Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುರುಕ್ಷೇತ್ರ' ನಂತರ ಮತ್ತೊಂದು ಪೌರಾಣಿಕ ಸಿನಿಮಾದಲ್ಲಿ ದರ್ಶನ್.!
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ಈ ಸಿನಿಮಾ ತೆರೆಮೇಲೆ ಬರಲಿದೆ. ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಈಗ ಲೇಟೆಸ್ಟ್ ವಿಷ್ಯ ಏನಪ್ಪಾ ಅಂದ್ರೆ, ಕುರುಕ್ಷೇತ್ರ ಮುಗಿಸಿರುವ ದರ್ಶನ್ ಮತ್ತೊಂದು ಪೌರಾಣಿಕ ಚಿತ್ರದಲ್ಲಿ ನಟಿಸಲು ತಯಾರಿ ನಡೆಸಿಕೊಳ್ಳುತ್ತಿದ್ದಾರಂತೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಹಬ್ಬಿದೆ.
ಇನ್ಮುಂದೆ ದರ್ಶನ್ ಕಾಲ್ ಶೀಟ್ ನಲ್ಲಿ ಮೊದಲ ಆದ್ಯತೆ ಇವರಿಗೆ
''ಪೌರಾಣಿಕ ಚಿತ್ರಗಳನ್ನ ಮಾಡಲು ಮುಂದೆ ಬರುವ ನಿರ್ಮಾಪಕರಿಗೆ ಮೊದಲು ಕಾಲ್ ಶೀಟ್'' ನೀಡುವುದಾಗಿ ಬಹಿರಂಗವಾಗಿ ಹೇಳಿದ್ದ ದರ್ಶನ್ ಅವರ ಮಾತನ್ನ ಕೇಳಿ, ಕನ್ನಡದ ಕಥೆಗಾರರು, ನಿರ್ಮಾಪಕರುಗಳು ದರ್ಶನ್ ಬಳಿ ಪೌರಾಣಿಕ ಕಥೆಗಳನ್ನ ತೆಗೆದುಕೊಂಡು ಬರ್ತಿದ್ದಾರಂತೆ. ಅಷ್ಟಕ್ಕೂ, ದಾಸನ ಬಳಿ ಬಂದಿರುವ ಆ ಪೌರಾಣಿಕ ಕಥೆ ಯಾವುದು.? ಏನಿದು ಹೊಸ ಸುದ್ದಿ ಎಂದು ತಿಳಿಯಲು ಮುಂದೆ ಓದಿ.....
ಪೌರಾಣಿಕ ಚಿತ್ರಗಳಿಗೆ ಹೆಚ್ಚಿದ ಬೇಡಿಕೆ
ದರ್ಶನ್ ಅದ್ಯಾವಾಗ ಪೌರಾಣಿಕ ಚಿತ್ರಗಳ ಬಗ್ಗೆ ಹೆಚ್ಚು ಒಲವು ತೋರಿದರೋ ಆಗಲೇ ನಿರ್ಮಾಪಕರು ಹಾಗೂ ಕಥೆಗಾರರು ಪೌರಾಣಿಕ ಕಥೆಗಳ ಮೇಲೆ ಕಣ್ಣಿಟ್ಟರು ಅಂದ್ರೆ ತಪ್ಪಾಗಲಾರದು. ಅದರಂತೆ ದರ್ಶನ್ ಗಾಗಿ ಈಗ ರಾವಣನ ಕಥೆ ದಾಸನ ಮನೆ ಬಾಗಿಲಿಗೆ ಬಂದಿದೆಯಂತೆ.
'ಕುರುಕ್ಷೇತ್ರ' ಸಿನಿಮಾ ಬಗ್ಗೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ
'ರಾವಣ' ಆಗ್ತಾರಾ ಡಿ-ಬಾಸ್
'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ಮಿಂಚಿರುವ ದಾಸನಿಗೆ ಈಗ ರಾವಣ ಆಗಲು ಅವಕಾಶ ಬಂದಿದೆಯಂತೆ. ಕನ್ನಡದ ಹಿರಿಯ ನಟರೊಬ್ಬರು ದರ್ಶನ್ ಗೆ ರಾವಣನ ಕಥೆ ಓದಲು ಸ್ಕ್ರಿಪ್ಟ್ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ದರ್ಶನ್ ಗೆ ಸೂಕ್ತ ರಾವಣ ಪಾತ್ರ
'ಕುರುಕ್ಷೇತ್ರ'ದಲ್ಲಿ ದುರ್ಯೋಧನನ ಗೆಟಪ್ ನೋಡಿದ ಮೇಲೆ ರಾವಣನ ಪಾತ್ರಕ್ಕೂ ಚಾಲೆಂಜಿಂಗ್ ಸ್ಟಾರ್ ಸೂಕ್ತವಾಗ್ತಾರೆ ಎನ್ನೋದ್ರಲ್ಲಿ ಎರಡು ಮಾತಿಲ್ಲ. ಮಹಾಭಾರತದಲ್ಲಿ ದುರ್ಯೋಧನನ ಪಾತ್ರ ಹೇಗೋ, ರಾಮಾಯಣದಲ್ಲಿ ರಾವಣನ ಪಾತ್ರ ಕೂಡ ಅಷ್ಟೇ ಪ್ರಾಮುಖ್ಯತೆ ಹೊಂದಿದೆ. ಹಾಗಾಗಿ, ರಾವಣನ ಕಥೆಯನ್ನ ಸಿನಿಮಾ ಮಾಡಲು ಸ್ಯಾಂಡಲ್ ವುಡ್ ಸಜ್ಜಾಗುತ್ತಿದೆಯಾ.? ಎಂಬ ಪ್ರಶ್ನೆ ಮೂಡುತ್ತಿದೆ.
'ಡಿ-ಬಾಸ್' ಅಭಿಮಾನಕ್ಕೆ ಸಿಕ್ತು ಮತ್ತೊಂದು ಹೊಸ ಬಿರುದು
ನಿಜವಾದ್ರೆ ಅಭಿಮಾನಿಗಳಿಗೆ ಹಬ್ಬವೇ ಸರಿ
ಸದ್ಯ, ದರ್ಶನ್ ಬಳಿ ರಾವಣ ಸ್ಕ್ರಿಪ್ಟ್ ನೀಡಲಾಗಿದೆ ಎಂಬ ಸುದ್ದಿಯಷ್ಟೇ ಚರ್ಚೆಯಾಗುತ್ತಿದೆ. ಒಂದು ವೇಳೆ ಇದು ನಿಜವಾದ್ರೆ, ತೆರೆಮೇಲೆ ರಾವಣ ಬರೋದು ಪಕ್ಕಾ. ನಂತರ ಡಿ ಬಾಸ್ ಅಭಿಮಾನಿಗಳು ಸೇರಿದಂತೆ ಕನ್ನಡದ ಕಲಾಭಿಮಾನಿಗಳು ಹಬ್ಬವನ್ನ ಆಚರಿಸುವುದಂತು ಪಕ್ಕಾ. ಸದ್ಯಕ್ಕೆ ಇದನ್ನ ನಂಬುವಂತಿಲ್ಲ. ಆದ್ರೆ, ಇದು ನಿಜವಾಗಲಿ ಎನ್ನುವುದಷ್ಟೇ ಅಭಿಮಾನಿಗಳ ಆಶಯ.