Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸ್ಟಾರ್ ನಟನನ್ನು ವಿಲನ್ ಮಾಡಲು ಚಿಂತನೆ!
'ಸರಿಲೇರು ನೀಕೆವ್ವರು' ಚಿತ್ರದ ಸೂಪರ್ ಸಕ್ಸಸ್ ಬಳಿಕ ಪ್ರಿನ್ಸ್ ಮಹೇಶ್ ಬಾಬು ಮತ್ತೊಂದು ಮೆಗಾ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಪರಶುರಾಮ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಸರ್ಕಾರು ವಾರಿ ಪಾಟ' ಎಂದು ಹೆಸರಿಟ್ಟಿದ್ದು, ಒಂದೊಂದೆ ಮಾಹಿತಿಗಳು ಬಹಿರಂಗವಾಗುತ್ತಿದೆ.
Recommended Video
ಈ ಹಿಂದೆ ನಾಯಕಿ ವಿಚಾರಕ್ಕೆ ಹೆಚ್ಚು ಸದ್ದು ಮಾಡಿದ್ದ ಈ ಚಿತ್ರ ಈಗ ಖಳನಾಯಕರ ಕುರಿತಾಗಿ ಭಾರಿ ಕುತೂಹಲ ಮೂಡಿಸಿದೆ. 'ಸರ್ಕಾರು ವಾರಿ ಪಾಟ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದ್ದು, ಅದಕ್ಕಾಗಿ ಬೇರೆ ಇಂಡಸ್ಟ್ರಿಯ ಪ್ರಮುಖ ನಟರನ್ನು ಈ ಚಿತ್ರಕ್ಕಾಗಿ ಕರೆತರಲು ಚಿಂತನೆ ನಡೆದಿದೆಯಂತೆ. ಮುಂದೆ ಓದಿ....
ಅನಿಲ್ ಕಪೂರ್ ಮೇಲೆ ಕಣ್ಣು
ಸರ್ಕಾರು ವಾರಿ ಪಾಟ ಚಿತ್ರದ ಕಥೆಯನ್ನು ಪ್ಯಾನ್ ಇಂಡಿಯಾ ಪ್ರೇಕ್ಷಕರಿಗಾಗಿ ಮಾಡಲಾಗಿದ್ದು, ಹಿಂದಿ ಇಂಡಸ್ಟ್ರಿಯಿಂದ ಅನಿಲ್ ಕಪೂರ್ ಅವರನ್ನು ಕರೆತರಲು ಚಿತ್ರತಂಡ ನಿರ್ಧರಿಸಿದೆ. ಇದು ನೆಗಿಟಿವ್ ಪಾತ್ರ ಆಗಿರಲಿದೆ. ಸದ್ಯಕ್ಕೆ ಈ ಬಗ್ಗೆ ಚಿತ್ರತಂಡ ಮಾತ್ರ ಚಿಂತಿಸಿದ್ದು, ಯಾವುದೇ ಮಾತುಕತೆ ಆಗಿಲ್ಲ.
ಮಹೇಶ್ ಬಾಬು ಹೊಸ ಚಿತ್ರಕ್ಕೆ ಬಾಲಿವುಡ್ನ ನವ ನಟಿ ನಾಯಕಿ?
ಕನ್ನಡದಿಂದ ಸುದೀಪ್!
ಇನ್ನು ಕನ್ನಡ ಇಂಡಸ್ಟ್ರಿಯಿಂದ ಕಿಚ್ಚ ಸುದೀಪ್ ಅವರನ್ನು ಪ್ರಮುಖ ಪಾತ್ರವೊಂದಕ್ಕೆ ಕರೆತರುವ ಬಗ್ಗೆಯೂ ಚಿತ್ರತಂಡ ಚಿಂತಿಸಿದೆಯಂತೆ. ಇದು ಸಹ ನೆಗಿಟಿವ್ ಪಾತ್ರವೇ ಆಗಿರಲಿದೆ ಎನ್ನುವುದು ವಿಶೇಷ. ಈ ಕುರಿತು ಯಾರ ಬಳಿಯೂ ಚರ್ಚಿಸಿಲ್ಲ ಎಂಬ ಮಾಹಿತಿ ಇದೆ.
ನಾಯಕಿಯರ ಬಗ್ಗೆಯೂ ಕುತೂಹಲ
ಸರ್ಕಾರು ವಾರಿ ಪಾಟ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗಿದೆ. ಕೀರ್ತಿ ಸುರೇಶ್ ಪ್ರಮುಖ ನಾಯಕಿ ಹಾಗೂ ನಿವೇತಾ ಥಾಮಸ್ ಎರಡನೇ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೂ ಮುಂಚೆ ಅನನ್ಯ ಪಾಂಡೆ ಹೆಸರು ಸಹ ಚರ್ಚೆಯಾಗಿದೆ.
ನವೆಂಬರ್ನಲ್ಲಿ ಚಿತ್ರೀಕರಣ!
ಕೊರೊನಾ ವೈರಸ್ ಭೀತಿಯಿಂದ ಸುಮ್ಮನಿದ್ದು ಚಿತ್ರತಂಡ ನವೆಂಬರ್ ತಿಂಗಳಿನಿಂದ ರೆಗ್ಯುಲರ್ ಆಗಿ ಶೂಟಿಂಗ್ ಆರಂಭಿಸಲಿದೆ. ಈ ಚಿತ್ರದ ಬಳಿಕ ಅನಿಲ್ ರವಿಪುಡಿ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು.