Don't Miss!
- News ಕಾಂಗ್ರೆಸ್ ಸರ್ಕಾರ ನೀಡಿತ್ತು ಖಾಲಿ ಚೊಂಬು; ಮೋದಿ ಅದನ್ನು ಅಕ್ಷಯವನ್ನಾಗಿಸಿದ್ದಾರೆ: ಎಚ್ಡಿಡಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರ್ಷ ನಿರ್ದೇಶನದ 'ರಾಣ' ಚಿತ್ರವನ್ನು ಮಾಡಲ್ಲ ಅಂದ್ರಾ ಯಶ್?
Recommended Video
ಎಷ್ಟೋ ಬಾರಿ ಸಿನಿಮಾಗಳು ಶುರುವಿಗೆ ಮುಂಚೆ ದೊಡ್ಡ ಸುದ್ದಿ ಮಾಡುತ್ತವೆ. ಆದರೆ, ಏನೋ ಒಂದು ಕಾರಣಕ್ಕೆ ಸಿನಿಮಾ ನಿಂತು ಹೋಗುತ್ತದೆ. ಅದೇ ರೀತಿ ಈಗ 'ರಾಣ' ಸಿನಿಮಾ ಠುಸ್ ಪಟಾಕಿ ಆಗಿದೆ ಎನ್ನವ ಮಾತು ಕೇಳಿ ಬರುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ದೇಶಕ ಎ ಹರ್ಷ ಕಾಂಬಿನೇಶನ್ ನಲ್ಲಿ ಬರಬೇಕಿದ್ದ ಸಿನಿಮಾವೇ 'ರಾಣ'. ಈ ಚಿತ್ರ ಯಶ್ ಮುಂಬರುವ ಸಿನಿಮಾಗಳ ಪಟ್ಟಿಯಲ್ಲಿ ಇತ್ತು. ಆದರೆ, ಇದೀಗ ಈ ಸಿನಿಮಾ ಶುರು ಆಗುವುದೇ ಅನುಮಾನವಾಗಿದೆ.
'ಸೀತಾರಾಮ ಕಲ್ಯಾಣ' ರೀಮೇಕ್ ? : ಪತ್ರಕರ್ತೆ ಪ್ರಶ್ನೆಗೆ ಹರ್ಷ ತಬ್ಬಿಬ್ಬು!
ಈ ಚಿತ್ರದ ಮೂಲಕ ಮೊದಲ ಬಾರಿಗೆ ಯಶ್ ಗೆ ಹರ್ಷ ನಿರ್ದೇಶನ ಮಾಡಬೇಕಿತ್ತು. ಸಿನಿಮಾದ ಫ್ಯಾನ್ ಮೇಡ್ ಪೋಸ್ಟರ್ ಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇಷ್ಟೆಲ್ಲಾ ಆಗಿದ್ದರು, ಈ ಸಿನಿಮಾವನ್ನು ಯಶ್ ಮಾಡುತ್ತಿಲ್ಲ ಎಂಬ ಗುಸು ಗುಸು ಇದೀಗ ಹರಿದಾಡಿದೆ. ಹಾಗಿದ್ದರೆ, ಅದಕ್ಕೆ ಕಾರಣಗಳು ಏನಿರಬಹುದು ಎಂಬ ಪ್ರಶ್ನೆ ಮೂಡಿದೆ. ಮುಂದೆ ಓದಿ..
'ಸೀತಾರಾಮ ಕಲ್ಯಾಣ' ಎಫೆಕ್ಟ್
ಹರ್ಷ ನಿರ್ದೇಶನದಲ್ಲಿ ಬಂದ 'ಸೀತಾರಾಮ ಕಲ್ಯಾಣ' ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಬಿಡುಗಡೆಗೆ ಮೊದಲ ಕೊಂಚ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ರಿಲೀಸ್ ಬಳಿಕ ಅನೇಕರಿಗೆ ನಿರಾಸೆ ಮಾಡಿತು. ಅಲ್ಲದೆ, ಈ ಸಿನಿಮಾ ತೆಲುಗಿನ 'ರರಾಂಡೋಯ್ ವೇಡುಕ ಚೂದ್ದಂ' ಚಿತ್ರದ ಅನೇಕ ದೃಶ್ಯಗಳಿಗೆ ಹೋಲುತಿದೆ ಎಂಬ ದೂರ ಕೂಡ ಬಂದಿತ್ತು.
'ಕೆಜಿಎಫ್' ಸೃಷ್ಟಿಸಿದ ಮೈಲಿಗಲ್ಲು
'ಕೆಜಿಎಫ್' ಸಿನಿಮಾ ಬಳಿಕ ಯಶ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ಬದಲಾಗಿವೆ. ಒಂದು ದೊಡ್ಡ ಸಿನಿಮಾ ನೀಡಿದ ನಂತರ ಅದಕ್ಕಿಂತ ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಭಾವನೆ ಯಶ್ ಆವರದ್ದಾಗಿರಬಹುದು. ಸಿನಿಮಾದಿಂದ ಸಿನಿಮಾಗೆ ಎತ್ತರಕ್ಕೆ ಹೋಗುವುದು ಕಲಾವಿದನ ಆಸೆ ಆಗಿರುತ್ತದೆ ಕೂಡ. ಆ ಕಾರಣ 'ರಾಣ' ಬಗ್ಗೆ ಯಶ್ ಗೆ ಮನಸ್ಸು ಇಲ್ಲದೆ ಇರಬಹುದು.
'ರಾಣ' ಆಗ್ತಾರಾ ಶಿವಣ್ಣ
ಯಶ್ ನಿರಾಕರಿಸಿದ 'ರಾಣ' ಸಿನಿಮಾಗೆ ಶಿವರಾಜ್ ಕುಮಾರ್ ದಿಕ್ಕು ತೋರಿಸುತ್ತಾರ ಎನ್ನುವ ಕುತೂಹಲ ಮತ್ತೊಂದು ಕಡೆ ಇದೆ. ಶಿವರಾಜ್ ಕುಮಾರ್ ಜೊತೆಗೆ ಹರ್ಷ ಎರಡು ಸಿನಿಮಾಗಳನ್ನು ಮಾಡಿದ್ದು, 'ರಾಣ' ಹ್ಯಾಟ್ರಿಕ್ ಚಿತ್ರ ಆಗುತ್ತದೆ ಎಂಬ ಸುದ್ದಿ ಇದೆ.
ಹರ್ಷ 9ನೇ ಸಿನಿಮಾ
'ರಾಣ' ಎ ಹರ್ಷ ನಿರ್ದೇಶನದ 9ನೇ ಸಿನಿಮಾವಾಗಿದೆ. 'ಗೆಳೆಯ' ಸಿನಿಮಾ ಮೂಲಕ ನೃತ್ಯ ನಿರ್ದೇಶಕ ಹರ್ಷ ಡೈರೆಕ್ಟರ್ ಆದರು. 'ಬಿರುಗಾಳಿ', 'ಚಿಂಗಾರಿ', 'ಭಜರಂಗಿ', 'ವಜ್ರಕಾಯ', 'ಮಾರುತಿ 800', 'ಅಂಜನೀಪುತ್ರ' ಹಾಗೂ 'ಸೀತಾರಾಮ ಕಲ್ಯಾಣ' ಹರ್ಷ ನಿರ್ದೇಶನದ ಸಿನಿಮಾವಾಗಿವೆ.