Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡ್ ಗೊತ್ತಿಲ್ಲ' ಅನ್ನೋಲ್ಲ ಅಂದಿದ್ಯಾಕೆ ರಚಿತಾ?
'ಕನ್ನಡ್ ಗೊತ್ತಿಲ್ಲ' ನಿನ್ನೆಯಷ್ಟೇ ಸೆಟ್ಟೇರಿರುವ ಕನ್ನಡ ಸಿನಿಮಾ. ಹರಿಪ್ರಿಯಾ ನಾಯಕ ನಟಿ ಆಗಿರುವ ಚಿತ್ರಕ್ಕೆ ಆರ್ ಜೆ ಮಯೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಷ್ಯ ಏನಪ್ಪಾ ಅಂದ್ರೆ 'ಕನ್ನಡ್ ಗೊತ್ತಿಲ್ಲ' ಸಿನಿಮಾದಲ್ಲಿ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯ ಮಾಡಬೇಕಿತ್ತು. ಈ ಹಿಂದೆ ರಚಿತಾ ಅವರಿಗೆ ಮಯೂರ್ ಈ ಸಿನಿಮಾ ಕಥೆ ರೀಡಿಂಗ್ ಕೊಟ್ಟಿದ್ದರಂತೆ.
ಆದರೆ ಈಗ ಸಿನಿಮಾದ ನಾಯಕಿ ಬದಲಾಗಿದ್ದಾರೆ. ರಚಿತಾ ಅಭಿನಯಿಸಲ್ಲ ಎಂದಾಗ ಈ ಕಥೆ ಹರಿಪ್ರಿಯಾ ಅವರ ಬಳಿ ಹೋಗಿದೆ ಎನ್ನುವ ಮಾತು ಗಾಂಧಿ ನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ. ಆದರೆ ರಚಿತಾ ಸಿನಿಮಾ ರಿಜೆಕ್ಟ್ ಮಾಡಲು ಕಾರಣವೇನು ಎನ್ನುವುದು ಮಾತ್ರ ತಿಳಿದು ಬಂದಿಲ್ಲ.
'ಕನ್ನಡ್ ಗೊತ್ತಿಲ್ಲ' ಎನ್ನುತ್ತಿದ್ದಾರೆ ಕನ್ನಡ ಹುಡುಗಿ ಹರಿಪ್ರಿಯಾ
ಈ ಹಿಂದೆ ಆರ್ ಜೆ ಮಯೂರ್ 'ರಿಷಭ ಪ್ರಿಯ' ಎನ್ನುವ ಕಿರು ಚಿತ್ರವನ್ನು ನಿರ್ದೇಶನ ಮಾಡಿದ್ದರು ಆಗ ರಚಿತಾ ನಿರ್ಮಾಪಕಿಯಾಗಿ ಮಯೂರ್ ಜೊತೆ ಕೈ ಜೋಡಿಸಿದ್ದರು. ಅದಾದ ನಂತರ ಮಯೂರ್ ರಚ್ಚು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಸುದ್ದಿ ಆಗಿತ್ತು. ಆದರೆ ಈಗ ಅದೇ ಸಿನಿಮಾದಲ್ಲಿ ಹರಿಪ್ರಿಯಾ ಅಭಿನಯ ಮಾಡುತ್ತಿದ್ದಾರೆ.
ಹಾಗಂತ ಮಯೂರ್ ಮತ್ತೆ ರಚಿತಾ ಯಾವುದೇ ರೀತಿ ಜಗಳವಾಗಲಿ, ಒಳ ಮುನಿಸಾಗಲಿ ಮಾಡಿಕೊಂಡಿಲ್ಲ. ಇಬ್ಬರು ತುಂಬಾ ವರ್ಷದಿಂದ ಸ್ನೇಹಿತರಾಗಿದ್ದು ಇಂದಿಗೂ ಅಷ್ಟೇ ಸ್ನೇಹದಿಂದ ಇದ್ದಾರೆ. ಆದರೆ ಸಿನಿಮಾದ ನಾಯಕಿ ಮಾತ್ರ ಬದಲಾಗಿದ್ದಾರೆ.