twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ 'ಕುರುಕ್ಷೇತ್ರ'ದ ಬಗ್ಗೆ ಬಾಲಿವುಡ್ ನಿಂದ ಬಂದ ಹೊಸ ಸುದ್ದಿ!

    By Bharath Kumar
    |

    ಶಾಸಕ ಮುನಿರತ್ನ 'ಕುರುಕ್ಷೇತ್ರ' ಎಂಬ ಹೆಸರಿನಲ್ಲಿ ಸಿನಿಮಾ ಮಾಡ್ತೀನಿ. ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟರು ಅಭಿನಯಿಸ್ತಾರೆ ಅಂತ ಯಾವಾಗ ಹೇಳಿದ್ರೋ, ಆಗಿಂದನೂ ಈ ಚಿತ್ರದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

    'ಕುರುಕ್ಷೇತ್ರ'ದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಾನೆ ಇದೆ. ಬರಿ ಕನ್ನಡದ ನಟರು ಮಾತ್ರ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂದಿದ್ದ ಚಿತ್ರತಂಡ, ಈಗ ಪರಭಾಷಾ ನಟರಿಗೆ ಗಾಳ ಹಾಕ್ತಿದೆ ಎಂಬ ವಿಚಾರಗಳು ಕೂಡ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.[ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]

    ಹೀಗಿರುವಾಗ, ಬಾಲಿವುಡ್ ನಿಂದ 'ಕುರುಕ್ಷೇತ್ರ'ದ ಬಗ್ಗೆ ಒಂದು ತಾಜಾ ಸುದ್ದಿ ಬಂದಿದೆ. ಮುಂದೆ ಓದಿ...

    'ಕುರುಕ್ಷೇತ್ರ'ದಲ್ಲಿ ವಿವೇಕ್ ಒಬೆರಾಯ್!

    'ಕುರುಕ್ಷೇತ್ರ'ದಲ್ಲಿ ವಿವೇಕ್ ಒಬೆರಾಯ್!

    ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರಲಿರುವ 'ಕುರುಕ್ಷೇತ್ರ'ದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.['ಕುರುಕ್ಷೇತ್ರ'ದಲ್ಲಿ ಜಗ್ಗೇಶ್ 'ಶಕುನಿ': ನವರಸ ನಾಯಕನಿಂದ ಡೌಟ್ ಕ್ಲಿಯರ್]

    ಯಾವ ಪಾತ್ರಕ್ಕೆ!

    ಯಾವ ಪಾತ್ರಕ್ಕೆ!

    ಈಗಾಗಲೇ ಚಿತ್ರತಂಡ ವಿವೇಕ್ ಒಬೆರಾಯ್ ಅವರನ್ನ ಸಂಪರ್ಕ ಮಾಡಲಾಗಿದ್ದು, ಕೃಷ್ಣನ ಪಾತ್ರಕ್ಕಾಗಿ ಅಪ್ರೋಚ್ ಮಾಡಲಾಗಿದೆಯಂತೆ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

    ರವಿಚಂದ್ರನ್ ಅಂತಿಮ!

    ರವಿಚಂದ್ರನ್ ಅಂತಿಮ!

    ಮತ್ತೊಂದೆಡೆ ಚಿತ್ರದ ನಿರ್ದೇಶಕ ನಾಗಣ್ಣ ಅವರ ಹೇಳಿರುವ ಪ್ರಕಾರ ಕೃಷ್ಣನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂತಿಮವಾಗಿದ್ದರಂತೆ.['ಕುರುಕ್ಷೇತ್ರ'ಕ್ಕೆ ಎಂಟ್ರಿ ಕೊಟ್ರು ಕನ್ನಡದ ಮತ್ತೊಬ್ಬ 'ಬಿಗ್' ಸ್ಟಾರ್!]

    ದರ್ಶನ್ ದುರ್ಯೋಧನ!

    ದರ್ಶನ್ ದುರ್ಯೋಧನ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 'ದುರ್ಯೋಧನ' ಪಾತ್ರವನ್ನ ಮಾಡುತ್ತಿದ್ದಾರೆ ಎನ್ನುವುದು ಬಿಟ್ಟರೇ, ಮತ್ಯಾವ ಪಾತ್ರಗಳು ಅಧಿಕೃತವಾಗಿಲ್ಲ. ಆದ್ರೆ, ಮೂಲಗಳ ಪ್ರಕಾರ, ಉಳಿದ ಪಾತ್ರಗಳ ಆಯ್ಕೆಯಲ್ಲಿ ತೊಡಗಿಕೊಂಡಿರುವ ಚಿತ್ರತಂಡ ಪರಭಾಷೆ ನಟರನ್ನ ಕೂಡ ಸಂಪರ್ಕ ಮಾಡುತ್ತಿದೆಯಂತೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

    ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣ!

    ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣ!

    'ಸಂಗೊಳ್ಳಿ ರಾಯಣ್ಣ' ಖ್ಯಾತಿಯ ನಾಗಣ್ಣ 'ಕುರುಕ್ಷೇತ್ರ'ವನ್ನ ನಿರ್ದೇಶನ ಮಾಡಲಿದ್ದಾರಂತೆ. ಶಾಸಕ ಮುನಿರತ್ನ ಅವರು ಬಂಡವಾಳ ಹಾಕಲಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಜುಲೈ 23 ರಂದು ಸೆಟ್ಟೇರಲಿದೆಯಂತೆ.[ಕನ್ನಡದ 'ಕುರುಕ್ಷೇತ್ರ'ಕ್ಕೆ ಮುಹೂರ್ತ ಫಿಕ್ಸ್!]

    English summary
    According to some media reports Bollywood star Vivek Oberoi is likely to act in the Kannada film Kurukshetra. The multistarrer film is produced by Muniratna and is Challenging Star Darshan's 50th film.
    Tuesday, May 30, 2017, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X