Don't Miss!
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭರ್ಜರಿ' ಗೆದ್ದರೂ ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಎದುರಾದ ಕಂಟಕ !
ಧ್ರುವ ಸರ್ಜಾ ಅವರ 'ಭರ್ಜರಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಜೊತೆಗೆ ಧ್ರುವ ಸರ್ಜಾ ಹ್ಯಾಟ್ರಿಕ್ ಆಕ್ಷನ್ ಪ್ರಿನ್ಸ್ ಆಗಿದ್ದಾರೆ. ಇನ್ನೂ ಅವರ ಸಿನಿಮಾಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದರೆ ಇದರೊಂದಿಗೆ ಈಗ ಧ್ರುವ ಮುಂದಿನ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ.
ಧ್ರುವ ಸರ್ಜಾಗೆ ನಿರ್ದೇಶಕ ನಂದ ಕಿಶೋರ್ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಮೊದಲು 'ಹರಿಗ್ರೀವ' ಎಂಬ ಟೈಟಲ್ ನಲ್ಲಿ ಶುರುವಾಗಿದ್ದ ಈ ಚಿತ್ರದ ಹೆಸರು 'ಪೋಗರು' ಎಂದು ಬದಲಾಗಿತ್ತು. ಆದರೆ ಈಗ 'ಪೋಗರು' ಸಿನಿಮಾ ಶುರುವಾಗುವುದು ಅನುಮಾನ ಎನ್ನುವ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ....
ಧ್ರುವ 'ಪೋಗರು' ತೋರಿಸಲ್ವಾ
ನಂದ ಕಿಶೋರ್ ಮತ್ತು ಧ್ರುವ ಸರ್ಜಾ ಕಾಂಬಿನೇಶ್ ನ 'ಪೋಗರು' ಸಿನಿಮಾಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ಇದರಿಂದ ಧ್ರುವ 'ಪೋಗರು' ತೋರಿಸಲ್ವಾ ಎನ್ನುವ ಅನುಮಾನ ಮೂಡಿದೆ.
ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್!
ರೀಮೇಕ್ ಸಿನಿಮಾ
'ಪೋಗರು' ಸಿನಿಮಾ ತೆಲುಗಿನ 'ಕಂದಿರಿಗ' ಚಿತ್ರದ ರಿಮೇಕ್ ಆಗಿದೆ. ಆದರೆ ಸದ್ಯ ರೀಮೇಕ್ ಎನ್ನುವ ಕಾರಣಕ್ಕಾಗಿಯೇ ಈ ಚಿತ್ರ ನಿಂತಿದೆಯಂತೆ.
2011ರ ಸಿನಿಮಾ
'ಕಂದಿರಿಗ' 2011ರಲ್ಲಿ ಬಂದ ಸಿನಿಮಾ. ಅದನ್ನು ಈಗ ಬದಲಿಸಿಕೊಂಡು ಮಾಡಿದರು ಹಳೆ ಸಿನಿಮಾ ಎನಿಸುತ್ತದೆ ಎನ್ನುವ ಕಾರಣಕ್ಕೆ ಧ್ರುವ 'ಪೋಗರು' ಚಿತ್ರವನ್ನು ಕೈ ಬಿಡಲಿದ್ದಾರೆ ಎನ್ನುವ ಸುದ್ದಿ ಇದೆ.
ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!
ಸ್ವಮೇಕ್ ಸಿನಿಮಾ
ಮೂರು ಸ್ವಮೇಕ್ ಸಿನಿಮಾ ಮಾಡಿರುವ ಧ್ರುವ ಸರ್ಜಾ ನಾಲ್ಕನೇ ಚಿತ್ರದಲ್ಲಿಯೂ ಹೊಸ ಕಥೆಯನ್ನು ಆರಿಸಿಕೊಳ್ಳಲಿದ್ದಾರಂತೆ.
ಡೇಟ್ಸ್ ಸಮಸ್ಯೆ ಆಗುತ್ತದೆ
ನಂದ ಕಿಶೋರ್ ಹೊಸ ಕಥೆ ಮಾಡುತ್ತ ಕುಳಿತರೆ ಧ್ರುವ ಕಾಲ್ ಶೀಟ್ ತೆಗೆದುಕೊಂಡಿರುವ ಇತರ ಮೂರು ನಿರ್ಮಾಪಕರು ಚಿತ್ರಗಳಿಗೆ ಡೇಟ್ಸ್ ಸಮಸ್ಯೆ ಆಗುತ್ತದೆ.
ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!
ಹೊಸ ಸಿನಿಮಾ
'ಜಗ್ಗುದಾದಾ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಈಗ ಧ್ರುವ ಸರ್ಜಾಗೆ ಒಂದು ಚಿತ್ರವನ್ನು ಮಾಡುವುದು ಪಕ್ಕಾ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್ ರೈಟರ್ ಶಗುಫ್ತಾ ರಫೀಕ್ ಅವರ ಕಥೆ ಇರಲಿದೆ.
ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್!
ಇನ್ನು ಎರಡು ಸಿನಿಮಾಗಳು
ಇವುಗಳ ಜೊತೆಗೆ ಸದ್ಯ ಧ್ರುವ ಸರ್ಜಾ ಉದಯ್ ಮೆಗ್ತಾ ಸಿನಿಮಾ, ಜೊತೆಗೆ ಅರ್ಜುನ್ ಸರ್ಜಾ ಅವರ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ ಎನ್ನುವ ಮಾತಿದೆ.