Don't Miss!
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿತಾ ತುಕ್ರಾಲ್ ತಲೆಮೇಲೆ ಮತ್ತೆ ವಿವಾದದ ಗೂಬೆ
ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ, ಗೌರಿ ಪುತ್ರ ನಿರ್ದೇಶಕರಾದ ಮಂಜು ಮಸ್ಕಲ್ ಮಟ್ಟಿ ಜೊತೆ ನಿಖಿತಾ ತುಕ್ರಾಲ್ ಜಗಳವಾಡಿದ್ದಾರೆ. ಮಂಜು ಹೇಳುವ ಪ್ರಕಾರ ಚಿತ್ರದಲ್ಲಿ ನಟಿಸಿರುವ ಕಲಾವಿದರಾದ ನಿಖಿತಾ ತುಕ್ರಾಲ್, ನಾಗಶೇಖರ್ ಹಾಗೂ ಸ್ಮಿತಾ ಈ ಮೂವರೂ ಮೊದಲು ಒಪ್ಪಿಕೊಂಡ ಪ್ರಕಾರ ಚಿತ್ರದ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲ.
"ಸದ್ಯ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದೀವಿ, ಸದ್ಯ ಬರಲು ಸಾಧ್ಯವಿಲ್ಲ" ಎಂಬುದು ಇವರೆಲ್ಲರ ಮಾತಂತೆ. ಇಷ್ಟೇ ಆಗಿದ್ದರೆ ಅವರು ಕಾಯುತ್ತಿದ್ದರಂತೆ. ಆದರೆ ಮಂಜುಗೆ ಸಿಕ್ಕಾಪಟ್ಟೆ ಬೈಯ್ದುಬಿಟ್ಟಿದ್ದಾರಂತೆ. ಹೀಗೆಂದು ಆರೋಪಿಸಿ ಗೌರಿ ಪುತ್ರ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ. ಕಂಡಕಂಡವರ ಬಳಿ ಹೇಳಿಕೊಳ್ಳುತ್ತಿದ್ದಾರೆ.
ಆದರೆ ಇಲ್ಲೊಂದು ವಿಚಾರ ಮಾಡಲೇಬೇಕಾದ ಅಂಶವಿದೆ ಎಂಬುದು ವಿಚಾರವಂತರ ಮಾತು. ಸುಮ್ಮನೆ ನಿಖಿತಾ ಮೇಲೆ ಗೂಬೆ ಕೂರಿಸಲಾಗುತ್ತಿದೆಯೇ ಹೇಗೆ? ನಿಖಿತಾ ಮಾತ್ರವಲ್ಲ, ನಾಗಶೇಖರ್ ಹಾಗೂ ಸ್ಮಿತಾ ಕೂಡ ಹೀಗೇ ಮಾಡಿದ್ದಾರೆ ಎಂದರೆ ನಿರ್ಮಾಪಕರದ್ದೋ ಅಥವಾ ನಿರ್ದೇಶಕರದ್ದೋ ಪ್ರಾಬ್ಲಂ ಇರಬೇಕು. ಕಲಾವಿದರ ಸಂಭಾವನೆಯೇನಾದರೂ ಬಾಕಿ ಇದೆಯೇ ಅಥವಾ ಬೇರೆ ಇನ್ನೇನಾದರೂ ಕಾರಣವಿರಬಹುದೇ ಎಂಬುದು ಸದ್ಯಕ್ಕೆ ಮೂಡಿರುವ ಪ್ರಶ್ನೆ.
ಸದ್ಯಕ್ಕೆ ನಿಖಿತಾ, ತಮಿಳಿನಲ್ಲಿ ಕಾರ್ತಿ ನಾಯಕರಾಗಿರುವ 'ಅಲೆಕ್ಸ್ ಪಾಂಡ್ಯನ್' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದಕ್ಕಾಗಿ ಸದ್ಯದಲ್ಲೇ ಅಮೆರಿಕಾಕ್ಕೂ ಹೋಗಲಿದ್ದಾರೆ. ಈ ವೇಳೆ ಗೌರಿ ಪುತ್ರ ಚಿತ್ರವು ಬಿಡುಗಡೆಗೆ ಕಾದಿದೆ. ಅಷ್ಟರಲ್ಲಿ, ಪ್ರಚಾರಕ್ಕೆ ಬರುತ್ತಿಲ್ಲ ಎಂದು ನಿಖಿತಾ ಮೇಲೆ ಗೂಬೆ ಕೂರಿಸಲಾಗಿದೆ. ಅವರ ಜೊತೆ ಇನ್ನಿಬ್ಬರು ಕನ್ನಡದ ಕಲಾವಿದರೂ ಇರುವುದು ನಿಖಿತಾಗೆ ಬಚಾವಾಗಲು ಇರುವ ದಾರಿ ಎನ್ನಬಹುದೇನೋ! (ಒನ್ ಇಂಡಿಯಾ ಕನ್ನಡ)