Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ 'ಅಂಬರೀಶ'ನಿಗೆ ಥಿಯೇಟರ್ ಸಮಸ್ಯೆ?
'ಬಾಕ್ಸಾಫೀಸ್ ಸುಲ್ತಾನ್' ಅಂತ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ 'ದರ್ಶನ್'ಗೆ ಇಂದು ಥಿಯೇಟರ್ ಗಳು ಸಿಕ್ತಿಲ್ಲ ಅಂದ್ರೆ ನೀವು ನಂಬಲೇಬೇಕು. ನಾಡಪ್ರಭು ಕೆಂಪೇಗೌಡನ ಕಥೆಯನ್ನ ಹೇಳುವುದಕ್ಕೆ ಹೊರಟಿರುವ 'ಅಂಬರೀಶ'ನಿಗೆ ಕೆ.ಜಿ.ರೋಡ್ ನಲ್ಲೇ ಥಿಯೇಟರ್ ಸಿಕ್ತಿಲ್ಲ ಅನ್ನೋದು ಗಾಂಧಿನಗರದ ದುರಂತ! [ನವೆಂಬರ್ 20ಕ್ಕೆ ಅಂಬರೀಶ ರಿಲೀಸ್]
ಗಾಂಧಿನಗರದಲ್ಲಿರುವ
ಥಿಯೇಟರ್
ಗಳೇ
ಮೂರು
ಮತ್ತೊಂದು.
ಅಂತದ್ರಲ್ಲಿ
ಸಾಗರ್
ಸೇರಿದಂತೆ
ಕೆಲ
ಥಿಯೇಟರ್
ಗಳು
ನೆಲಕಚ್ಚಿವೆ.
ನರ್ತಕಿ
ಚಿತ್ರಮಂದಿರದಲ್ಲಿ
'ಬಹದ್ದೂರ್'
ಆರ್ಭಟ
ಜೋರಾಗಿದ್ರೆ,
ಸಂತೋಷ್
ನಲ್ಲಿ
'ಪವರ್'
ಕಟ್
ಆಗಿಲ್ಲ.
'ಅಭಿಮನ್ಯು'
ಅನುಪಮಾ
ಜೊತೆಯಲ್ಲೇ
ಸಾಗ್ತಿದ್ರೆ,
ಭೂಮಿಕಾ
ದಲ್ಲಿ
ಅಣ್ಣಾವ್ರ
'ಕಸ್ತೂರಿ
ನಿವಾಸ'
ಮಿಂಚ್ತಿದೆ.
ಎಲ್ಲಾ ಚಿತ್ರಗಳ ಕಲೆಕ್ಷನ್ ಚೆನ್ನಾಗಿರುವುದರಿಂದ ಯಾರೂ ಥಿಯೇಟರ್ ಬಿಟ್ಟುಕೊಡುವುದಕ್ಕೆ ರೆಡಿಯಿಲ್ಲ. ''ಮೇನ್ ಥಿಯೇಟರ್ ಸಿಗ್ಲಿಲ್ಲ ಅಂದ್ರೇನು. ಕೆ.ಜಿ.ರೋಡ್ ನಲ್ಲಿ ರಿಲೀಸ್ ಮಾಡದೆ, ಬೇರೆಲ್ಲಾ ಕಡೆ ರಿಲೀಸ್ ಮಾಡ್ತೀವಿ'' ಅಂತ 'ಅಂಬರೀಶ' ರಿಲೀಸ್ ಜವಾಬ್ದಾರಿ ಹೊತ್ತಿರುವ ಮಲ್ಲಿಕಾರ್ಜುನ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ತಿಳಿಸಿದರು.
''ಏನೇ ಆದ್ರೂ ನವೆಂಬರ್ 20ಕ್ಕೆ 'ಅಂಬರೀಶ' ಬಿಡುಗಡೆಯಾಗ್ತಿದೆ. ಯಾವುದೇ ತೊಂದರೆಯಿಲ್ಲ. ಮೇನ್ ಥಿಯೇಟರ್ ಸಿಗಲಿ ಬಿಡಲಿ, ನಾವು ಎಲ್ಲದಕ್ಕೂ ರೆಡಿಯಿದ್ದೀವಿ'' ಅಂತ ನಿರ್ದೇಶಕ ಮಹೇಶ್ ಸುಖಧರೆ ಎನ್ನುತ್ತಾರೆ.
ಥಿಯೇಟರ್ ಸಮಸ್ಯೆಯನ್ನ ಬಗೆಹರಿಸುವುದಕ್ಕೆ ಮಹೇಶ್ ಸುಖಧರೆ ಈಗಾಗಲೇ ಅಂಬಿ ಮನೆಗೆ ತೆರಳಿದ್ದಾರೆ. 'ಅಂಬರೀಶ' ದರ್ಬಾರ್ ಸುಗಮವಾಗಿ ನಡೆಯೋಕೆ ಅಂಬಿ ಏನು ನಿರ್ಧಾರ ಕೈಗೊಳ್ತಾರೋ? ಗುರುರಾಯರೇ ಆಶೀರ್ವಾದ ಮಾಡ್ಬೇಕು! (ಫಿಲ್ಮಿಬೀಟ್ ಕನ್ನಡ)