Don't Miss!
- News ರಾಜ್ಯಕ್ಕಾದ ಅನ್ಯಾಯ ಪ್ರಶ್ನಿಸದ ಸಂಸದರನ್ನು ಆಯ್ಕೆ ಮಾಡಬೇಡಿ: ಸಿದ್ದರಾಮಯ್ಯ ಮನವಿ
- Lifestyle ಸರ್ಕಸ್ನಿಂದ ತಪ್ಪಿಸಿಕೊಂಡು ಓಡಿದ ಆನೆ..! ಆಮೇಲೆ ಆಗಿದ್ದೇನು..?
- Automobiles Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Sports T20 World Cup: ಆರಂಭಿಕ ಸ್ಥಾನಕ್ಕಾಗಿ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಪೈಪೋಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಬಳಿ ಬೌನ್ಸ್ ಆದ ಚೆಕ್ಕುಗಳು ಎಷ್ಟಿವೆ ಗೊತ್ತೇ?
ಗಣೇಶ್ ಬಾಯಿಂದ ಈಗ ಉದುರಿರುವ ಅಣಿಮತ್ತುಗಳು ಹೀಗಿವೆ... ಗೆದ್ದ ಖುಷಿಯಲ್ಲಿ ಮತ್ತೆ ಹಳೆ ವಿಷಯಗಳನ್ನು ಕೆದಕಿರುವ ಗಣೇಶ್, "ನಾನು ನನ್ನ ಕೆಲಸವನ್ನು ಸಮರ್ಪಕವಾಗಿ ಮಾಡಿದ್ದೇನೆ. ನಾನು ನಟಿಸಿದ ಚಿತ್ರಗಳ ಸೋಲನ್ನು ನನ್ನ ತಲೆಗೆ ಕಟ್ಟುವುದು ಎಷ್ಟು ಸರಿ? ಬೇರೆ ನಟರಂತೆ ನಾನೂ ನಟನಗೆ ಸಂಭಾವನೆ ಪಡೆಯುತ್ತೇನೆ.
ನನ್ನ ಹತ್ತಿರವೂ ಭಾರಿ ಮೊತ್ತದ ಬೌನ್ಸ್ ಆಗಿರುವ ಚೆಕ್ಕುಗಳಿವೆ. ಆದರೆ ಅದಕ್ಕಾಗಿ ನಾನು ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ಬದಲಿಗೆ ನನ್ನ ಕೆಲಸವನ್ನು ನೀಟಾಗಿ ಮಾಡಿ ಮುಗಿಸುತ್ತಿದ್ದೇನೆ. ಈ ಬಗ್ಗೆ ಯಾರಲ್ಲೋ ಹೇಳಿ ನನ್ನ ಚಿತ್ರಗಳ ನಿರ್ಮಾಪಕರ ಮಾನ ಹರಾಜು ಹಾಕುವ ಕೆಲಸಕ್ಕೆ ಕೈಹಾಕಿಲ್ಲ.
ಬಣ್ಣದ ಲೋಕ ಎಂದ ಮೇಲೆ ಇಲ್ಲಿ ಸೋಲು-ಗೆಲುವು ಸಹಜ. ಅದನ್ನು ಸಮರ್ಥವಾಗಿ ನಿಭಾಯಿಸುವ ಕಲೆ ಕಲಿತಿರಬೇಕಷ್ಟೇ" ಎಂದು ವಿಭಿನ್ನ ರೀತಿಯಲ್ಲಿ ತಮ್ಮದೇ ಆದ ಶಬ್ಧಗಳನ್ನು ಪೋಣಿಸಿ ನುಡಿಮುತ್ತು ಉದುರಿಸಿದ್ದಾರೆ. ಗಣೇಶ್ ಈ ಮಾತಿಗೆ ಗಣೇಶ್ ಈ ಮೊದಲಿನ ಚಿತ್ರಗಳ ನಿರ್ಮಾಪಕರು ತಿರುಗಿ ಬೀಳದಿದ್ದರೆ ಸಾಕು. ಇದು, ಗಣೇಶ್ ಯಾರಿಗೋ ಕೊಟ್ಟ ಉತ್ತರವೆಂದು ಅರಿವಾಗದೇ ಕಾಲುಕೆದರಿ ನಿಂತರೆ ಕಷ್ಟ ಕಷ್ಟ!
ಒಟ್ಟಿನಲ್ಲಿ ಗಣೇಶ್ ಬಾಳಿನಲ್ಲಿ ಕತ್ತಲೆ ಸ್ವಲ್ಪ ಕಾಲ ಕವಿದಿದ್ದ ಕತ್ತಲೆ ಸರಿದು ಮತ್ತೆ ಬೆಳಕು ಮೂಡಲಾರಂಭಿಸಿದೆ. ಈ ಮೊದಲಿನಂತೆ ತಮ್ಮ ಕೆಲಸವನ್ನು ನೀಟಾಗಿ ಮಾಡಿ ಅವರಿವರ ಮಾತಿಗೆ ಹಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದುಬಿಟ್ಟರೆ ಕ್ಷೇಮವೇನೋ. ಅದಕ್ಕಿಂತಲೂ ಹೆಚ್ಚಾಗಿ, ಸಿನಿಮಾಗಳ ಆಯ್ಕೆಯಲ್ಲಿ ಇನ್ನೂ ಹೆಚ್ಚಿನ ಜಾಣತನ ಪ್ರದರ್ಶಿಸಿದರೆ ಗಣೇಶ್ ನಿಜವಾದ ಗೋಲ್ಡನ್ ಸ್ಟಾರ್ ಆಗಿ ಉಳಿಯುವುದರಲ್ಲಿ ಅನುಮಾನವಿಲ್ಲ. (ಒನ್ ಇಂಡಿಯಾ ಕನ್ನಡ)