Don't Miss!
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ಚಿತ್ರಗಳನ್ನು ತಿರಸ್ಕರಿಸಿದ ಕೃತಿ ಶೆಟ್ಟಿ!
ನಟಿ ಕೃತಿ ಶೆಟ್ಟಿ ಚೊಚ್ಚಲ ಚಿತ್ರ 'ಉಪ್ಪೇನ' ಮೂಲಕ ಖ್ಯಾತಿ ಗಳಿಸಿದ್ದಾರೆ. 'ಉಪ್ಪೇನಾ' ಯಶಸ್ಸಿನ ನಂತರ ನಟಿ ಕೃತಿ ಶೆಟ್ಟಿಗೆ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆದರೆ ಮೊದಲ ಚಿತ್ರದ ಬಳಿಕ ಅಷ್ಟೇನು ಸದ್ದು ಮಾಡದ ಕೃತಿ ಶೆಟ್ಟಿ ಕೈ ಹಿಡಿದಿದ್ದು ವಾರಿಯರ್.
ಇತ್ತೀಚೆಗಷ್ಟೇ ತೆಲುಗಿನ ವಾರಿಯರ್ ಸಿನಿಮಾದ ಮೂಲಕ ಕೃತಿ ಕೊಂಚ ಮಟ್ಟಿಗೆ ಸದ್ದು ಮಾಡಿದ್ದಾರೆ. ಇದರ ಜೊತೆಗೆ ಕೃತಿ ಹಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸೌತ್ ನಟಿಯರಿಗೆ ಬಾಲಿವುಡ್ನಲ್ಲೂ ಕೂಡ ಬೇಡಿಕೆ ಹೆಚ್ಚಿದೆ. ಹಾಗಾಗಿ ಕೃತಿ ಯಾವಾಗ ಬಾಲಿವುಡ್ನತ್ತ ಮುಖ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು.
'ಕೆಜಿಎಫ್ 2' ನಿಂದ 'ಪುಷ್ಪ 2' ಕಥೆ ಬದಲಾಗುತ್ತಾ? ಏನಂತಾರೆ ನಿರ್ಮಾಪಕರು?
ಇದಕ್ಕೀಗ ಸ್ವತಃ ಕೃತಿ ಶೆಟ್ಟಿ ಉತ್ತರ ನೀಡಿದ್ದು, ಬಾಲಿವುಡ್ನಲ್ಲಿ ನಟಿಸುವ ಅಗತ್ಯ ಇಲ್ಲ ಎಂದಿದ್ದಾರೆ. ಕೃತಿಯ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಬಾಲಿವುಡ್ನಲ್ಲಿ ನಟಿಸುವ ಬಗ್ಗೆ ನಟಿ ಕೃತಿ ಶೆಟ್ಟಿ ಹೇಳಿದ್ದೇನು ಎನ್ನುವುದನ್ನು ಮುಂದೆ ಓದಿ...
ಬಾಲಿವುಡ್ಗೆ ಕೃತಿ ಶೆಟ್ಟಿ ನೋ ಎಂಟ್ರಿ!
ಸೌತ್ ಸಿನಿಮಾರಂಗದಲ್ಲಿ ಕೊಂಚ ಹೆಸರು ಮಾಡುತ್ತಲೇ, ನಟಿ ಮಣಿಯರು ಬಾಲಿವುಡ್ನತ್ತ ಮುಖ ಮಾಡುತ್ತಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈಗ ನಟಿ ಕೃತಿ ಶೆಟ್ಟಿ ಸರದಿ. ಕೃತಿಗೆ ಬಾಲಿವುಡ್ನಿಂದ ಆಫರ್ಗಳು ಬರ್ತಿವೆಯಂತೆ. ಆದರೆ ಬಾಲವಿಡ್ ಸಿನಿಮಾಗಳಲ್ಲಿ ನಟಿಸಲು ಕೃತಿ ಶೆಟ್ಟಿಯೇ ತಿರಸ್ಕಾರ ಮಾಡುತ್ತಿದ್ದಾರಂತೆ.
3 ಸಿನಿಮಾ ಸೋಲು: ಯಾಕೋ ಪೂಜಾ ಹೆಗ್ಡೆ ಅದೃಷ್ಟವೇ ಸರಿ ಇಲ್ಲ ಎಂದ ನೆಟ್ಟಿಗರು
ಕೃತಿಗೆ ಬಾಲಿವುಡ್ ಅವಶ್ಯಕತೆ ಇಲ್ಲವಂತೆ!
ಕೃತಿ ಶೆಟ್ಟಿ ಬಗ್ಗೆ ಹೀಗೋಂದು ಗಾಸಿಪ್ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಸಂದರ್ಶನ ಒಂದರಲ್ಲಿ ನಟಿ ಕೃತಿ ಶೆಟ್ಟಿ ಸ್ವತಃ ತಾನೆ ಬಾಲಿವುಡ್ ಆಫರ್ಗಳನ್ನು ತಿರಸ್ಕಾರ ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರಂತೆ. " ನನಗೆ ಬಾಲಿವುಡ್ನಿಂದ ಅವಕಾಶಗಳು ಬರುತ್ತವೆ. ಆದರೆ ನಾನೇ ಅವುಗಳನ್ನು ಒಪ್ಪಿಕೊಳ್ಳುತ್ತಿಲ್ಲ. ನನ್ನ ವೃತ್ತಿ ಬದುಕಿಗೆ ಬೇಕಾದ ಎಲ್ಲವನ್ನೂ ನನಗೆ ಸೌತ್ ಚಿತ್ರರಂಗ ಕೊಟ್ಟಿದೆ". ಎಂದಿದ್ದಾರಂತೆ. ಕೃತಿಯ ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಕೃತಿ ಶೆಟ್ಟಿ ಬಗ್ಗೆ ಇಲ್ಲದ ಗಾಸಿಪ್!
ಇನ್ನು ನಟಿ ಕೃತಿ ಶೆಟ್ಟಿ ತನ್ನ ಬಗ್ಗೆ ಇಲ್ಲದ ಗಾಸಿಪ್ಗಳು ಹರಿದಾಡುವ ಬಗ್ಗೆ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು. ಈ ಹಿಂದೆ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಪ್ರಭಾಸ್, ಮಹೇಶ್ ಮತ್ತು ಇತರ ದೊಡ್ಡ ಸ್ಟಾರ್ ಚಿತ್ರಗಳಲ್ಲಿ ಅವಕಾಶ ಪಡೆಯುವಂತೆ ತನ್ನ ಮ್ಯಾನೇಜರ್ಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಸ್ಟಾರ್ ಹೀರೊಗಳಿಂದ ತಿರಸ್ಕಾರದ ಉತ್ತರ ಸಿಕ್ಕಿದೆ ಎಂದು ಟಾಲಿವುಡ್ ಅಂಗಳದಲ್ಲಿ ವರದಿ ಆಗಿತ್ತು. ಈ ಬಗ್ಗೆ ಕೃತಿ ಬೇಸರ ವ್ಯಕ್ತಪಡಸಿದ್ದರು.
ಬಾಲಯ್ಯ ಚಿತ್ರದ ಬಗ್ಗೆಯೂ ಗಾಸಿಪ್!
ಈ ಹಿಂದೆ ಕೃತಿ ತಮ್ಮ ಬಗ್ಗೆ ಚಿತ್ರರಂಗದಲ್ಲಿ ಹಬ್ಬುತ್ತಿರುವ ಗಾಸಿಪ್ ಸುದ್ದಿಗಳಿಗೆ ಬೇಸರ ವ್ಯಕ್ತಪಡಿಸಿದ್ದರು. ಇಲ್ಲ ಸಲ್ಲದ ರೂಮರ್ಗಳನ್ನು ಹಬ್ಬಿಸ ಬೇಡಿ ಎಂದಿದ್ದರು. ಅದು ಬಿಟ್ಟರೆ ನಟ ಬಾಲಯ್ಯನ ಚಿತ್ರವನ್ನು ತಿರಸ್ಕರಿಸಿ ಸುದ್ದಿ ಆಗಿದ್ದರು. ಬಾಲಯ್ಯನ ವಯಸ್ಸಿನ ಕಾರಣಕ್ಕೆ ಕೃತಿ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಸುದ್ದಿ ಆಗಿತ್ತು.