Don't Miss!
- News Ration Card: ಎಪಿಎಲ್, ಬಿಪಿಎಲ್ ಕಾರ್ಡ್ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು?
- Sports SRH vs MI: IPL ಇತಿಹಾಸದಲ್ಲೇ ಗರಿಷ್ಠ ರನ್ ಕಲೆ ಹಾಕಿದ ಹೈದರಾಬಾದ್: ಎಸ್ಆರ್ಎಚ್ ಆಟಕ್ಕೆ ಮಕಾಡೆ ಮಲಗಿದ MI
- Lifestyle 11 ರೀತಿಯ ವಾಹನಗಳ ಲೈಸೆನ್ಸ್ ಹೊಂದಿರುವ ಮಹಿಳೆ..! ಮಣಿ ಅಮ್ಮ ಎಂಬ ಧೀರ ಮಹಿಳೆ ಕಥೆ
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಣಿಕ್ಯ' ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್
Recommended Video
'ಮೈ ಆಟೋಗ್ರಾಫ್' ಸಿನಿಮಾದ ಮೂಲಕ ನಟ ಸುದೀಪ್ ನಿರ್ದೇಶಕರಾದರು. ಆ ಸಿನಿಮಾದ ದೊಡ್ಡ ಹಿಟ್ ಆಯ್ತು. ಆ ಬಳಿಕ 'ಶಾಂತಿ ನಿವಾಸ', 'ಜಸ್ಟ್ ಮಾತ್ ಮಾತಲ್ಲಿ', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ' ಸಿನಿಮಾಗಳನ್ನು ಸುದೀಪ್ ಡೈರೆಕ್ಷನ್ ಮಾಡಿದ್ದಾರೆ.
'ಮಾಣಿಕ್ಯ' ನಂತರ ನಟನೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದ ಸುದೀಪ್ ಈಗ ಮತ್ತೆ ನಿರ್ದೇಶನಕ್ಕೆ ಮರಳುವ ಪ್ಲಾನ್ ಮಾಡಿದ್ದಾರಂತೆ. ಈಗಾಗಲೇ ಕಥೆಯ ಎಳೆ ಅಂತಿಮವಾಗಿದ್ದು, ಸಿನಿಮಾದ ತಯಾರಿಯಲ್ಲಿ ಸುದೀಪ್ ತೊಡಗಿದ್ದಾರೆ. 2020ರ ಮಧ್ಯದಲ್ಲಿ ಈ ಸಿನಿಮಾ ಶುರು ಆಗಬಹುದಂತೆ.
ಸಾಹಸ ಕಲಾವಿದರ 'ಕನಸಿನ ಭವನ'ಕ್ಕೆ 10 ಲಕ್ಷ ನೀಡಿದ ಕಿಚ್ಚ ಸುದೀಪ್
ಸದ್ಯ, 'ಕೋಟಿಗೊಬ್ಬ 3', 'ಬಿಲ್ಲಾ ರಂಗ ಭಾಷ', 'ಫ್ಯಾಂಟಮ್' ಸೇರಿದಂತೆ ಸೇರಿದಂತೆ ಕೆಲವು ಸಿನಿಮಾಗಳನ್ನು ಸುದೀಪ್ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಕೆಲಸಗಳು ನಡೆಯುತ್ತಿದೆ. ಈ ನಡುವೆಯೇ ತಾವೇ ಒಂದು ಸಿನಿಮಾ ನಿರ್ದೇಶನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
'ಮಾಣಿಕ್ಯ' ಸಿನಿಮಾ ಬಂದು ಐದು ವರ್ಷಗಳು ಕಳೆದಿದ್ದು, ಆ ನಂತರ ಸುದೀಪ್ ಯಾವುದೇ ಸಿನಿಮಾ ನಿರ್ದೇಶನ ಮಾಡಿಲ್ಲ. ಸುದೀಪ್ ನಿರ್ದೇಶನದ ಬಹುತೇಕ ಸಿನಿಮಾಗಳನ್ನು ಅವರೇ ನಿರ್ಮಾಣ ಮಾಡಿದ್ದು, ಈ ಚಿತ್ರದ ಕೂಡ ಅವರ ಬ್ಯಾನರ್ ನಲ್ಲಿಯೇ ಬರಬಹುದು.
'ಪೈಲ್ವಾನ್' ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಈ ಇಬ್ಬರು ನಟರು
ಸದ್ಯ, 'ದಬಾಂಗ್ 3' ಸಿನಿಮಾದಲ್ಲಿ ಸುದೀಪ್ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ಮೇಲೆ ಸುದೀಪ್ ಹಿಂದಿಯಲ್ಲಿ ಇನ್ನಷ್ಟು ಜನಪ್ರಿಯತೆ ಪಡೆಯುತ್ತಾರೆ. ಅವರ ನಿರ್ದೇಶನದ ಸಿನಿಮಾ ಮತ್ತಷ್ಟು ಕ್ರೇಜ್ ಸೃಷ್ಟಿ ಮಾಡುತ್ತದೆ.