Don't Miss!
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಉಳಿದವರು ಕಂಡಂತೆ' ಚಿತ್ರದಲ್ಲಿ ರಾತ್ರಿ ಏನಾಯಿತು?
ಅವರು ಯಾಕೆ ಹಾಗೆ ಮಾಡಿದರು ಅನ್ನೋ ಕುತೂಹಲ ನಿಮ್ಗೂ ಇರುತ್ತೆ. ಇದು 'ಉಳಿದವರು ಕಂಡಂತೆ' ಚಿತ್ರತಂಡದ ಕುಂಬಳಕಾಯಿ ಕಥೆ. ಸಿನಿಮಾದ ಶೂಟಿಂಗ್ ಮುಗಿದ ಮೇಲೆ ಚಿತ್ರತಂಡ ಉಳಿದವರಿಗೂ ಕಾಣುವಂತೆ ಮಾಧ್ಯಮದವರನ್ನು ಕರೆಸಿ ಕುಂಬಳಕಾಯಿ ಒಡೆದು ಶೂಟಿಂಗ್ ಮುಗೀತು ಅಂತಾರೆ.
ಆದರೆ ಉಳಿದವರು ಕಂಡಂತೆ ಚಿತ್ರತಂಡ ಇತ್ತೀಚೆಗೆ ರಾತ್ರಿ 3.30ಕ್ಕೆ ಚಿತ್ರದ ಕುಂಬಳಕಾಯಿ ಒಡೆದಿದೆ. ಅಂದಹಾಗೆ ಇದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯ ರಕ್ಷಿತ್ ಶೆಟ್ಟಿ, ಟಿವಿ9 ಕನ್ನಡ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಅಭಿನಯದ ಚಿತ್ರದ ಕಥೆ.
ಆಮೇಲೆ ಇಡೀ ಚಿತ್ರತಂಡ ಫೋಟೋ ತೆಗಿಸಿಕೊಂಡು ಎಂಜಾಯ್ ಮಾಡಿ. ಕೊನೆಯ ದಿನವನ್ನ ಖುಷಿಯನ್ನ ಬೆಳ್ಳಂಬೆಳಗ್ಗೆ ಆಚರಿಸಿಕೊಂಡಿದೆ.
ಬಳಿಕ ಚಿತ್ರತಂಡದ ಎಲ್ಲರೂ ಚುಮುಚುಮು ಮುಂಜಾನೆ ಮನೆ ಸೇರಿಕೊಂಡಿದ್ದಾರೆ. ಇಷ್ಟಕ್ಕೂ ಸದ್ಯಕ್ಕೆ ಚಿತ್ರದ ಕಥೆಯ ಬಗ್ಗೆಯೂ ಏನನ್ನೂ ಬಿಟ್ಟುಕೊಡದ ಚಿತ್ರತಂಡ ಈಗ ಬೆಳ್ಳಂಬೆಳಗ್ಗೆ ಕುಂಬಳಕಾಯಿ ಒಡೆದು ಅಲ್ಲೂ ಉಳಿದವರಿಗೆ ಕಾಣದಂತೆ ಶೂಟಿಂಗ್ ಮುಗಿಸಿದೆ.
ಉಳಿದಂತೆ 'ಉಳಿದವರು ಕಂಡಂತೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವವರು ನಟ ರಕ್ಷಿತ್ ಶೆಟ್ಟಿ. ಕರಮ್ ಚಾವ್ಲಾ ಛಾಯಾಗ್ರಹಣ, ಅಜಿನೀಷ್ ಸಂಗೀತ, ಸಚಿನ್ ಸಂಕಲನ ಈ ಚಿತ್ರಕ್ಕಿದೆ. ರಕ್ಷಿತ್ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ, ಶೀತಲ್ ಶೆಟ್ಟಿ ಅಚ್ಯುತ್ ಕುಮಾರ್, ತಾರಾ, ಚಿತ್ರಾ, ರಿಷಬ್ ಶೆಟ್ಟಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿ ಇದ್ದಾರೆ.