Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೂಸ್ ಮಾದನ ಬಿಟ್ಟು ಬರುತ್ತಿರುವ ಲೂಸುಗಳು!
ಆಶ್ಚರ್ಯವೆಂದರೆ, ಈ ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಇಲ್ಲ. ಲೂಸ್ ಗಳಾಗಿ ನಟಿಸಲಿರುವ ನಟರುಗಳು ಅಕುಲ್ ಬಾಲಾಜಿ, ಶ್ರೀ ಮುರಳಿ ಹಾಗೂ ಶ್ರೀಕಾಂತ್. ಅರುಣ್ ನಿರ್ದೇಶನದಲ್ಲಿ (ನಿರ್ದೇಶನದ ಅಗತ್ಯ!) ಈ ಮೂವರೂ ಲೂಸುಗಳು ನಟಿಸಲಿದ್ದು ಚಿತ್ರದ ಕತೆ ಹೊಸ ರೀತಿಯದ್ದು ಎನ್ನಲಾಗಿದೆ. ಸದ್ಯದಲ್ಲೇ ಈ ಚಿತ್ರವು ಮುಹೂರ್ತ ಆಚರಿಸಿಕೊಳ್ಳಲಿದ್ದು ಅದಕ್ಕೆ ವಿಭಿನ್ನವಾಗಿ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
ಮಾಮೂಲಿಯಂತೆ ಆಮಂತ್ರಣ ಪತ್ರಿಕೆಯನ್ನು ಎನ್ವಲಪ್ ಒಳಗೆ ಸೇರಿಸಿ ಕೊಡುವ ಬದಲು ಹೊಸ ಐಡಿಯಾ ಮಾಡಿದ್ದಾರೆ ನಿರ್ದೇಶಕ ಅರುಣ್ ಕುಮಾರ್. ಡಸ್ಟ್ ಬಿನ್ ಮಾದರಿ ಬಾಕ್ಸ್ ನೊಳಕ್ಕೆ ಚಿತ್ರದ ಕುರಿತಾದ ಆಹ್ವಾನ ಪತ್ರಿಕೆ ತುರುಕಿ, ಅದನ್ನು ಕೊಡಬೇಕಾದವರಿಗೆ ಕೊಡುವ ವಿಚಿತ್ರ ಐಡಿಯಾ ನಿರ್ದೇಶಕರದು.
ಆಮಂತ್ರಣ ಪತ್ರಿಕೆ ನಂತರ ಕಸದ ಬುಟ್ಟಿ ಸೇರುವುದು ಸಹಜವಾಗಿ ಇದ್ದೇ ಇದೆ. ಅದಕ್ಕೂ ಮೊದಲೇ ಕಸದ ಬುಟ್ಟಿಯಲ್ಲಿ ಆಹ್ವಾನ ಪತ್ರಿಕೆ ತುಂಬಿ ಕರೆ ನೀಡುವ ಹೊಸ ಐಡಿಯಾಕ್ಕೆ ಸಂಬಂಧಪಟ್ಟವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಏನೋ! ನಿರ್ದೇಶಕರು 'ಲೂಸುಗಳು' ಚಿತ್ರ ಮಾಡುವ ಮೊದಲೇ ಹೀಗಾದರೆ ಗತಿಯೇನು ಎಂದು ಪ್ರಶ್ನಿಸದಿದ್ದರೆ ಸಾಕು, ಏನಂತೀರಾ?
ಈ 'ಲೂಸುಗಳು' ಎಂಬ ಟೈಟಲ್ ಇಟ್ಟು ತಮ್ಮನ್ನೇ ಬಿಟ್ಟು ಚಿತ್ರ ಮಾಡಲು ಹೊರಟವರ ಬಗ್ಗೆ ಲೂಸ್ ಮಾದ ಯೋಗೇಶ್ ಅವರಿಗೆ ಭಾರಿ ಕೋಪ ಬಂದಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಿರಗಿರ ತಿರುಗುತ್ತಿದೆ. ತಮ್ಮ ಬಿರುದನ್ನು ದುರುಪಯೋಗ ಪಡಿಸಿಕೊಳ್ಳಲಿರುವ ಚಿತ್ರತಂಡದ ಬಗ್ಗೆ ಲೂಸ್ ಮಾದ ಯೋಗಿ ಏನಂತಾರೋ! 'ರೈಟ್ಸ್' ಕೇಳಿದರೆ ಕಷ್ಟ ಕಷ್ಟ ಎನ್ನುತ್ತಿದೆ ಗಾಂಧಿನಗರ! (ಒನ್ ಇಂಡಿಯಾ ಕನ್ನಡ)