Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳು ಸ್ಟಾರ್ ವಿಜಯ್ ಹಿಂದೆ ಬಿದ್ದ ಗಾಡ್ ಫಾದರ್ ಮಂಜು
ಮಂಜು ನಿರ್ಮಾಣದ ಗಾಡ್ ಫಾದರ್ ಚಿತ್ರವು ಮೊದಲ ವಾರದಲ್ಲಿ ಉತ್ತಮ ಎನ್ನಬಹುದಾದ ರು. 4.5 ಕೋಟಿ ಗಳಿಸಿದೆ. ಎರಡು ವಾರಗಳಲ್ಲಿ ಒಟ್ಟೂ ರು. 7 ಕೋಟಿ ಗಳಿಸಿದೆ ಎಂದು ನಿರ್ಮಾಪಕ ಕೆ ಮಂಜು ತಿಳಿಸಿದ್ದಾರೆ. ಆದರೆ ಚಿತ್ರವನ್ನು ತೆಗೆದುಕೊಂಡಿರುವ ಪ್ರಸಾದ್ ಕಡೆಯಿಂದ ಈ ವಿಷಯ ಇನ್ನಷ್ಟೇ ಪಕ್ಕಾ ಆಗಬೇಕಿದೆ. ಒಟ್ಟಿನಲ್ಲಿ ಗಾಡ್ ಫಾದರ್ ಯಶಸ್ವಿಯಾಗಿ ಓಡುತ್ತಿರುವುದಂತೂ ಸತ್ಯ.
ಈ ಸಂದರ್ಭದಲ್ಲಿ ಕೆ ಮಂಜು ತಮಿಳು ನಟ ವಿಜಯ್ ಹಿಂದೆ ಬಿದ್ದಿದ್ದಾರೆ. ಕೆ ಮಂಜುವಿಗೂ ತಮಿಳು ನಟ ವಿಜಯ್ ಗೂ ಈ ಹಿಂದೆಯೇ ಭಾರಿ ಬಾಂಧವ್ಯವಿದೆ. ಈ ಹಿಂದೆ ಬಿಡುಗಡೆಯಾಗಿರುವ ವಿಜಯ್ 'ವೇಲಾಯುಧಂ' ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಇದೇ ಮಂಜು ತೆಗೆದುಕೊಂಡಿದ್ದರು. ಆಗ ವಿಜಯ್ ಮಂಜುರ ಜೊತೆಯಲ್ಲಿ ಇಡೀ ಬೆಂಗಳೂರು ಸಂಚರಿಸಿದ್ದರು. ಹೀಗಾಗಿ ಮಂಜು ಈಗ ವಿಜಯ್ ನಾಯಕತ್ವದ ತಮಿಳು ಸಿನಿಮಾ ಮಾಡಲು ಯೋಚಿಸಿ ಕಾರ್ಯೋನ್ಮುಖರಾಗಿದ್ದಾರೆ.
ಅಷ್ಟೇ ಅಲ್ಲ, ಸುದ್ದಿ ಮೂಲಗಳ ಪ್ರಕಾರ ಕೆ ಮಂಜು ತಮಿಳು ಚಿತ್ರಕ್ಕೆ ವಿಜಯ್ ನಾಯಕರಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ವಿಜಯ್ ಚಿತ್ರ ನಿರ್ಮಾಣದ ಮೂಲಕ ಕನ್ನಡ ಚಿತ್ರಗಳ ನಿರ್ಮಾಪಕ ಮಂಜು, ನೆರೆಯ ತಮಿಳು ಚಿತ್ರಂಗಕ್ಕೂ ಕಾಲಿಡುವುದು ಪಕ್ಕಾ ಆದಂತಾಗಿದೆ. ಸದ್ಯಕ್ಕೆ ಕನ್ನಡದಲ್ಲಿ ಮಂಜು ನಿರ್ಮಾಣದ ಗಾಡ್ ಫಾದರ್ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಜನಿಕಾಂತ್ ಚಿತ್ರೀಕರಣ ಮುಗಿಸಿದೆ. ರಾಗಿಣಿ ಐಪಿಎಸ್ ಚಿತ್ರೀಕರಣ ಹಂತದಲ್ಲಿದೆ. (ಒನ್ ಇಂಡಿಯಾ ಕನ್ನಡ)