Don't Miss!
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೇಮಂತ್ ಹೆಗ್ಡೆಗೆ ಕೈಕೊಟ್ಟ ನಿಂಬೆಹಣ್ಣಿನಂತ ಬೆಡಗಿ
ನಟ ಕಮ್ ನಿರ್ದೇಶಕ ಹೇಮಂತ್ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ನಿಂಬೆಹಣ್ಣಿನಂತ ಬೆಡಗಿ ಅವರಿಗೆ ಕೈಕೊಟ್ಟಿದ್ದಾರೆ. ಈ ಸಂಬಂಧ ಅವರು ದೂರು ನೀಡಲು ಮುಂದಾಗಿದ್ದಾರೆ. ಆಕೆ ಬೇರಾರು ಅಲ್ಲ 'ನಿಂಬೆಹುಳಿ' ಚಿತ್ರದ ನಟಿ ಕೋಮಲ್ ಝಾ.
ಹೇಮಂತ್ ಹೆಗ್ಡೆ ನಟಿಸಿ, ನಿರ್ದೇಶಿಸುತ್ತಿರುವ ನಿಂಬೆಹುಳಿ ಚಿತ್ರದ ಮೂವರು ಹೀರೋಯಿನ್ ಗಳಲ್ಲಿ ಕೋಮಲ್ ಝಾ ಸಹ ಒಬ್ಬರು. ಆದರೆ ಈಕೆ ಚಿತ್ರೀಕರಣಕ್ಕೆ ಬಾರದೆ ಪತ್ರಿಕೆಗಳಿಗೆ ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಮಂತ್ ಆರೋಪಿಸಿದ್ದಾರೆ.
ಆಕೆ ಕೈಕೊಟ್ಟ ಕಾರಣ ತಾನು ಮತ್ತೊಬ್ಬ ಖ್ಯಾತ ನಟ ಅನುಪಮ್ ಖೇರ್ ಅವರನ್ನು ಕಳೆದುಕೊಳ್ಳಬೇಕಾಯಿತು. ಅವರು ಕೊಟ್ಟ ಕಾಲ್ ಶೀಟ್ ಘಳಿಗೆ ಕೂಡ ಮುಗಿಯಿತು. ಕೋಮಲ್ ಝಾ ಮೂರು ತಿಂಗಳು ಸತಾಯಿಸಿದ್ದಕ್ಕೇ ಹೀಗಾಯಿತು ಎನ್ನುತ್ತಾರೆ ಹೇಮಂತ್.
ಈಗ ಅನುಪಮ್ ಖೇರ್ ಸ್ಥಾನಕ್ಕೂ ಬೇರೆ ನಟರನ್ನು ಕರೆತರಲು ಹೆಗ್ಡೆ ನಿರ್ಧರಿಸಿದ್ದಾರೆ. ಬಹುಶಃ ರಂಗಾಯಣ ರಘು ಅಥವಾ ರಮೇಶ್ ಅರವಿಂದ್ ಅವರನ್ನು ಕರೆತರುವ ಸಾಧ್ಯತೆಗಳಿವೆ. ಮಧುರಿಮಾ ಹಾಗೂ ನಿವೇದಿತಾ ಚಿತ್ರದ ಇನ್ನಿಬ್ಬರು ನಾಯಕಿಯರು.
'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." (ವಿಡಿಯೋ ನೋಡಿ) ಎಂಬ ಹಾಡು ಯೂಟ್ಯೂಬ್ ನಲ್ಲಿ ಹೊಸ ಹವಾ ಎಬ್ಬಿಸಿದೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಬರೆದವರು ಜನಪ್ರಿಯ ಹನಿಗವಿ ಎಚ್ ದುಂಡಿರಾಜ್. (ಒನ್ಇಂಡಿಯಾ ಕನ್ನಡ)