twitter
    For Quick Alerts
    ALLOW NOTIFICATIONS  
    For Daily Alerts

    ಮೆಗಾ ಕುಟುಂಬದಿಂದ ಮತ್ತೊಮ್ಮೆ ಸರ್ಪ್ರೈಸ್: ಶಂಕರ್ ಪ್ರಾಜೆಕ್ಟ್‌ ಮೇಲೆ ಕಣ್ಣು?

    |

    ಮೆಗಾ ಕುಟುಂಬ ಬಹಳ ಬ್ಯುಸಿಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆಚಾರ್ಯ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಬಂಡವಾಳ ಹಾಕಿದ್ದಾರೆ. ಜೊತೆಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

    ಮತ್ತೊಂದೆಡೆ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಸಿದ್ದವಾಗುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ. ಅಕ್ಟೋಬರ್ 13 ರಂದು ಈ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಹೀಗೆ, ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿರುವ ಮೆಗಾ ಕುಟುಂಬದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

    ಮತ್ತೊಮ್ಮೆ ಒಂದಾದ ಚಿರು-ಚರಣ್?

    ಮತ್ತೊಮ್ಮೆ ಒಂದಾದ ಚಿರು-ಚರಣ್?

    'ಮಗಧೀರ' ಸಿನಿಮಾದಲ್ಲಿ ಚಿರಂಜೀವಿ ಅತಿಥಿ ಪಾತ್ರ ನಿರ್ವಹಿಸಿದ್ದರು. ನಂತರ 'ಬ್ರೂಸ್‌ ಲೀ' ಚಿತ್ರದಲ್ಲಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದೀಗ, ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ತೇಜ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಳಿಕ ಮತ್ತೊಮ್ಮೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಮತ್ತೊಮ್ಮೆ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

    ಆಚಾರ್ಯ ಚಿತ್ರೀಕರಣದಲ್ಲಿ ಚಿರಂಜೀವಿ-ರಾಮ್ ಚರಣ್ ತೇಜ ಕಮಾಲ್ಆಚಾರ್ಯ ಚಿತ್ರೀಕರಣದಲ್ಲಿ ಚಿರಂಜೀವಿ-ರಾಮ್ ಚರಣ್ ತೇಜ ಕಮಾಲ್

    ಶಂಕರ್ ಪ್ರಾಜೆಕ್ಟ್‌ನಲ್ಲಿ ಚಿರಂಜೀವಿ

    ಶಂಕರ್ ಪ್ರಾಜೆಕ್ಟ್‌ನಲ್ಲಿ ಚಿರಂಜೀವಿ

    ಆರ್‌ಆರ್‌ಆರ್ ಸಿನಿಮಾದ ಬಳಿಕ ನಿರ್ದೇಶಕ ಶಂಕರ್ ಜೊತೆ ರಾಮ್ ಚರಣ್ ತೇಜ ಮುಂದಿನ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಅದಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಹೊಸದಾಗಿ ವೈರಲ್ ಆಗಿರುವ ಸುದ್ದಿ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಮೆಗಾಸ್ಟಾರ್ ಸಹ ಇರಲಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

    ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ

    ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ

    ಶಂಕರ್ ಮತ್ತು ರಾಮ್ ಚರಣ್ ಜೋಡಿಯಲ್ಲಿ ಸೆಟ್ಟೇರಿರುವ ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಆಗಿದೆ ಎಂದು ಹೇಳಲಾಗುತ್ತಿದೆ. ಮೆಗಾಪುತ್ರ ಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಪವರ್ ಫುಲ್ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.

    ಟ್ವಿಟ್ಟರ್‌ನಲ್ಲಿ ಚಿರಂಜೀವಿ ಫಾಲೋ ಮಾಡೋದು ಒಬ್ಬರನ್ನೇ: ಅವರು ಯಾರು ಗೊತ್ತೆ?ಟ್ವಿಟ್ಟರ್‌ನಲ್ಲಿ ಚಿರಂಜೀವಿ ಫಾಲೋ ಮಾಡೋದು ಒಬ್ಬರನ್ನೇ: ಅವರು ಯಾರು ಗೊತ್ತೆ?

    ಇಂಡಿಯನ್ 2 ಸಿನಿಮಾ ನಿಂತಿದೆ

    ಇಂಡಿಯನ್ 2 ಸಿನಿಮಾ ನಿಂತಿದೆ

    ಎಂಥಿರನ್, ಐ, 2.0 ಅಂತಹ ಸಿನಿಮಾಗಳನ್ನು ಮಾಡಿರುವ ಶಂಕರ್ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರ ಆರಂಭಿಸಿದ್ದರು. ಹಣಕಾಸಿನ ಸಮಸ್ಯೆಯಿಂದ ಈ ಚಿತ್ರ ನಿಂತು ಹೋಗಿದೆ. ಆ ಪ್ರಾಜೆಕ್ಟ್ ಪಕ್ಕಕ್ಕೆ ಇಟ್ಟಿರುವ ಶಂಕರ್, ರಾಮ್ ಚರಣ್ ಜೊತೆಗಿನ ಸಿನಿಮಾ ಆರಂಭಿಸಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರು ಮಾಡಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

    English summary
    Megastar Chiranjeevi playing important role in Ram charan teja and Shankar's new Project.?
    Monday, April 5, 2021, 10:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X