Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಕೃಷ್ಣ, ಅಲ್ಲು ಅರ್ಜುನ್ ಮಲ್ಟಿ ಸ್ಟಾರ್ ಸಿನಿಮಾ ಬರಲಿದೆಯೇ?
ಸಿನಿಮಾ ರಂಗದಲ್ಲಿ ಸ್ಟಾರ್ ನಟರುಗಳು ಒಟ್ಟಿಗೆ ಸಿನಿಮಾ ಮಾಡುವುದು ಅಪರೂಪ. ಹಾಗಾಗಿ ಹೆಚ್ಚೆಚ್ಚು ಮಲ್ಟಿ ಸ್ಟಾರ್ ಸಿನಿಮಾಗಳು ಬರುವುದಿಲ್ಲ. ಹಾಗೇನಾದರು ಸಿನಿಮಾ ಬರ್ತಿದೆ ಅಂದರೆ ಅದು ಸಿಕ್ಕಾಪಟ್ಟೆ ದಾಖಲೆ ಆಗುತ್ತದೆ. ಈಗ ಆರ್ಆರ್ಆರ್ ಚಿತ್ರದಲ್ಲಿ ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಒಂದಾಗಿದ್ದಾರೆ. ಅಂತೆಯೇ ಈ ಚಿತ್ರದಲ್ಲಿ ಈಗ ಮತ್ತೊಂದು ಟಾಲಿವುಡ್ ಸೂಪರ್ ಸ್ಟಾರ್ ಜೋಡಿ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದೆ.
RRR ಬಳಿಕ BBB ಚಿತ್ರ ಬರಲಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಾ ಇದೆ. ಹೌದು ಮತ್ತೊಬ್ಬ ಸ್ಟಾರ್ ನಿರ್ದೇಶಕನ ಡೈರೆಕ್ಷನ್ನಲ್ಲಿ ಇಬ್ಬರು ಟಾಲಿವುಡ್ ಸ್ಟಾರ್ಗಳು ಅಭಿನಸುತ್ತಾರೆ ಎನ್ನಲಾಗಿದೆ. ಬಿಬಿಬಿ ಎಂದರೆ ನಿರ್ದೇಶಕ ಬೊಯಪಾಟಿ ಶ್ರೀನು, ಬನ್ನಿ ಮತ್ತು ಬಾಲಯ್ಯ ಎಂದರ್ಥ.
ಸದ್ಯ ಬಾಲಯ್ಯ ಮುತ್ತು ಬನ್ನಿ ಅಂದರೆ ಅಲ್ಲು ಅರ್ಜುನ್ ಇಬ್ಬರು ನಟರು ಕೂಡ ತಮ್ಮ ಸಿನಿಮಾಗಳ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಈ ಜೋಡಿ ತೆರೆಯ ಮೇಲೆ ಒಂದಾಗಿ ಸಿನಿಮಾ ಮಾಡುತ್ತಾರೆ ಅಂದರೆ ಅದು ಅವರ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ ಸಂತಸವೇ ಸರಿ. ಈ ವಿಚಾರ ಹೊರ ಬಂದಿದ್ದು ಹೇಗೆ ಎನ್ನುವುದನ್ನು ಮುಂದೆ ಓದಿ...
ಒಂದೇ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಬರ್ತಾರಾ?
ಅಷ್ಟಕ್ಕೂ ಈ ಸುದ್ದಿ ಹರಿದಾಡಲು ಕಾರಣ ನಿರ್ದೇಶಕ ಬೊಯಪಾಟಿ ಶ್ರೀನು. ಯಾಕೆಂದರೆ ಈ ಬೊಯಪಾಟಿ ಶ್ರೀನು ಮುಂದಿನ ಚಿತ್ರವನ್ನು ಬಾಲಯ್ಯ ಅವರಿಗೆ ಮಾಡಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ಇತ್ತ ಅಲ್ಲು ಅರ್ಜುನ್ಗೂ ಕೂಡ ಶ್ರೀನು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಚಿತ್ರದ ಮಾತು ಕಥೆ ಮುಗಿದು, ಅದು ಕೂಡ ಫೈನಲ್ ಆಗಿದೆಯಂತೆ. ಇಬ್ಬರು ನಟರ ಚಿತ್ರಕ್ಕೆ ಒಬ್ಬ ನಿರ್ದೇಶಕನ ಹೆಸರು ಕೇಳಿ ಬರುತ್ತಾ ಇರುವ ಕಾರಣಕ್ಕೆ, ಇದು ಒಂದೆ ಚಿತ್ರ ಇರಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ.
ಅಲ್ಲು ಅರ್ಜುನ್ ಕುಟುಂಬಕ್ಕೆ ಬಾಲಯ್ಯ ಹೆಚ್ಚು ಆಪ್ತ!
ಇನ್ನು ನಟ ಬಾಲಯ್ಯ ಅಲ್ಲು ಅರ್ಜುನ್ ಕುಟುಂಬದ ಗೀತಾ ಆರ್ಟ್ಸ್ ನಿರ್ಮಾಣ ಸಂಸ್ಥೆಗೆ ಹೆಚ್ಚು ಹತ್ತಿರ ಆಗಿದ್ದಾರೆ. ಅಲ್ಲು ಅರ್ಜುನ್ ಕುಟುಂಬ ಒಟಿಟಿ 'ಆಹಾ'ದಲ್ಲಿ ಕಾರ್ಯಕ್ರಮ ನಿರೂಪಕರಾಗಿ ದಾಖಲೆ ಕೂಡ ಮಾಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ಅವರ ನಡುವೆ ಉತ್ತಮ ಬಾಂಧವ್ಯ ಇದ್ದೇ ಇದೆ. ಪುಷ್ಪ ಚಿತ್ರ ಕಾರ್ಯಕ್ರಮಗಳಲ್ಲಿ ಬಾಲಕೃಷ್ಣ ಭಾಗಿ ಆದರೆ, ಅಖಂಡ ಚಿತ್ರದ ಕಾರ್ಯಕ್ರಮಗಳಲ್ಲಿ ನಟ ಅಲ್ಲು ಅರ್ಜುನ್ ಭಾಗಿ ಆಗಿ ಬಾಲಯ್ಯ ಅವರಿಗೆ ಸಾಥ್ ನೀಡಿದ್ದಾರೆ.
ಬಾಕ್ಸಾಫೀಸ್ನಲ್ಲಿ ದಾಖಲೆ ಮಾಡಿರುವ ಪುಷ್ಪ, ಅಖಂಡ!
ಲಾಕ್ ಡೌನ್ ಕೊರೊನಾ ಹಾವಳಿ ಕಡಿಮೆ ಆದ ಬಳಿಕ ರಿಲೀಸ್ ಆದ ಅಖಂಡ ಚಿತ್ರ ಧೂಳೆಬ್ಬಿಸಿತು. ಚಿತ್ರ ಮಂದಿರಕ್ಕೆ ಮಾಸ್ ಪ್ರೇಕ್ಷಕರನ್ನು ಕರೆತರುವಲ್ಲಿ ಯಶಸ್ವಿ ಆಗಿತ್ತು. ಅಖಂಡ ಚಿತ್ರಕ್ಕೆ ಆರಂಭದಲ್ಲೇ ಉತ್ತಮ ರೆಸ್ಪಾನ್ಸ್ ಸಿಕ್ಕಿತು. ಬಿಗ್ ಓಪನಿಂಗ್ ಪಡೆದ ಅಖಂಡ ಬಾಕ್ಸಾಫೀಸ್ ಕೋಟಿ, ಕೋಟಿ ಗಳಿಕೆ ಮಾಡಿದೆ. ಅಖಂಡ ಚಿತ್ರದ ಬಳಿಕ ರಿಲೀಸ್ ಆದ 'ಪುಷ್ಪ' ಚಿತ್ರ ಕೂಡ ಬಾಕ್ಸಾಫೀಸ್ನಲ್ಲಿ ಉತ್ತಮ ದಾಖಲೆ ಬರೆದಿದೆ. ರಿಲೀಸ್ ಆಗಿ ನಾಲ್ಕನೇ ವಾರಕ್ಕೆ 350 ಕೋಟಿ ರೂ. ಗೂ ಅಧಿಕ ಮೊತ್ತ ಕಲೆ ಹಾಕಿದೆ.
ಇಬ್ಬರಿಗೂ ಸಕ್ಸಸ್ ಕೊಟ್ಟ ನಿರ್ದೇಶಕ ಶ್ರೀನು!
ಇನ್ನು ಈ ಸುದ್ದಿ ಹೊರ ಬರುತ್ತಲೇ, ಅಭಿಮಾನಿಗಳು ಇವರ ಕಾಂಬಿನೇಷನ್ ಚಿತ್ರದ ಬಗ್ಗೆ ಯೋಚಿಸಲು ಆರಂಭಿಸಿದ್ದಾರೆ. ಇಬ್ಬರು ಒಂದಾದರೆ ಸಕ್ಸಸ್ ಪಕ್ಕಾ ಎನ್ನುತ್ತಿದ್ದಾರೆ. ಈ ಹಿಂದೆ ಬೊಯಪಾಟಿ ಶ್ರೀನು ಅಲ್ಲು ಅರ್ಜುನ್ಗಾಗಿ 'ಸರೈನೊಡು', ಬಾಲಯ್ಯನಿಗಾಗಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ. ಅದರಲ್ಲಿ ಅಖಂಡ ಕೂಡ ಒಂದು, ಮುಂದೆ NBK ಚಿತ್ರವನ್ನೂ ಕೂಡ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ.