Don't Miss!
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೀಣಾ ಮಲಿಕ್ ರನ್ನು 'ಡರ್ಟಿ' ಮಾಡಿದ ಶ್ರೀನಿವಾಸಮೂರ್ತಿ
ಈಗ ವಿಷಯ ಅದಲ್ಲ, ನಟ ಶ್ರೀನಿವಾಸಮೂರ್ತಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆಂದು ಈಗ ಎಲ್ಲೆಡೆಯಲ್ಲೂ ಗುಲ್ಲೋ ಗುಲ್ಲು! ಡರ್ಟಿ ಪಿಕ್ಚರ್, ಸಂಪೂರ್ಣ ನಾಯಕಿ ಪ್ರಧಾನ ಚಿತ್ರವಾದರೂ ಅವರೊಬ್ಬರೇ ಇಡೀ ಚಿತ್ರದಲ್ಲಿ ಇರುವುದಿಲ್ಲವಲ್ಲ. ಅದರಲ್ಲೊಂದು ಪ್ರಮುಖ ಪಾತ್ರಕ್ಕೆ ಹಿರಿಯ ನಟ ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್.
ಅಷ್ಟೇ ಅಲ್ಲ, ಸಿಲ್ಕ್ ಸ್ಮಿತಾ ಪಾತ್ರದ ನಟಿ ವೀಣಾ ಮಲಿಕ್ ಅವರನ್ನು ವೇಶ್ಯಾವಾಟಿಕೆಗೆ ತಂದು ನಿಲ್ಲಿಸುವ 'ಪಿಂಪ್' ಪಾತ್ರ ಅವರದಂತೆ. ಜೊತೆಗೆ ಅವರ ತಂಗಿಯನ್ನೂ ಅದೇ ವೃತ್ತಿಗೆ ತಳ್ಳುವವವರೂ ಇದೇ ಶ್ರೀನಿವಾಸಮೂರ್ತಿಯಂತೆ. ಅಲ್ಲಿಗೆ ಒಂಥರಾ ಖಳನಾಯಕನ ಪಾತ್ರದಂತೆ ಎನ್ನಬಹುದು. ಅದನ್ನೇ 'ಮನೆಹಾಳನ' ಪಾತ್ರ ಅಂದರೂ ತೊಂದರೆಯಿಲ್ಲ.
ಎಂಥಹ ಪಾತ್ರವನ್ನಾದರೂ ಆವಾಹನೆ ಮಾಡಿಕೊಂಡು ಅಮೋಘವಾಗಿ ನಟಿಸಬಲ್ಲ ಹಿರಿಯ ಕಲಾವಿದ ಶ್ರೀನಿವಾಸಮೂರ್ತಿ, ಈ ಪಾತ್ರಕ್ಕೆ ನ್ಯಾಯಸಲ್ಲಿಸುವುದು ಖಂಡಿತ. ಆದರೆ ಅವರನ್ನು ಈ ಮೊದಲು 'ಕವಿರತ್ನ ಕಾಳಿದಾಸ' ಚಿತ್ರದ ಭೋಜರಾಜನಂತಹ ಅನನ್ಯ ಪಾತ್ರಗಳಲ್ಲಿ ನೋಡಿರುವ ಪ್ರೇಕ್ಷಕರು ಇದನ್ನು ಇಷ್ಟಪಡಬಹುದೇ ಎಂಬುದು ಹಲವರ ಪ್ರಶ್ನೆ!
ಮುಹೂರ್ತ ಆಚರಿಸಿಕೊಂಡು ಇದೀಗ ಚಿತ್ರೀಕರಣದ ಹಂತದಲ್ಲಿರುವ ಡರ್ಟಿ ಪಿಕ್ಚರ್, ಕೇವಲ ವೀಣಾ ಮಲಿಕ್ ಹೆಸರಿನಿಂದ ಮಾತ್ರವಲ್ಲದೇ ಅದರಲ್ಲಿ ನಟಿಸಲಿರುವ ಪ್ರತಿಯೊಬ್ಬರನ್ನೂ ಸುದ್ದಿಯ ತೆಕ್ಕೆಗೆ ಸೆಳೆಯುತ್ತಿದೆ. ಅದರಲ್ಲೂ ಪಿಂಪ್ ಪಾತ್ರವನ್ನು ನಿರ್ವಹಿಸಲಿರುವ ಶ್ರೀನಿವಾಸಮೂರ್ತಿ ಅವರೀಗ ಭಾರೀ ಸುದ್ದಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ಭಾರೀ ಅಲೆಯನ್ನೇ ಎಬ್ಬಿಸಿದ್ದ ವಿದ್ಯಾ ಬಾಲನ್ ಚಿತ್ರ 'ದಿ ಡರ್ಟಿ ಪಿಕ್ಚರ್', ಕನ್ನಡದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದೋ ಕಾದುನೋಡಬೇಕು. ಬಾಲಿವುಡ್ ನಲ್ಲಿ ಈ ಚಿತ್ರದ ಅಭಿನಯಕ್ಕೆ ಶ್ರೇಷ್ಠನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ ವಿದ್ಯಾ ಬಾಲನ್. ಕನ್ನಡದ ಈ ಚಿತ್ರಕ್ಕೆ ಪಾಕಿಸ್ತಾನಿ ನಟಿ ವೀಣಾ ಮಲಿಕ್ ಪ್ರಶಸ್ತಿ ಪಡೆಯಬಹುದೇ ಎಂಬುದು ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)