Don't Miss!
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ನಿರ್ದೇಶಿಸಲು ಹೊರಟಿದ್ದರೇ ಆದಿತ್ಯ?
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ, ಹಿಂದೊಮ್ಮೆ ನಟನೆ ಬಿಟ್ಟು ನಿರ್ದೇಶನ ಮಾಡುತ್ತೇನೆ ಎಂದು ಹೊರಟಿದ್ದು ಗೊತ್ತೇ ಇದೆ. ಆದರೆ ನಟ ಆದಿತ್ಯ ನಿರ್ದೇಶನದ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ಅಷ್ಟೇ ಅಲ್ಲ, ನಟರಾಗಿಯೇ ಅವರು ಈಗಲೂ ಬಿಜಿಯಾಗಿದ್ದಾರಲ್ಲ! ಹೌದು, ನಟ ಆದಿತ್ಯ 'ಹೇಳಿದ್ದೇ ಒಂದು, ಮಾಡಿದ್ದು ಇನ್ನೊಂದು. ನಿರ್ದೇಶನ ಮಾಡುತ್ತೇನೆ ಅಂದವರ ಚಿತ್ರವೇ ಪತ್ತೆಯಿಲ್ಲ'.
ಹೀಗೆ ಆದಿತ್ಯರ ಮೇಲೆ ಅಪವಾದ ಹೊರಿಸುವುದಕ್ಕಿಂತ ಅವರು 'ಅಂದುಕೊಂಡಿದ್ದೇ ಒಂದು, ಆಗಿದ್ದು ಇನ್ನೊಂದು' ಅನ್ನುವುದೇ ಹೆಚ್ಚು ಸೂಕ್ತ. ಯಾಕೆಂದರೆ ನಾಯಕರಾಗಿ ನೆಲೆನಿಲ್ಲಲು ಕಷ್ಟವಾಗಿದ್ದ ಸಂದರ್ಭದಲ್ಲಿ ಆದಿತ್ಯ ನಿರ್ದೇಶನಕ್ಕೆ ಅಣಿಯಾಗಿದ್ದು ಹೌದು. ಆದರೆ ನಿರ್ದೇಶನ ಮಾಡಬೇಕೆಂದು ಅವರಂದುಕೊಂಡಿದ್ದ ಚಿತ್ರಕ್ಕೆ ನಾಯಕನಟರೇ ಸಿಗಲಿಲ್ಲವಂತೆ. ಆಶ್ಚರ್ಯ ಬೇಡ, ಅದನ್ನು ಸ್ವತಃ ಆದಿತ್ಯರೇ ಹೇಳಿಕೊಂಡಿದ್ದಾರೆ.
"ನನ್ನ ಚಿತ್ರಕ್ಕ ನಾಯಕರು ಸೂಪರ್ ಸ್ಟಾರ್ ಉಪೇಂದ್ರ" ಎಂದಿದ್ದ ಆದಿತ್ಯ, ತಮ್ಮ ಚಿತ್ರಕ್ಕೆ ಮುಹೂರ್ತದ ದಿನವನ್ನು ಸಹ ಘೋಷಿಸಿದ್ದರು. ಆದರೆ ನಂತರ ಆದಿತ್ಯ, ಆ ಪ್ರಾಜೆಕ್ಟ್ ನಿಂದ ಹಿಂದೆ ಸರಿದುಬಿಟ್ಟರು. ಇದಾಗಿ ಅದೆಷ್ಟೋ ಕಾಲವಾಯ್ತು. ಆದಿತ್ಯರನ್ನೇ ಹೆಚ್ಚು ಕಡಿಮೆ ಮರೆತಿರುವ ಜನರು ಅವರ ಮಾತುಗಳು ಹಾಗೂ ನಿರ್ದೇಶನ ಮಾಡಬೇಕಿದ್ದ ಪ್ರಾಜೆಕ್ಟ್ ಸಂಗತಿಯನ್ನು ಸಂಪೂರ್ಣ ಮರೆತೇ ಬಿಟ್ಟಿದ್ದರು.
ಆದರೆ ಅಲ್ಲೇ ಆಗಿದ್ದು ಯಡವಟ್ ಎಂಬಂತೆ, ಆದಿತ್ಯ ಮಾತ್ರ ಅದನ್ನು ಮರೆತಿರಲಿಲ್ಲ. ಇದೀಗ ವೃತ್ತಿಜೀವನದಲ್ಲಿ ಮೇಲೇರುತ್ತಿರುವ, ಕೈತುಂಬಾ ಚಿತ್ರಗಳನ್ನು ಹಿಡಿದಿರುವ ಆದಿತ್ಯ, ಹಳೆಯದನ್ನು ನೆನಪಿಸಿಕೊಂಡು ಮಾಧ್ಯಮವೊಂದರ ಸಂದರ್ಶನದಲ್ಲಿ ತಾವು ನಿರ್ದೇಶಿಸಬೇಕಿದ್ದ ಪ್ರಾಜೆಕ್ಟ್ ಬಿದ್ದು ಹೋದ ಕಾರಣವನ್ನು ವಿವರಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ನೇರ ಆರೋಪದ ಮೂಲಕ ಚಿತ್ರರಂಗದ ಇನ್ನೊಂದು ಮುಖಕ್ಕೆ ಕನ್ನಡಿ ಹಿಡಿದಿದ್ದಾರೆ. ಮುಂದಿನ ಪುಟ ನೋಡಿ...