Don't Miss!
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆರಂಭ'ದಲ್ಲೇ ಇದೆಲ್ಲಾ ಬೇಕಾ ಅಭಿ ಎಸ್ ಹನಕೆರೆಯವರೇ?
ಎಂಜಿನಿಯರಿಂಗ್ ಮುಗಿಸಿ ಜಾಬ್ ಮಾಡ್ತಿದ್ದ ಈ ನಿರ್ದೇಶಕರಿಗೆ ಸಿನಿಮಾಗೆ ಬರ್ಬೇಕು ಅನ್ನೋ ಕನಸು ಬಿದ್ದು ಛಂಗನೆ ಸಿನಿಮಾ ರಂಗಕ್ಕೆ ಹಾರಿದ ನಿರ್ದೇಶಕರಿವರು. ಡೈರೆಕ್ಷನ್ ಅಂದ್ರೆ ಅಷ್ಟು ಸುಲಭ ಅಲ್ಲ ಅಂತ ಅರಿತು ನುರಿತ ನಿರ್ದೇಶಕರಾಗೋಕೆ ಒಂದಷ್ಟು ವರ್ಷ ಒದ್ದಾಡಿದ್ದಾರೆ ಕೂಡ.
ಅವ್ರ ಒದ್ದಾಟ ಗುದ್ದಾಟಕ್ಕೆ ಒಂದೊಳ್ಳೆ ಅವಕಾಶ ಸಿಕ್ಕಿ 'ಆರಂಭ' ಅನ್ನೋ ಸಿನಿಮಾನೂ ಆರಂಭವಾಯ್ತು. ಚಿತ್ರ ಆರಂಭವಾಗಿ ಎರಡು ವರ್ಷವಾಗ್ತಾ ಬಂದ್ರೂ ಮುಗಿಯಲಿಲ್ಲ. ಹೊಸಬರ ಸಿನಿಮಾ ಬೇರೆ ಪ್ರಚಾರ ಇಲ್ಲದೆ ಜನ ಸಿನಿಮಾವನ್ನ ಮರೆತೇ ಬಿಟ್ಟಿದ್ರು. ['ಆರಂಭ' ಚಿತ್ರದ ಟೀಸರ್ ನಲ್ಲಿ ಇದೇನಿದು 'ಆ' ದೃಶ್ಯ?]
ಅದೇನೇ ಇರಲಿ 'ಆರಂಭ'ದಲ್ಲೇ ಇದೆಲ್ಲಾ ಬೇಕಾ? ಮೂಲತಃ ಮಂಡ್ಯದವ್ರಾದ ಅಭಿಯವ್ರಿಗೆ ಮಂಡ್ಯ ನಿರ್ದೇಶಕ ಪ್ರೇಮ್ ತರಹದ ಖಯಾಲಿ ಶುರುವಾಯ್ತಾ. ಶುರುವಾದ್ರೂ ಇದೇನು ಅಸಹ್ಯ ಅಂತಿದ್ದಾರೆ ಸಾತ್ವಿಕರು.
ಉಳಿದಂತೆ ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿರುವ ಚಿತ್ರದಲ್ಲಿ ನಟ ಮಿಥುನ್ ಪ್ರಕಾಶ್, ಅಭಿರಾಮಿ ಸೇರಿದಂತೆ ಕಲಾವಿದರ ಬಳಗವೇ ಈ ಚಿತ್ರದಲ್ಲಿದೆ. ಗುರುಕಿರಣ್, ಗೋಟುರಿ, ಕವಿರಾಜ್, ಅಭಿ ಹನಕೆರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗರಾಜ್ ಛಾಯಾಗ್ರಹಣ, ಗಿರೀಶ್ ಸಂಕಲನ ಹಾಗೂ ಸಂದೀಪ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಊರಾದ ಕಣಗಾಲ್ ನಲ್ಲಿ ಈ ಚಿತ್ರದ ಚಿತ್ರೀಕರಣ ನದೆದಿರುವುದು ಇನ್ನೊಂದು ವಿಶೇಷ. ಕಣಗಾಲ್ ನಲ್ಲಿ ಚಿತ್ರೀಕರಿಸಿರುವ ಮೊದಲ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದ ಪ್ರೀಮಿಯರ್ ಶೋ ಕಣಗಾಲ್ ನಲ್ಲಿ ಆಯೋಜಿಸಿ ಚಿತ್ರರಂಗದ ಗಣ್ಯರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದ್ದಾರೆ ಅಭಿ ಹನಕೆರೆ.