Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್ರ ಸಾಲುಗಳೇ ರಿಜೆಕ್ಟ್ ಆದಾಗ.!
ನಿರ್ದೇಶನಕ್ಕಿಂತ ಗೀತ ಸಾಹಿತ್ಯದಲ್ಲೇ ಯೋಗರಾಜ್ ಭಟ್ ಫೇಮಸ್. 'ಕತ್ತಲಲ್ಲಿ ಕರಡಿಗೆ ಜಾಮೂನು' ತಿನ್ನಿಸುವ ಭಟ್ರು 'ಹಳೆ ಪಾತ್ರೆ, ಹಳೆ ಕಬ್ಣ'ದಂತಹ 'ಎಬಡ ತಬಡ' ಲಿರಿಕ್ಸ್ ಬರೆಯೋದ್ರಲ್ಲಿ ಎತ್ತಿದ ಕೈ.
ಈ ಕಾರಣಕ್ಕೆ ಭಟ್ರ ಪೆನ್ನಿಗೆ ಡಿಮ್ಯಾಂಡ್ ಜಾಸ್ತಿ. ಸಿನಿಮಾದಲ್ಲಿ ಒಂದು ಹಾಡನ್ನಾದರೂ ಭಟ್ರ ಕೈಲಿ ಬರೆಯಿಸಲೇಬೇಕು ಅಂತ ಎಷ್ಟೋ ನಿರ್ಮಾಪಕರು ಮತ್ತು ನಿರ್ದೇಶಕರು ಯೋಗರಾಜ್ ಭಟ್ ಬೆನ್ನ ಹಿಂದೆ ಬಿದ್ದಿದ್ದಾರೆ. ಅಂಥದ್ರಲ್ಲಿ ಇಲ್ಲೊಬ್ಬರು ಭಟ್ರ ಹಾಡನ್ನೇ ರಿಜೆಕ್ಟ್ ಮಾಡಿದ್ದಾರೆ.!
ಯೆಸ್...ದುನಿಯಾ ವಿಜಿ ಅಭಿನಯಿಸುತ್ತಿರುವ 'RX ಸೂರಿ' ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ ಸಾಹಿತ್ಯ ತಿರಸ್ಕೃತವಾಗಿದೆ. 'RX ಸೂರಿ' ಚಿತ್ರದ ಟೈಟಲ್ ಸಾಂಗ್ ನ ಭಟ್ರು ಕೊಂಚ ಡಿಫರೆಂಟ್ ಆಗಿ ಬರೆದಿದ್ದರು. [ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!]
ಅಷ್ಟು ಡಿಫರೆಂಟ್ ಆಗಿರುವ ಸಾಹಿತ್ಯ ನಿರ್ದೇಶಕ ಶ್ರೀ ಜೈಗೆ ಹಿಡಿಸಲಿಲ್ಲವೇನೋ. ಅದಕ್ಕೆ ಆ ಹಾಡನ್ನ ರಿಜೆಕ್ಟ್ ಮಾಡಿ ವಿ.ನಾಗೇಂದ್ರ ಪ್ರಸಾದ್ ಅವರ ಕೈಲಿ ಹೊಸ ಹಾಡು ಬರೆಸಿದರಂತೆ.
ಎಲ್ಲೆಲ್ಲೂ ಭಟ್ಟರ ಪದಗಳೇ ಮೊಳಗುತ್ತಿರುವ ಈಗಿನ ಕಾಲದಲ್ಲಿ ಭಟ್ಟರ ಸಾಲು ಬೇಡ ಅಂದವರಲ್ಲಿ ಬಹುಶಃ ಮೊದಲಿಗರು ಇವರೇ ಇರಬೇಕು.!! ಭಟ್ರ ಪದಪುಂಜ ಇಲ್ಲದೆ 'RX ಸೂರಿ' ಆಡಿಯೋ ಕ್ಲಿಕ್ ಆದ್ರೆ, ಟ್ರೆಂಡ್ ಚೇಂಜ್ ಆಗಬಹುದಾ..??