Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್, ದರ್ಶನ್ ಇಬ್ಬರಿಗೂ ಚಾಲೆಂಜ್ 'ಐರಾವತ'
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಎಪಿ ಅರ್ಜುನ್ ನಡುವೆ ಎಲ್ಲವೂ ಸರಿ ಇಲ್ಲ. ದರ್ಶನ್ ಗೆ ಮೇಕಪ್ ಹಾಕಿಸಿ ಅರ್ಜುನ್ ಶಾಟ್ ತೆಗೆಯಲ್ಲ. ತೆಗೆದುಕೊಂಡ ಡೇಟ್ಸ್ ಮುಗಿದರೂ ಸಿನಿಮಾ ಮುಗಿದಿಲ್ಲ. ಹೀಗೆ ಏನೇನೋ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡ್ತಿವೆ.
ಆದ್ರೆ 'ಐರಾವತ' ಚಿತ್ರ ದರ್ಶನ್ ಮತ್ತು ಅರ್ಜುನ್ ಇಬ್ಬರಿಗೂ ಚಾಲೆಂಜ್ ಆಗಲಿದೆ. ಐರಾವತದ ಅದ್ಧೂರಿಯಾದ 'ಅಂಬಾರಿ' ಏರಿದ್ರೆ ಮಾತ್ರ ಅರ್ಜುನ್ನ್ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರಾಗಿ ಉಳೀತಾರೆ. ಇನ್ನು ದರ್ಶನ್ ಗೆ ಇದು ಗೆಲ್ಲಲೇಬೇಕಾದ ಸಿನಿಮಾ. ಇದು ಚಾಲೆಂಜಿಂಗ್ ಸ್ಟಾರ್ ಗೂ ಹ್ಯಾಟ್ರಿಕ್ ಚಾಲೆಂಜ್. ['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]
'ಬೃಂದಾವನ' ಮತ್ತು 'ಅಂಬರೀಶ' ಎರಡೂ ಸಿನಿಮಾಗಳಲ್ಲಿ ದರ್ಶನ್ ನಿರಾಶೆ ಮೂಡಿಸಿದ್ದಾರೆ. 'ಬುಲ್ ಬುಲ್' ನಂತರ ಮತ್ತೊಂದು ಬಾಕ್ಸಾಫೀಸನ್ನ ದೋಚುವಂತಹ ಪರ್ಫಾಮೆನ್ಸ್ ದರ್ಶನ್ ರಿಂದ ಬರಬೇಕಾಗಿದೆ. ಐರಾವತ ಸೋತ್ರೆ ದರ್ಶನ್ ಗೆ ಇದು ಹ್ಯಾಟ್ರಿಕ್ ಸೋಲು. [ಅಂಬರೀಶ ಚಿತ್ರ ವಿಮರ್ಶೆ]
ಏನೇ ಗಾಸಿಪ್ ಗುಮ್ಮಗಳಿದ್ರೂ ದರ್ಶನ್ ಮತ್ತು ಅರ್ಜುನ್ ಸಿನಿಮಾವನ್ನ ಎಚ್ಚರಿಕೆಯಿಂದ ರೆಡಿಮಾಡ್ತಿದ್ದಾರೆ. ಸದಾ ವಿವಾದಗಳಿಂದ್ಲೇ ಸದ್ದು ಮಾಡೋ ಈ ಸೂಪರ್ ಹಿಟ್ ನಿರ್ದೇಶಕ ಹಾಗೂ ಸ್ಟಾರ್ ನಟರ ಕಾಂಬಿನೇಷನ್ ನಲ್ಲಿ ಐರಾವತ ಹೇಗಿರುತ್ತೆ ಅನ್ನೋ ಕುತೂಹಲವಷ್ಟೇ ಎಲ್ಲರ ಮುಂದಿದೆ.