Don't Miss!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈ ಎತ್ತಿದ 'ದೇವರು ಕೊಟ್ಟ ತಂಗಿ' ಮೀರಾ ಜಾಸ್ಮಿನ್
ಆಗಿದ್ದಿಷ್ಟು... ಬಾಬು ಜನಾರ್ಧನ್ ನಿರ್ದೇಶನದ ಮಲಯಾಳಂ ಚಿತ್ರ 'ಲಿಸಮ್ಮಯುಡೆ ವೀಡು' ಚಿತ್ರೀಕರಣದಲ್ಲಿದ್ದ ಮೀರಾ ಜಾಸ್ಮಿನ್, ತಾವು ವಿದೇಶಕ್ಕೆ ಹೋಗಿ ಬಂದ ಮೇಲೆ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಚಿತ್ರತಂಡಕ್ಕೆ ತಿಳಿಸಿ ವಿದೇಶಕ್ಕೆ ಹಾರಿದ್ದರು. ಆದರೆ ವಾಪಸ್ ಬಂದ ಮೀರಾ ಜಾಸ್ಮಿನ್ ಮತ್ತೆ ಚಿತ್ರೀಕರಣ ತಾಣಕ್ಕೆ ಹೋಗಲೇ ಇಲ್ಲ. ಅದಿರಲಿ, ಮತ್ತೆ ನಿರ್ದೇಶಕ ಬಾಬು ಜನಾರ್ಧನ್ ಅವರನ್ನು ಭೇಟಿ ಮಾಡಲೂ ಇಲ್ಲ.
ಇದೆಲ್ಲವನ್ನೂ ಕೂಲಕುಂಶವಾಗಿ ವಿಚಾರಿಸಲಾಗಿ ತಿಳಿದುಬಂದ ಸಂಗತಿಯೆಂದರೆ, ನಿರ್ಮಾಪಕರಿಂದ ಮೀರಾ ಜಾಸ್ಮಿನ್ ಕೇಳಿದ ಸಂಭಾವನೆ ಚುಕ್ತಾ ಆಗಲಿಲ್ಲ. ಚಿತ್ರೀಕರಣ ಇನ್ನೇನು ಕೊನೆಯ ಹಂತಕ್ಕೆ ಬಂದಿದ್ದರೂ ಬರಬೇಕಾದ ದುಡ್ಡು ಬಾರದೇ ಕಂಗಾಲಾಗಿದ್ದರು ಮೀರಾ. ಹೀಗಿರುವಾದ ಉಳಿದ ಚಿತ್ರೀಕರಣವನ್ನು ಬಿಟ್ಟು ವಿದೇಶಕ್ಕೆ ಹಾರಿದ ಮೀರಾ, ಮತ್ತೆ ಆ ಚಿತ್ರದ ಶೂಟಿಂಗ್ ಕಡೆ ತಲೆ ಹಾಕಲೇ ಇಲ್ಲ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ, 'ಓಣಂ' ಹಬ್ಬದ ವೇಳೆ ಬಿಡುಗಡೆ ಆಗಬೇಕಿದ್ದ ಈ ಚಿತ್ರ ಮೀರಾ ಜಾಸ್ಮಿನ್ ಕೈಕೊಟ್ಟಿದ್ದರಿಂದ ಸಂಪೂರ್ಣವಾಗದೇ ನಿಂತುಬಿಟ್ಟಿದೆ. ಇನ್ನೇನು ಸ್ವಲ್ಪ ಭಾಗದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮಾತ್ರ ಬಾಕಿಯಿದೆ ಅಷ್ಟೇ. ಈ ವೇಳೆ ಎಚ್ಚೆತ್ತ ಮೀರಾ, ಕಾಸು ಬಂದರೆ ಮಾತ್ರ ಶೂಟಿಂಗ್ ಎನ್ನುವ ತತ್ವ ಅನುಸರಿಸಿ, ಈ ನಿರ್ಧಾರ ಕೈಗೊಂಡಿದ್ದಾರೆ. ಬೇರೆ ಏನೋ, ಆದರೆ ಮೀರಾ ಅಭಿಮಾನಿಗಳಿಗಂತೂ ನಿರಾಸೆಯಾಗಿದೆ ಎನ್ನಬಹುದು. (ಏಜೆನ್ಸೀಸ್)