Don't Miss!
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- News Namma Metro Blue Line: ಇತರ ಮಾರ್ಗಕ್ಕಿಂತಲೂ 'ನೀಲಿ' ಮಾರ್ಗದಲ್ಲಿ ವೇಗವಾಗಿ ಓಡಲಿವೆ ಮೆಟ್ರೋ, ಅಪ್ಡೇಟ್
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧ್ರುವ ಸರ್ಜಾ ಕೈಯಲ್ಲಿದ್ದ ದೊಡ್ಡ ಪ್ರಾಜೆಕ್ಟ್ ನಿಂತೋಯ್ತಾ.!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಬಿಡುಗಡೆಯ ಸನಿಹದಲ್ಲಿದ್ದು, ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸೌಂಡ್ ಮಾಡ್ತಿದೆ. ಈಗಾಗಲೇ ಟೀಸರ್ ರಿಲೀಸ್ ಮಾಡಿರುವ 'ಭರ್ಜರಿ', ಈಗ ಡೈಲಾಗ್ ಟೀಸರ್ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
'ಭರ್ಜರಿ' ಚಿತ್ರದ ನಂತರ ಧ್ರುವ ಸರ್ಜಾ ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳನ್ನ ಕಾಡುತ್ತಿದೆ. ಈ ಮಧ್ಯೆ 'ಭರ್ಜರಿ' ಹುಡುಗ ಅಭಿನಯಿಸಬೇಕಿದ್ದ ದೊಡ್ಡ ಪ್ರಾಜೆಕ್ಟ್ ವೊಂದು ನಿಂತು ಹೋಗಿದೆ ಎಂಬ ಸುದ್ದಿ ಹೊರಬಿದ್ದಿದೆ.
'ಟೀಸರ್'ನಲ್ಲೇ ಘರ್ಜಿಸಿದ 'ಆಕ್ಷನ್ ಪ್ರಿನ್ಸ್' ಧ್ರುವ
ಹಾಗಿದ್ರೆ, ಧ್ರುವ ಸರ್ಜಾ ಅಭಿನಯಿಸಬೇಕಿದ್ದ ಆ ಬಿಗ್ ಸಿನಿಮಾ ಯಾವುದು? ಯಾವ ಕಾರಣಕ್ಕೆ ನಿಂತಿದೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....
'ಭರ್ಜರಿ' ನಂತರ 'ಹಯಗ್ರೀವ'.!
'ಭರ್ಜರಿ' ಚಿತ್ರದ ನಟ ಧ್ರುವ ಸರ್ಜಾ 'ಹಯಗ್ರೀವ' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಈ ಚಿತ್ರವನ್ನ ನಂದ ಕಿಶೋರ್ ನಿರ್ದೇಶನ ಮಾಡಬೇಕಿತ್ತು. ಆದ್ರೀಗ, ಈ ಸಿನಿಮಾ ನಿಂತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಚಿತ್ರ ನಿಲ್ಲಿಸಲು ಕಾರಣವೇನು?
'ಹಯಗ್ರೀವ' ದೊಡ್ಡ ಪ್ರಾಜೆಕ್ಟ್. ಈ ಚಿತ್ರಕ್ಕಾಗಿ ನಟ ಧ್ರುವ ಸರ್ಜಾ ವೈಯಕ್ತಿಕವಾಗಿ ಸಿದ್ದತೆ ಮಾಡಿಕೊಳ್ಳಬೇಕಿದೆ. ಆದ್ರೆ, ಇನ್ನು 'ಭರ್ಜರಿ' ಸಿನಿಮಾ ಬಿಡುಗಡೆಯಾಗಿಲ್ಲ. ಈ ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಬೇಕಿದೆ. ಇಷ್ಟೆಲ್ಲಾ ಬಿಜಿಯಾಗಿರುವ ಧ್ರುವ ತಮ್ಮ ಪಾತ್ರಕ್ಕೆ ಸಿದ್ದವಾಗಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಸಮಯ ಬೇಕಾಗಿದೆ ಎಂಬ ಕಾರಣಕ್ಕೆ ಸ್ಥಗತಿಗೊಳಿಸಲಾಗಿದೆ ಎನ್ನಲಾಗಿದೆ.
ಹಾಗಿದ್ರೆ, ಧ್ರುವ ಮುಂದಿನ ಸಿನಿಮಾ
ಸದ್ಯ 'ಹಯಗ್ರೀವ' ಚಿತ್ರವನ್ನ ಕೈಬಿಟ್ಟಿರುವ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ನಂದ ಕಿಶೋರ್ ಮತ್ತೊಂದು ಸಿನಿಮಾವನ್ನ ಶುರು ಮಾಡಲಿದ್ದಾರೆ.
'ಪೊಗರು' ಶುರು
ನಂದ ಕಿಶೋರ್ ಮತ್ತು ಧ್ರುವ ಸರ್ಜಾ ಜೋಡಿಯಲ್ಲಿ 'ಪೊಗರು' ಎಂಬ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಸೆಪ್ಟಂಬರ್ 20 ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆಯಂತೆ
'ಹಯಗ್ರೀವ' ಕಥೆಯೇನು?
ನಿರ್ದೇಶಕ ನಂದ ಕಿಶೋರ್ ಅವರು ಸದ್ಯಕ್ಕೆ 'ಹಯಗ್ರೀವ' ಚಿತ್ರವನ್ನ ನಿಲ್ಲಿಸಿದ್ದಾರೆ. ಆದ್ರೆ, ಬೇರೆ ನಾಯಕ ನಟನ ಜೊತೆ ಈ ಚಿತ್ರವನ್ನ ಮಾಡಲಿದ್ದಾರಂತೆ. ಇದಕ್ಕಾಗಿ ನಾಯಕನ ಹುಡುಕಾಟ ಕೂಡ ಶುರು ಮಾಡಿದ್ದಾರೆ ಎನ್ನಲಾಗಿದೆ.