For Quick Alerts
For Daily Alerts
Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜನುಮದಾತ ನಾಗಾಭರಣ ವಿರುದ್ಧ ಕೌರವ ಪಾಟೀಲರ ಯುದ್ಧ
Gossips
-Staff
By Staff
|
ನಾಗಾಭರಣ
ವಿಷ
ಕಕ್ಕುತ್ತಿದ್ದಾರೆ!
ಹಾಗಂತ
ಸ್ವತಃ
ಬಿ.ಸಿ.ಪಾಟೀಲರೇ
ಹೇಳಿಕೊಂಡಿದ್ದಾರೆ.
ನಾಗಾಭರಣ
ನನ್ನ
ಮೇಲೆ
ವೈಯಕ್ತಿಕ
ದ್ವೇಷ
ಸಾಧಿಸುತ್ತಿದ್ದಾರೆ.
ಈ
ದ್ವೇಷಕ್ಕೆ
‘ಕೌರವ’
ಬಲಿಯಾಗಿದ್ದಾನೆ
ಎಂದು
ತಮ್ಮ
ಮಂಗಳವಾರ(ಜ.08)
ಸೂರ್ಯ
ಐಪಿಎಸ್
ಚಿತ್ರೀಕರಣದ
ಸೆಟ್ನಲ್ಲಿ
ಪಾಟೀಲರು
ದೂರಿದರು.
ಸದಭಿರುಚಿಯ ಕನ್ನಡ ಚಿತ್ರಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನವನ್ನು, ಸಹಾಯಧನ ಸಲಹಾ ಸಮಿತಿ ಅಧ್ಯಕ್ಷರಾದ ನಾಗಾಭರಣ ವೈಯಕ್ತಿಕ ಕಾರಣಗಳಿಂದ ಕೌರವ ಚಿತ್ರಕ್ಕೆ ನಿರಾಕರಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಕೋರ್ಟ್ ಕಟ್ಟೆ ಹತ್ತುವುದಾಗಿ ಪಾಟೀಲ್ ಹೇಳಿದರು.
ಸಪ್ನಾ ಥಿಯೇಟರ್ನಲ್ಲಿ ಶಿವಪ್ಪ ನಾಯಕ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ತಮ್ಮ ಹಾಗೂ ನಾಗಾಭರಣ ನಡುವೆ ತಿಕ್ಕಾಟ ನಡೆದಿತ್ತು . ಆ ಅವಮಾನದ ಸೇಡನ್ನು ನಾಗಾಭರಣ ಈಗ ತೀರಿಸಿಕೊಳ್ಳುತ್ತಿದ್ದಾರೆ ಎಂದು ಪಾಟೀಲ್ ಆಪಾದಿಸಿದರು.
ನಾಗಾಭರಣ ಮೇಲೆ ಪಾಟೀಲ್ ದಾಳಿಯ ಇತರೆ ಮುಖ್ಯಾಂಶಗಳು ಇಂತಿವೆ:
- ಕೌರವ ಚಿತ್ರ ತಮಿಳಿನ ಕಡಲೋರ ಕವಿತೆಗಳ್ ಎನ್ನು ವ ತಮಿಳು ಚಿತ್ರದ ರಿಮೇಕ್ ಎಂದು ನಾಗಾಭರಣ ಶಂಕಿಸಿದ್ದಾರೆ. ಎರಡೂ ಚಿತ್ರಗಳಲ್ಲಿ ಶಿಕ್ಷಕಿ ಹಾಗೂ ಒರಟು ವ್ಯಕ್ತಿತ್ವದ ನಾಯಕನ ಪಾತ್ರಗಳು ಬರುತ್ತವೆ. ಇಬ್ಬರೂ ಪ್ರೇಮಿಗಳು. ಇಷ್ಟು ಮಾತ್ರಕ್ಕೆ ಕೌರವ ಚಿತ್ರವನ್ನು ರಿಮೇಕ್ ಎನ್ನಲು ಪಾತ್ರವಿಲ್ಲ .
- ಕೌರವ ಸ್ವಮೇಕ್ ಎನ್ನುವುದನ್ನು ಸಾಬೀತುಪಡಿಸಲು ನಾನು ಸಿದ್ಧನಿದ್ದೇನೆ. ಕೌರವ ಚಿತ್ರಕ್ಕಾಗಿರುವ ಅನ್ಯಾಯವನ್ನು ಸರಿ ಪಡಿಸುವಂತೆ ವಾರ್ತಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ನ್ಯಾಯ ದೊರಕದಿದ್ದಲ್ಲಿ ನ್ಯಾಯಾಲಯದ ಕಟ್ಟೆಯೇರುತ್ತೇನೆ.
- ನಾಗಾಭರಣ ತಮ್ಮ ಜನುಮದಾತ ಚಿತ್ರಕ್ಕೆ ತಾವೇ ಸಹಾಯಧನ ಕೊಟ್ಟುಕೊಂಡಿದ್ದಾರೆ. ಆದರೆ, ಜನುಮದಾತ ಚಿತ್ರ ಇಂಗ್ಲೀಷ್ ಚಿತ್ರವೊಂದರ ನಕಲು. ಹಿಂದಿಯ ಫೂಲ್ ಔರ್ ಕಾಂಟೆ ಚಿತ್ರದ ಕಥೆಯನ್ನು ಕೂಡ ಜನುಮದಾತ ಹೋಲುತ್ತದೆ. ಈ ಚಿತ್ರ ರಿಮೇಕ್ ಅಲ್ಲ ಎನ್ನುವುದನ್ನು ನಾಗಾಭರಣ ಸಾಬೀತು ಪಡಿಸುತ್ತಾರೆಯೇ?
- ಕಡಲೋರ ಕವಿತೆಗಳ್ ಚಿತ್ರದ ಕೆಸೆಟ್ಟನ್ನು ಪರಿಶೀಲನೆಗೆ ಕಳಿಸುವಂತೆ ನಾಗಾಭರಣ ತಮ್ಮ ಸ್ವಂತ ಲೆಟರ್ಹೆಡ್ನಲ್ಲಿ ಪತ್ರ ಬರೆದಿದ್ದರು. ಕೆಸೆಟ್ಟನ್ನು ಬಾಡಿಗೆ ಪಡೆದು ಕಳಿಸಿಕೊಟ್ಟಿದ್ದೇನೆ. ಕೆಸೆಟ್ ಬಾಡಿಗೆ ಕಳಿಸಿಕೊಡುವಂತೆಯೂ ನಾಗಾಭರಣರಿಗೆ ತಿಳಿಸಿದ್ದೇವೆ. ಆದರೆ, ಉತ್ತರವಾಗಲೀ, ಬಾಡಿಗೆಯಾಗಲೀ ಈವರೆಗೂ ಬಂದಿಲ್ಲ .
Post Your Views
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Saturday, March 9, 2002, 5:30 [IST]
Other articles published on Mar 9, 2002