Don't Miss!
- News Karnataka rain: ಗುಡುಗು, ಸಿಡಿಲು ಬಡಿತದಿಂದ ರಕ್ಷಣೆ ಪಡೆಯಲು ಏನೇನು ಮಾಡಬೇಕು? ಸಲಹೆಗಳು ಇಲ್ಲಿವೆ
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಂಡೆ' ಚಿತ್ರಕ್ಕೆ ದರ್ಶನ್ ಅಥವಾ ಸುದೀಪ್ ಹೀರೋ
ಸುಪಾರಿ ಕಿಲ್ಲರ್ ಮುನ್ನಾ ಎನ್ ಕೌಂಟರ್ ವೇಳೆ ಮೃತಪಟ್ಟ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತ 'ಬಂಡೆ' ಅನ್ನೋ ಸಿನಿಮಾ ತಯಾರಾಗಲಿದೆ. ಚಿತ್ರದ ಕಥೆ ಚಿತ್ರಕಥೆ ಈಗಾಗಲೇ ತಯಾರಾಗ್ತಿದ್ದು ಮಂಜುನಾಥ ಗೊಂಡಬಾಳ ಅನ್ನೋರು ಚಿತ್ರ ಮಾಡೋಕೆ ತಯಾರಿ ನಡೆಸಿದ್ದಾರೆ.
ಚಿತ್ರವನ್ನು ಒಂದು ಕೋಟಿ ಬಜೆಟ್ ನಲ್ಲಿ ತಯಾರಾಗಲಿದ್ದು ಚಿತ್ರಕ್ಕಾಗಿ ಪ್ರತಿಭಾನ್ವಿತ ನಿರ್ದೇಶಕರ ಹುಡುಕಾಟದಲ್ಲಿದ್ದಾರಂತೆ. ಚಿತ್ರದ ಶೂಟಿಂಗ್ ಸೂಪರ್ ಕಾಪ್ ಮಲ್ಲಿಕಾರ್ಜುನ ಬಂಡೆ ಬೆಳೆದ ರಾಯಚೂರು, ಗುಲ್ಬರ್ಗ, ಮಸ್ಕಿ, ಹೈದರಾಬಾದ್ ಹಾಗೂ ಬೆಂಗಳೂರುಗಳಲ್ಲಿ ನಡೆಯಲಿದೆಯಂತೆ. [ಪಿಎಸ್ಸೈ ಬಂಡೆ ಸಾವಿಗೆ ಕಾರಣವಾದ ಪಾತಕಿ ಇವನೇ]
'ಬಂಡೆ' ಅನ್ನೋ ಟೈಟಲ್ ಗೆ "ಕರ್ನಾಟಕದ ರಿಯಲ್ ಸಿಂಗಂ" ಅನ್ನೋ ಟ್ಯಾಗ್ ಲೈನ್ ಕೊಟ್ಟಿರೊ ನಿರ್ಮಾಪಕರು ಬಂಡೆಯ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶರ್ ರಿಗೆ ಸೂಟಾಗುತ್ತೆ. ಇಲ್ಲದಿದ್ರೆ ಸುದೀಪ್ ರನ್ನು ಸಂಪರ್ಕಿಸ್ತೀವಿ ಅಂದಿದ್ದಾರೆ.
ಆದರೆ ಪಾಪ ಒಂದು ಕೋಟಿಯಲ್ಲಿ ಚಿತ್ರ ಮಾಡೋಕೆ ಹೊರಟಿರೋ ನಿರ್ಮಾಪಕರಿಗೆ ಗೊತ್ತಿಲ್ಲ ಅನ್ನಿಸುತ್ತೆ ದರ್ಶನ್, ಸುದೀಪ್ ಸಂಭಾವನೆಯಲ್ಲಿ ಅಂತಹಾ ನಾಲ್ಕು ಬಂಡೆ ಸಿನಿಮಾ ಮಾಡ್ಬಹುದು ಅಂತ. 'ಬಂಡೆ' ಚಿತ್ರಕ್ಕೆ ನಾಯಕ ನಟನಾಗಿ ಸಾಯಿಕುಮಾರ್ ಬಂದರೂ ಅಚ್ಚರಿಯಿಲ್ಲ.