Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರೀನಾ ಕಪೂರ್ ವಿರಹ ನೂರು ನೂರು ತರಹ
ಬಾಲಿವುಡ್ ತಾರೆ ಕರೀನಾ ಕಪೂರ್ ಅವರ ಮದುವೆಯೇನೋ ಧಾಂ ಧೂಂ ಎಂದು ನಡೆದುಹೋಯಿತು. ತಮ್ಮ ಬಹುಕಾಲದ ಬಾಯ್ ಫ್ರೆಂಡ್ ಸೈಫ್ ಆಲಿ ಖಾನ್ ಅವರನ್ನು ವರಿಸುವ ಮೂಲಕ ಕರೀನಾ ಹೊಸ ಬಾಳಿಗೆ ಅಡಿಯಿಟ್ಟರು. ಆದರೆ ಅವರು "ಬಾ ನಲ್ಲೆ ಬಾ ನಲ್ಲೆ ಮಧುಚಂದ್ರ" ಎಂದು ಹಾಡಿ ನಲಿದರೇ?
ಮೂಲಗಳ ಪ್ರಕಾರ ಮದುವೆ ಬಳಿಕ ಇನ್ನೂ ಅವರಿಬ್ಬರ ಮಧುಚಂದ್ರ ನಡೆದಿಲ್ಲವಂತೆ. ಅತ್ತ ಸೈಫ್, ಇತ್ತ ಕರೀನಾ ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಸಖತ್ ಬಿಜಿಯಾಗಿರುವುದೇ ಇದಕ್ಕೆ ಕಾರಣ. ಇತ್ತ ಮಧುವೂ ಇಲ್ಲದೆ ಅತ್ತ ಚಂದ್ರನ ದರ್ಶನವೂ ಇಲ್ಲದೆ ಸೈಫ್ ಚಡಪಡಿಸುತ್ತಿದ್ದಾರಂತೆ. ಕರೀನಾ ಕಪೂರ್ ವಿರಹ ನೂರು ನೂರು ತರಹ ಎಂದು ಪರಿತಪಿಸುತ್ತಿದ್ದಾರಂತೆ.
ಸೈಫ್ ಆಲಿ ಖಾನ್ ಅವರು ಸದ್ಯಕ್ಕೆ 'ರೇಸ್ 2' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದನ್ನು ಆದಷ್ಟು ಬೇಗ ಮುಗಿಸಿ ಮಧುಚಂದ್ರಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಇದಕ್ಕಾಗಿ ದಿನವೊಂದಕ್ಕೆ 10 ಗಂಟೆಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರಂತೆ.
ಇನ್ನೊಂದು ಕಡೆ ಕರೀನಾ ಸಹ ಅಷ್ಟೇ, ಸುಮ್ಮನೆ ಕೂತಿಲ್ಲ. ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್ ಗಳನ್ನು ಆದಷ್ಟು ಬೇಗ ಮುಗಿಸುತ್ತಿದ್ದಾರೆ. ಬಹುಶಃ ಇಬ್ಬರೂ ಜನವರಿ 2013ರ ಹೊತ್ತಿಗೆ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಮಧುಚಂದ್ರ ಮಧು ಹೀರಲಿದ್ದಾರಂತೆ.
ಮದುವೆಗೂ ಮುಂಚೆಯೇ ನಮ್ಮಿಬ್ಬರ ಹನಿಮೂನ್ ನಡೆದುಹೋಗಿದೆ. ಡಿಸೆಂಬರ್ ನಲ್ಲಿ ನಾವೇನಾದರೂ ಇನ್ನೊಮ್ಮೆ ಆಚರಿಸಿಕೊಂಡರೆ ಅದು 250ನೇ ಹನಿಮೂನ್ ಆಗುತ್ತದೆ ಎಂದಿದ್ದರು ಕರೀನಾ. ಆದರೆ ಅವರಿಗೆ 250ನೇ ಮಧುಚಂದ್ರ ಆಚರಿಸಿಕೊಳ್ಳಲು ಪುರುಸೊತ್ತೇ ಇಲ್ಲದಂತಾಗಿದೆ. (ಏಜೆನ್ಸೀಸ್)