Don't Miss!
- News ಬಿಎಸ್ವೈ ಹಾಗೂ "ಆ" ಮಹಾನ್ ನಾಯಕನಿಂದಲೇ ಮಗನಿಗೆ ಚಿತ್ರದುರ್ಗ ಬಿಜೆಪಿ ಟಿಕೆಟ್ ತಪ್ತು: ಹೊಳಲ್ಕೆರೆ ಶಾಸಕ
- Automobiles Honda: ಭಾರತದಲ್ಲಿ ಹೋಂಡಾ ಹೊಸ ಮೈಲಿಗಲ್ಲು: ಎಷ್ಟು ಮಂದಿಯ ಬಳಿ ಆಕ್ಟೀವಾ, ಶೈನ್ ಇದೆ ಹೇಳಿ?
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಚ್ಛೇದನದ ಬಳಿಕ ಸಮಂತಾಗೆ ನಾಗಚೈತನ್ಯ ಎದುರು ಸಿಕ್ಕಾಗ ಏನಾಯಿತು? ಮಾತುಕತೆ ಆಯ್ತಾ?
ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಬೇರೆಯಾದಲ್ಲಿಂದ ಮುಖಾ ಮುಖಿ ಭೇಟಿಯಾಗುವ ಸಂದರ್ಭ ಎದುರಾಗಿರಲಿಲ್ಲ. ಆದ್ರೀಗ ಇವರಿಬ್ಬರೂ ಡಿವೋರ್ಸ್ ಅನೌನ್ಸ್ ಮಾಡಿ ಮೂರು ತಿಂಗಳ ಬಳಿಕ ಭೇಟಿಯಾಗುವ ಸಂದರ್ಭ ಎದುರಾಗಿತ್ತು ಎಂದು ಟಾಲಿವುಡ್ನಲ್ಲಿ ಗುಸು ಗುಸು ಹಬ್ಬಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಭಿನ್ನಾಭಿಪ್ರಾಯಗಳಿಂದ ಬೇರೆಯಾದಾಗ ಇಬ್ಬರೂ ನೊಂದುಕೊಂಡಿದ್ದರು. ಹೀಗಾಗಿ ಸಮಂತಾ ಹಾಗೂ ನಾಗಚೈತನ್ಯ ಮುಖಾಮುಖಿಯಾದಾಗ ಸಂದರ್ಭದ ಬಗ್ಗೆ ಟಾಲಿವುಡ್ನಲ್ಲಿ ಗುಸು ಗುಸು ಹಬ್ಬಿದೆ.
ಸಿನಿಮಾ ಇಂಡಸ್ಟ್ರಿ ಅಂದಮೇಲೆ ಇಬ್ಬರನ್ನೊಬ್ಬರು ನೋಡದೆ ಇರಲು ಸಾಧ್ಯವೇ ಇಲ್ಲ. ಯಾವುದಾರೂ ಕೆಲಸಕ್ಕೆ ಒಂದೆಡೆ ಸೇರಬೇಕಾಗುವ ಸಂದರ್ಭ ಬರಬಹುದು. ಆಗ ಇಬ್ಬರೂ ತಮ್ಮ ನಡುವಿನ ಇದ್ದ ಕೋಪವನ್ನು ಮರೆತು ಒಂದು ಮುಗುಳುನಗೆಯನ್ನಾದರೂ ನೀಡಬೇಕಾಗುತ್ತದೆ. ಇಂತಹ ಸಂದರ್ಭ ವಿಚ್ಛೇದನ ನೀಡಿದ ಮೂರು ತಿಂಗಳ ಬಳಿಕವೇ ಎದುರಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಟಾಲಿವುಡ್ನಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮುಖಾ ಮುಖಿಯಾದ ಬಗ್ಗೆ ಹರಿದಾಡಿದ ಸುದ್ದಿ ಏನು ತಿಳಿಯಲು ಮುಂದೆ ಓದಿ...
ಸ್ಯಾಮ್-ಚೈ ಫೇಸ್ ಟು ಫೇಸ್
ಟಾಲಿವುಡ್ನಲ್ಲಿ ಗುಲ್ಲೆದ್ದಿರುವ ಸಂಗತಿ ಏನಪ್ಪಾ ಅಂದರೆ, ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಇತ್ತೀಚೆಗೆ ಮುಖಾ ಮುಖಿಯಾಗುವ ಸಂದರ್ಭ ಎದುರಾಗಿತ್ತು. ತೆಲುಗು ಮಾಧ್ಯಮಗಳ ವರದಿ ಪ್ರಕಾರ, ಸಮಂತಾ ಹಾಗೂ ನಾಗಚೈತನ್ಯ ಒಂದೇ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರೂ ಎದುರಾಗ ಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು ಎಂದು ಟಾಲಿವುಡ್ ವೆಬ್ ಸೈಟ್ಗಳು ವರದಿ ಮಾಡಿವೆ.
ಬಂಗಾರರಾಜು Vs ಯಶೋಧ
ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಮುಖಾ ಮುಖಿಯಾಗಿದ್ದು ರಾಮನಾಯ್ಡು ಸ್ಟುಡಿಯೋದಲ್ಲಿ. ನಾಗಚೈತನ್ಯ 'ಬಂಗಾರರಾಜು' ಚಿತ್ರದ ಶೂಟಿಂಗ್ನಲ್ಲಿ ನಿರತರಾಗಿದ್ದರು. ಇತ್ತ ಸಮಂತಾ ಕೂಡ ದ್ವಿಭಾಷಾ ಸಿನಿಮಾ 'ಯಶೋಧ' ಶೂಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ವಿಚ್ಛೇದನದ ಬಳಿಕ ಇಬ್ಬರೂ ಕೆಲಸದ ನಿಮಿತ್ತ ಒಂದೇ ಕಡೆ ಸೇರಿದ್ದು, ಮುಖಮುಖಿಯಾಗಿದ್ದಾರೆ ಎನ್ನಲಾಗಿದೆ.
ಸ್ಯಾಮ್-ಚೈ ಮಾತಾಡಿದ್ರಾ?
ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ಅಂದ್ಮೇಲೆ ಮುಖಾ ಮುಖಿಯಾಗುವುದು ಕಾಮನ್. ಆದರೆ, ಇಬ್ಬರೂ ಒಂದೇ ಸ್ಟುಡಿಯೋದಲ್ಲಿ ಇದ್ದರೂ ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ. ನಾಗಚೈತನ್ಯ 'ಬಂಗಾರುರಾಜು' ಶೂಟಿಂಗ್ ಮುಗಿಸಿ ಹೋದರೆ, ಇತ್ತ ಸಮಂತಾ ಕೂಡ 'ಯಶೋಧ' ಚಿತ್ರೀಕರಣದ ಬಳಿಕ ಕಾರು ಹತ್ತಿ ಮನೆಗೆ ತೆರಳಿದರು ಎನ್ನಲಾಗಿದೆ. ಇನ್ನೊಂದು ಕಡೆ ಇಬ್ಬರೂ ಒಬ್ಬರನ್ನೊಬ್ಬರು ಮಾತಾಡಿಸುವುದಕ್ಕೂ ಮುಂದಾಗಿಲ್ಲ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
7 ವರ್ಷದ ಪ್ರೀತಿ, 4 ವರ್ಷದ ದಾಂಪತ್ಯ
ಸಮಂತಾ ಹಾಗೂ ನಾಗಚೈತನ್ಯ 2010ರಲ್ಲಿ ತೆರೆಕಂಡ 'ಯೇ ಮಾಯ ಚೇಸಾವೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲಿಂದ ಇಬ್ಬರಲ್ಲೂ ಪ್ರೀತಿ ಚಿಗುರಿತ್ತು. ಬಳಿಕ 2017ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದರು. ಆದರೆ, ಸಮಂತಾ ಹಾಗೂ ನಾಗಚೈತನ್ಯ ಇಬ್ಬರಲ್ಲೂ ಮೈನಸ್ಸು ಮೂಡಿದ್ದರಿಂದ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ವಿಚ್ಛೇದನದ ಬಗ್ಗೆ ತನಗಾದ ನೋವನ್ನು ಸಮಂತಾ ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ. ಆದರೆ, ನಾಗಚೈತನ್ಯ ಇದುವರೆಗೂ ವಿಚ್ಛೇದನದ ಬಗ್ಗೆ ಒಂದೇ ಒಂದು ಮಾತು ಕೂಡ ಆಡಿಲ್ಲ. ಸದ್ಯ ಸಮಂತಾ ಸ್ನೇಹಿತೆಯರೊಂದಿಗೆ ಗೋವಾದಲ್ಲಿ ಹೊಸ ವರ್ಷ ಆಚರಣೆ ಮಾಡಲು ತೆರಳಿದ್ದಾರೆ.