Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಯರ್ ಎಂಡ್ ಎಣ್ಣೆ ಏಟಲ್ಲಿ ಉಪ್ಪಿಗೆ ಹಲ್ಲೆ ಮಾಡಿದ್ರಾ?
'ಹುಚ್ಚ ವೆಂಕಟ್' ಅನ್ನೋ ಸಿನಿಮಾ ಶುರುವಾಗಿರೋದು, ಶೂಟಿಂಗ್ ನಡೀತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ಸಿನಿಮಾದ ನಾಯಕ ವೆಂಕಟ್ ಈಗ ನಿಜಕ್ಕೂ ಹುಚ್ಚನಂತಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ನಡೆದ ವೆಂಕಟ್ ಸೇನೆ ಉದ್ಘಾಟನೆಯ ಪ್ರೆಸ್ ಮೀಟ್ ನಲ್ಲಿ.
ಪ್ರೆಸ್ ಮೀಟ್ ನಡೀತಾ ಇದ್ದಾಗಲೇ ವೆಂಕಟ್ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ಹಲ್ಲೆ ಮಾಡಿದ್ದಾರಂತೆ. ಇದಕ್ಕೆ ಕಾರಣವಾಗಿದ್ದು ಈಯರ್ ಎಂಡ್ ಎಣ್ಣೆ ಏಟು. ಘಟನೆ ನಡೆದಿದ್ದು ಹೀಗೆ... ವೆಂಕಟ್ ಸೇನೆಯ ಪೋಸ್ಟರ್ ಡಿಸೈನ್ ಮಾಡಿ ಹತ್ತು ಹನ್ನೆರೆಡು ಪ್ರಿಂಟ್ ಗಳನ್ನ ತರೋದಕ್ಕೆ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ವೆಂಕಟ್ ಹಣವನ್ನ ಕೊಟ್ಟಿದ್ದರು. ['ಟೋಪಿವಾಲ' ಉಪೇಂದ್ರಗೆ ಮಕ್ಮಲ್ ಟೋಪಿ]
ಆದರೆ ಈಯರ್ ಎಂಡ್ ಎಣ್ಣೆ ಏಟಲ್ಲಿ ಮಲಗಿದ್ದ ಪ್ರಿಂಟಿಂಗ್ ನವರು ಬೆಳಿಗ್ಗೆ ಆಫೀಸಿಗೆ ಬರೋದೇ 10 ಗಂಟೆಯಾಗಿದೆ. ಅಲ್ಲಿ ಕಾದು ಕಾದು ಪ್ರಿಂಟ್ ಹಾಕಿಸಿಕೊಂಡು ಬಂದ ಉಪ್ಪಿ ಪ್ರೆಸ್ ಮೀಟ್ ಲೊಕೇಷನ್ ತಲುಪುವಾಗ ಸಮಯ ಹನ್ನೊಂದುವರೆ.
ಸಮಯ 10:30ಕ್ಕೆ ನಿಗದಿಯಾಗಿದ್ದ ಪ್ರೆಸ್ ಮೀಟ್ ನಲ್ಲಿ ಪೋಸ್ಟರ್ ವಿನೈಲ್ ಇಲ್ಲದೆ ತಲೆಕೆಡಿಸಿಕೊಂಡಿದ್ದ ಹುಚ್ಚ ವೆಂಕಟ್ ಉಪ್ಪಿಯವರ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಇದರ ಬಗ್ಗೆ ಹೇಳಿಕೊಳ್ಳೋಕೂ ಆಗದೆ ಬಿಡೋಕೂ ಆಗದೆ ಬೇಸರಮಾಡಿಕೊಂಡು ಸುಮ್ಮನಾಗಿದ್ದಾರೆ. ಈಯರ್ ಎಂಡ್ ಎಣ್ಣೆ ಏಟು ಏನೇನೆಲ್ಲಾ ಮಾಡುತ್ತಲ್ವಾ.. ಅಬ್ಬಬ್ಬಾ..!