Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಗೆ ನಿರೂಪಕನಾಗಿ ಕನ್ನಡದ ಪ್ರಕಾಶ್ ರೈ?
'ಕನ್ನಡದ ಕೋಟ್ಯಾಧಿಪತಿ' ಎಂದು ಪುನೀತ್ ರಾಜಕುಮಾರ್ ಸುವರ್ಣ ಟಿವಿಯಲ್ಲಿ, 'ನೀನ್ಗಲಂ ವೆಲ್ಲಲಾಂ ಒರು ಕೋಟಿ' ಎಂದು ತಮಿಳಿನಲ್ಲಿ ನಟ ಸೂರ್ಯ ವಿಜಯ್ ಟಿವಿಯಲ್ಲಿ ಮತ್ತು ಮಲಯಾಳಂನಲ್ಲಿ 'ನಿನ್ಗಲ್ಕಕುಂ ಆಕಾಂ ಕೊಡೇಶ್ವರನ್' ಎನ್ನುವ ಹೆಸರಿನಲ್ಲಿ ನಟ ಸುರೇಶ್ ಗೋಪಿ ಏಷ್ಯಾ ನೆಟ್ ವಾಹಿನಿಯಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಆದರೆ ತಮಿಳು ಚಿತ್ರರಂಗದಲ್ಲಿ ನಟ ಸೂರ್ಯನಿಗೆ ಅಪಾರ ಜನಪ್ರಿಯತೆ ಇದ್ದರೂ ಈ ರಿಯಾಲಿಟಿ ಶೋ ಮೂಲಕ ವಿಜಯ್ ಟಿವಿಯ TRP ಹೆಚ್ಚಿಸುವಲ್ಲಿ ಸೂರ್ಯ ವಿಫಲರಾಗಿದ್ದರು.
ಹಾಗಾಗಿ, ತಮಿಳಿನಲ್ಲಿ ಮತ್ತೆ ಶುರುವಾಗಲಿರುವ ಕೋಟ್ಯಾಧಿಪತಿ ಶೋ ನಡೆಸಿಕೊಡಲು ಕನ್ನಡದ ಪ್ರಕಾಶ್ ರೈ ಬರಲಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ.
ವಿಜಯ್ ಟಿವಿಯವರು ಮುಂದಿನ ಸೀಸನ್ ನಡೆಸಿಕೊಡಲು ಪ್ರಕಾಶ್ ರೈ ಅವರನ್ನು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ತಮಿಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದೆ.
ಪ್ರಕಾಶ್ ರೈಗಿರುವ ಸದ್ಯದ ಟೈಟ್ ಸೆಡ್ಯೂಲ್ ಮಧ್ಯೆ ಈ ಕಾರ್ಯಕ್ರಮ ಒಪ್ಪಿಕೊಳ್ಳಲು ಅವರು ಕೊಂಚ ಬಿಡುವು ಮಾಡಿಕೊಳ್ಳಬೇಕಾಗುತ್ತದೆ. ಅದು ಏನಾಗುತ್ತೋ ಎನ್ನುವುದು ಪ್ರಕಾಶ್ ರೈಗೆ ಬಿಟ್ಟ ವಿಚಾರ.
ಬಿಗ್ ಸಿನರ್ಜಿ ಪ್ರೊಡಕ್ಷನ್ ಹೌಸ್ ಮೂಲಕ ಮೂಡಿ ಬಂದ ಈ ರಿಯಾಲಿಟಿ ಶೋ ಕನ್ನಡದಲ್ಲಂತೂ ಭಾರೀ ಜನಪ್ರಿಯಗೊಂಡಿತ್ತು ಅಲ್ಲದೆ ನಿರೂಪಕರಾಗಿದ್ದ ಪುನೀತ್ ರಾಜಕುಮಾರ್ ಅವರ ಸ್ಟಾರ್ ವ್ಯಾಲ್ಯೂ ಮತ್ತಷ್ಟು ಮೇಲಕ್ಕೇರಿತ್ತು.