Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಂಬೆಹುಳಿ ಹಿಂದಿಯಲ್ಲಿ ಪಾನಕವಾಗಲ್ಲ : ಹೇಮಂತ್ ಹೆಗ್ಡೆ
ಕನ್ನಡದ ನಟ ಕಮ್ ನಿರ್ದೆಶಕ ಹೇಮಂತ್ ಹೆಗ್ಡೆ ಅವರು ನಿರ್ದೇಶಿಸಿ, ನಟಿಸಿದ್ದ 'ನಿಂಬೆಹುಳಿ' ಚಿತ್ರ ಕಳೆದ ವರ್ಷ ಸ್ವಲ್ಪ ಸಮಯ ಗಾಂಧಿನಗರದಲ್ಲಿ ಭಾರಿ ಸೌಂಡ್ ಮಾಡಿತ್ತು. ಇದೀಗ ಹೇಮಂತ್ ಹೆಗ್ಡೆ ಅವರು ನನ್ನ 'ನಿಂಬೆಹುಳಿ' ಚಿತ್ರವನ್ನು ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಅಂದಹಾಗೆ ಹೇಮಂತ್ 'ನಿಂಬೆಹುಳಿ' ಯಾರಿಗೆ ಅಷ್ಟೊಂದು ಹುಳಿಯಾಗಿದೆ ಅಂತ ನೀವು ಯೋಚ್ನೆ ಮಾಡುತ್ತಿದ್ದೀರಾ, ಬೇರಾರಿಗೂ ಅಲ್ಲ ಅದು ನಮ್ಮ ಹಿಂದಿ ನಟ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ರಿಯಾಲಿಟಿ ಶೋ ಖ್ಯಾತಿಯ ಕಪಿಲ್ ಶರ್ಮಾರಿಗೆ ನಿಂಬೆಹುಳಿ ರುಚಿಸಿದೆ ಅಂತ ಹೇಮಂತ್ ಕಂಪ್ಲೈಂಟ್.
ಕಪಿಲ್ ಶರ್ಮಾ ಅವರ ಹೊಸ 'ಕಿಸ್ ಕಿಸ್ಕೊ ಪ್ಯಾರ್ ಕರು' ಚಿತ್ರ ನಮ್ಮ ಹೇಮಂತ್ ಅವರ 'ನಿಂಬೆಹುಳಿ' ಚಿತ್ರದ ರಿಮೇಕ್ ಅಂತೆ. ಜೊತೆಗೆ ಕಪಿಲ್ ಶರ್ಮಾ ಅವರು ಈ ಚಿತ್ರದ ರಿಮೇಕ್ ಹಕ್ಕು ನನ್ನಿಂದ ಪಡೆದಿಲ್ಲ ಅಂತ ಹೇಮಂತ್ ಅವರು ಗೋಳೋ ಅಂತ ಅಳುತ್ತಿದ್ದಾರೆ.
ನಿರ್ದೇಶಕ ಕಮ್ ನಟ ಹೇಮಂತ್ ಹೇಳುವ ಪ್ರಕಾರ ಅವರು ತಮಿಳು ನಿರ್ದೇಶಕ ಕೆ.ಮಾದೇಶ್ ಅವರಿಗೆ ಮಾತ್ರ ತಮ್ಮ 'ನಿಂಬೆಹುಳಿ' ರಿಮೇಕ್ ಹಕ್ಕು ನೀಡಿದ್ದು ಬಿಟ್ಟರೆ ಬೇರೆ ಯಾರಿಗೂ ನಾನು ನೀಡಿಲ್ಲ ಅನ್ನುತ್ತಿದ್ದಾರೆ.
ಆದರೆ ಕಪಿಲ್ ಯಾರನ್ನು ಕೇಳಿ ನನ್ನ 'ನಿಂಬೆಹುಳಿ' ಚಿತ್ರವನ್ನು ಅವರು ಯಾಕೆ 'ಕಿಸ್ ಕಿಸ್ಕೊ ಪ್ಯಾರ್ ಕರು' ಅಂತ ಮಾಡಿಕೊಂಡಿದ್ದಾರೆ ಅಂತ ಹೇಮಂತ್ ಹೆಗ್ಡೆಯವರು ಬಾಯಿ ಬಾಯಿ ಬಡ್ಕೋತಾ ಇದ್ದಾರೆ.
ಆದರೆ ಮೂಲಗಳ ಪ್ರಕಾರ ಆ ಥರ ಏನೂ ಇಲ್ಲ ಹೇಮಂತ್ ಸುಖಾ-ಸುಮ್ಮನೆ ಸುದ್ದಿ ಮಾಡುತ್ತಿದ್ದಾರೆ ಅಂತ ಕೆಲವಾರು ಬಲ್ಲವರು ಮಾತನಾಡುತ್ತಿದ್ದಾರೆ.
ಈ ಮೊದಲು ಪಕ್ಕಾ ಕಾಮಿಡಿ ಚಿತ್ರವಾದ 'ನಿಂಬೆಹುಳಿ' ಚಿತ್ರದ ಬಿಡುಗಡೆಗೂ ಮೊದಲು ಚಿತ್ರದ ಪೋಸ್ಟರ್ ಮೂಲಕ ನಟ ಹೇಮಂತ್ ಹೆಗ್ಡೆ ಅವರು ಭಾರಿ ಸುದ್ದಿಯಾಗಿದ್ದರು. ಇದೀಗ 'ನಿಂಬೆಹುಳಿ' ಕದ್ದಿದ್ದಾರೆ ಅಂತ ಸುದ್ದಿ ಮಾಡುತ್ತಿದ್ದಾರೆ. [ಚಾಪ್ಲಿನ್ ಚಿತ್ರಗಳ ಸಾಲಿನಲ್ಲಿ ಹೇಮಂತ್ 'ನಿಂಬೆಹುಳಿ']
ಅದೇನೇ ಇರಲಿ 'ನಿಂಬೆಹುಳಿ' ನಂತರ ಗಾಂಧಿನಗರದಲ್ಲಿ ಪತ್ತೆ ಇಲ್ಲದ ಹೇಮಂತ್ ಈ ಮೂಲಕನಾದ್ರೂ ಸುದ್ದಿಯಾಗಿ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದಾರಲ್ಲ ಅಂತ ಅಲ್ಲಲ್ಲಿ ಕೆಲವು ಮಾತುಗಳು ಕೇಳಿ ಬರುತ್ತಿವೆ.