Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಿರಲೆ ಕದ್ದು ನೊಣ ಮಾಡಿಲ್ಲ: ರಾಜಮೌಳಿ
ಆಸ್ಕರ್ ಗೆ ಕಳಿಸಿದ 'ಬರ್ಫಿ' ಚಿತ್ರವೇ ಹತ್ತು ಹಲವು ಕ್ಲಾಸಿಕ್ ಚಿತ್ರಗಳ ಚಿತ್ರಾನ್ನ ಎಂಬುದು ಜಗಜ್ಜಾಹೀರಾದ ಮೇಲೆ ಬಾಲಿವುಡ್ ಮಂದಿ ದಕ್ಷಿಣದ ನಿರ್ದೇಶಕನ ಚಿತ್ರ ಮೇಲೆ ಕಣ್ಣು ಹಾಕಿದ್ದಾರೆ.
'2010ರಲ್ಲಿ ತೆರೆ ಕಂಡ ಕಾಕ್ರೋಚ್ (Cockroach) ಚಿತ್ರವನ್ನು ನಕಲು ಮಾಡಿಲ್ಲ. 'ಈಗ' ಚಿತ್ರಕಥೆ ಸಂಪೂರ್ಣವಾಗಿ ನೈಜತೆಯಿಂದ ಕೂಡಿದೆ. ಇದಕ್ಕೆ ಜನರೇ ಸಾಕ್ಷಿ ಬೇರೆ ಪುರಾವೆ ಬೇಕಿಲ್ಲ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.
ಉತ್ತರ ಭಾರತದಲ್ಲಿ 'ಈಗ' ಚಿತ್ರದ ಹಿಂದಿ ಅವತರಣಿಕೆಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ರಾಜಮೌಳಿ ಅವರ ಮುಂದೆ ಜಿರಲೆ ಬಿಟ್ಟು ಪತ್ರಕರ್ತರು ಪ್ರಶ್ನೆ ಹಾಕಿದ್ದಾರೆ.
'ಈಗ' ಹಾಗೂ ಕಾಕ್ರೋಚ್ ಎರಡು ಚಿತ್ರಗಳ ಕಥೆಯಲ್ಲಿ ಸಾಮ್ಯತೆ ಇದೆ ನಿಜ. ಆದರೆ, ಈಗ ಕಥೆಯನ್ನು ಕಾಕ್ರೋಚ್ ಗೂ ಮೊದಲೇ ಬರೆಯಲಾಗಿತ್ತು. ಸದ್ಯಕ್ಕೆ ನನ್ನ ಬಳಿ ಪ್ರೂಫ್ ಇಲ್ಲ ಎಂದಿದ್ದಾರೆ.
ಈಗ ಚಿತ್ರದಲ್ಲಿ ನಾಯಕ ಸಾವನ್ನಪ್ಪಿದ ಮೇಲೆ ಪ್ರೀತಿಯನ್ನು ಉಳಿಸಿಕೊಳ್ಳಲು ಹಾಗೂ ವಿಲನ್ ಸಂಹರಿಸಲು ನೊಣ ರೂಪದಲ್ಲಿ ಜನ್ಮತಾಳುತ್ತಾನೆ. ಕಾಕ್ರೋಚ್ ಚಿತ್ರದಲ್ಲೂ ಇದೇ ರೀತಿ ಕಥೆ ಇದ್ದು, ನಾಯಕ ಪ್ರೀತಿಗಾಗಿ ಜಿರಲೆ ರೂಪಧರಿಸುತ್ತಾನೆ. ಎರಡು ಚಿತ್ರಗಳಲ್ಲಿ ವಿಲನ್ ಮೇಲೆ ಅಟ್ಯಾಕ್ ಮಾಡುವ ತಂತ್ರಗಳು ಬಹುತೇಕ ಒಂದೇ ರೀತಿ ಇದೆ ಎಂದು ಹೇಳಲಾಗಿದೆ.
ಈಗ ಚಿತ್ರ ಜನ್ಮ ತಾಳುವ ಮುನ್ನ ಹಲವಾರು ಹಾಲಿವುಡ್ ಅನಿಮೇಷನ್ ಚಿತ್ರಗಳನ್ನು ನೋಡಿದ್ದೆ. ಇದೇ ರೀತಿ 'ರಿವೇಂಜ್ 'ಕಥೆಯುಳ್ಳ ಫ್ಲೂಕ್ ಚಿತ್ರ ಇಷ್ಟವಾಗಿತ್ತು. ಆ ಚಿತ್ರದಲ್ಲಿ ನಾಯಿಯೊಂದು ದ್ವೇಷ ಸಾಧಿಸುವ ಕತೆ ಇದೆ.
ಅಸಲಿಗೆ ಕಾಕ್ರೋಚ್ ಚಿತ್ರವೇ 1995ರಲ್ಲಿ ತೆರೆಕಂಡ ಕಾರ್ಲೊ ಕಾರ್ಲೈ ನಿರ್ದೇಶನದ 'ಫ್ಲೂಕ್' ಚಿತ್ರದ ಕಾಪಿ. 'ಈಗ' ಹಾಗೂ ಕಾಕ್ರೋಚ್ ರಿಮೇಕ್ ಅಥವಾ ನಕಲು ಎನ್ನುವುದು ಸರಿ ಕಾಣುವುದಿಲ್ಲ ಎಂದು ರಾಜಮೌಳಿ ಗರಂ ಆಗಿ ಹೇಳಿದ್ದಾರೆ.
ಈಗ ಚಿತ್ರ ತೆಲುಗು, ತಮಿಳು ಭಾಷೆಯಲ್ಲಿ ಡಬ್ ಆಗಿ ಭರ್ಜರಿ ಯಶಸ್ಸು ತಂದಿದೆ. ಕನ್ನಡದ ಕಿಚ್ಚ ಸುದೀಪ್ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಿಸಿದೆ. ಬಾಲಿವುಡ್ ನಲ್ಲಿ ಮಾತ್ರ ಕೆಲವರು ಕೊಂಕು ಮಾತನಾಡಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿ 'ಮಕ್ಕಿ' ಚಿತ್ರವನ್ನು ಶಾರುಖ್ ಖಾನ್, ಚಿತ್ರ ನಿರ್ಮಾತ ರಾಜು ಹಿರಾನಿ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಕರ್ ರೇಸ್ ನಲ್ಲಿದ್ದ 'ಈಗ' ಬರ್ಫಿ ಹಿಂದಿಕ್ಕುವಲ್ಲಿ ಸೋತಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.