ್ತಾರೆ ಎನ್ನುವ ವದಂತಿ ಹರಿದಾಡ್ತಿದೆ. ಆದರೆ ಈ ಬಗ್ಗೆ ಯಾರೊಬ್ಬರು ಸ್ಪಷ್ಟನೆ ನೀಡುತ್ತಿಲ್ಲ. ಹಾಗಾಗಿ ಅದೇ ನಿಜ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ.
ಕಲ್ಯಾಣ್ ದೇವ್ ಹೊಸ ಪೋಸ್ಟ್ ಶ್ರೀಜಾ ಜೊತೆಗಿನ ಸಂಬಂಧ ಹಳಸಿದ್ಯಾ? ಎನ್ನುವ ಅನುಮಾನ ಹೆಚ್ಚಿಸಿದೆ. ಕಳೆದೊಂದು ವರ್ಷದಿಂದ ಚಿರು ಪುತ್ರಿ ಹಾಗೂ ಕಲ್ಯಾಣ್ ದೇವ್ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಗುಸುಗುಸು ಶುರುವಾಗಿತ್ತು. ಡಿವೋರ್ಸ್ಗೆ ಮುಂದಾಗುವ ಸೆಲೆಬ್ರೆಟಿಗಳು ಸುಳಿವು ನೀಡುವಂತೆ ಇವರಿಬ್ಬರು ಕೂಡ ನಡೆಸುಕೊಳ್ಳುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್ಫಾಲೋ ಮಾಡೋದು, ಇಬ್ಬರು ಜೊತೆಗಿರುವ ಫೋಟೊಗಳನ್ನು ಡಿಲೀಟ್ ಮಾಡುವ ಕೆಲಸ ಮಾಡಿದ್ದಾರೆ. ಈ ಹಿಂದೆ ಕೂಡ ಕಲ್ಯಾಣ್ ದೇವ್ ಪರೋಕ್ಷವಾಗಿ ಒಂದು ಪೋಸ್ಟ್ ಮಾಡಿದ್ದರು.

ಶ್ರೀಜಾ ಈ ಹಿಂದೆ ಶಿರೀಶ್ ಭಾರಧ್ವಜ್ ಎಂಬುವವರನ್ನು ಪ್ರೀತಿಸಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆ ಆಗಿದ್ದರು. ನಂತರ ಪತಿಯ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆತನಿಗೆ ಡಿವೋರ್ಸ್ ನೀಡಿ ತಂದೆ ಮನೆ ಸೇರಿಕೊಂಡಿದ್ದರು. 2016ರಲ್ಲಿ ಉದ್ಯಮಿ ಕ್ಯಾಪ್ಟನ್ ಕಿಶನ್ ಪುತ್ರ ಕಲ್ಯಾಣ್ ದೇವ್ ಜೊತೆ ಶ್ರೀಜಾ 2ನೇ ಮದುವೆ ಆಗಿತ್ತು. ದಂಪತಿಗೆ ಒಬ್ಬ ಮಗಳು ಇದ್ದಾಳೆ. ಕಲ್ಯಾಣ್ ಹೀರೊ ಆಗಿ 3 ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಕಲ್ಯಾಣ್ ದೇವ್ ಪೋಸ್ಟ್ ವೈರಲ್
ಹಲವು ದಿನಗಳಿಂದ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಡಿವೋರ್ಸ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಹಿಂದೆ ಕೂಡ ಕಲ್ಯಾಣ್ ದೇವ್ ಮಕ್ಕಳ ಬಗ್ಗೆ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ಮಕ್ಕಳನ್ನು ಬಿಟ್ಟಿರಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ಕಾಮೆಂಟ್ ಮಾಡಿದ್ದರು. ಇದೀಗ ಕಲ್ಯಾಣ್ ದೇವ್ "ವಾರದಲ್ಲಿ ನಾನು ಖುಷಿಯಾಗಿರುವ 4 ಗಂಟೆಗಳು ಇದೇ" ಎಂದು ಹೆಣ್ಣುಮಕ್ಕಳು ಬೆಸ್ಟ್" ಎಂದು ಕ್ಯಾಪ್ಷನ್ ಕೊಟ್ಟು ಮಗಳ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ದಂಪತಿ ಡಿವೋರ್ಸ್ಗೆ ಮುಂದಾಗಿರೋದು ನಿಜಾನೇ? ಎಂದು ಕೆಲವರು ಹೇಳುತ್ತಿದ್ದಾರೆ.

ವಾರಕ್ಕೆ ಕೇವಲ 4 ಗಂಟೆ ಮಾತ್ರ
ಸಾಮಾನ್ಯವಾಗಿ ದಂಪತಿ ವಿಚ್ಛೇದನಕ್ಕೆ ಮುಂದಾದಾಗ ಅಥವಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ, ಕೌಟುಂಬಿಕ ನ್ಯಾಯಾಲಯವು ಇಂತಹ ನಿಯಮ ಜಾರಿಗೊಳಿಸುತ್ತದೆ. ವಾದ- ಪ್ರತಿವಾದ ಆಲಿಸಿದ ಬಳಿಕ ಮಕ್ಕಳು ಯಾರ ಬಳಿ ಇರಬೇಕು, ತಂದೆ ಅಥವಾ ತಾಯಿಯನ್ನು ಯಾವಾಗ ಭೇಟಿ ಮಾಡಬೇಕು, ಅವರೊಟ್ಟಿಗೆ ಎಷ್ಟು ಗಂಟೆ ಇರಬೇಕು ಅಂತ ನಿರ್ಣಯಿಸಲಾಗುತ್ತದೆ. ಸದ್ಯ ಕಲ್ಯಾಣ್ ದೇವ್ ಪೋಸ್ಟ್ ನೋಡುತ್ತಿದ್ದರೆ ವಾರಕ್ಕೆ ಕೇವಲ 4 ಗಂಟೆಗಳ ಕಾಲ ನವಿಷ್ಕಾ ಜೊತೆ ಕಳೆಯುತ್ತಾರೆ ಅನ್ನೋದು ಗೊತ್ತಾಗ್ತಿದೆ. ಅಲ್ಲಿಗೆ ಇಬ್ಬರ ಡಿವೋರ್ಸ್ ಪಡೆಯೋದು ನಿಜವೇ ಇರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.
ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ
ಮಕ್ಕಳು ಪೋಷಕರನ್ನು ನೋಡುತ್ತಿದ್ದಂತೆ ಎಕ್ಸೈಟ್ ಆಗುವ ಫೋಟೊವನ್ನು ಕಳೆದ ತಿಂಗಳು ಕಲ್ಯಾಣ್ ದೇವ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. "ಮಕ್ಕಳಿಗೆ ತಂದೆ ತಾಯಿ ಪ್ರೀತಿ, ಬೆಂಬಲ ಬಹಳ ಮುಖ್ಯ, ಮಿಸ್ಸಿಂಗ್ ನಿವಿಷ್ಕ, ನಿವಿತ್ರಿ "ಎಂದು ಬರೆದುಕೊಂಡಿದ್ದರು. ಆ ಪೋಸ್ಟ್ ನೋಡಿದವರಿಗೂ ಇಬ್ಬರು ಡಿವೋರ್ಸ್ ಮುಂದಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಅಭಿಮಾನಿಗಳು ಮಾತ್ರ ಇಬ್ಬರು ದೂರಾಗಬೇಡಿ ಮಕ್ಕಳಿಗೆ ಇಬ್ಬರ ಪ್ರೀತಿ ಅವಶ್ಯಕ ಎಂದು ಎಂದು ಮನವಿ ಮಾಡಿಕೊಂಡಿದ್ದರು.
ಬೆಂಗಳೂರಿನಲ್ಲಿ ನಡೆದಿದ್ದ ಮದುವೆ
7 ವರ್ಷಗಳ ಹಿಂದೆ ಕಲ್ಯಾಣ್ ದೇವ್ ಹಾಗೂ ಶ್ರೀಜಾ ಮದುವೆಯನ್ನು ಜೈಪುರದಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೆಗೆ ಬೆಂಗಳೂರಿನ ದೇವನಹಳ್ಳಿ ಬಳಿಯ ಚಿರು ಒಡೆತನದ ಪ್ರಕೃತಿ ಫಾರ್ಮ್ ಹೌಸ್ನಲ್ಲಿ ಕಲ್ಯಾಣೋತ್ಸವ ನಡೆದಿತ್ತು. ಕುಟುಂಬ ಸದಸ್ಯರು ಹಾಗೂ ಕೆಲವೇ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ನಂತರ ಹೈದರಾಬಾದ್ನಲ್ಲಿ ಚಿತ್ರರಂಗದವರಿಗೆ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಹಳ ಅದ್ಧೂರಿಯಾಗಿಯೇ ಶ್ರೀಜಾ 2ನೇ ಮದುವೆ ನೆರವೇರಿತ್ತು.


Click it and Unblock the Notifications











