Don't Miss!
- News ನಾಳೆ ಮಂಡ್ಯದಲ್ಲಿ ರಾಹುಲ್ ಗಾಂಧಿ ಪ್ರಚಾರ: ಬೃಹತ್ ಸಮಾವೇಶಕ್ಕೆ ಸಿದ್ಧತೆ
- Sports 'ಕಾಮೆಂಟೇಟರ್ ಇಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿಲ್ಲ'; ಡಿಕೆ ಸಾಹೇಬ್ ಅಬ್ಬರಕ್ಕೆ ದಂಗಾದ ಕೆಪಿ!
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Lifestyle ಸೌದಿಯಲ್ಲಿ ಮಳೆ, ಪ್ರವಾಹ...ಮರುಭೂಮಿ ಮರೆಯಾಗಿ ನಳನಳಿಸುವ ಹಸಿರು...! ಇದು ಹೇಗೆ ಸಾಧ್ಯ ಗೊತ್ತಾ?
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
100 ಕೋಟಿ ಹಿಡಿದು ಬಂದ ಕಿಚ್ಚನ ಪತ್ನಿ ಪ್ರಿಯಾ
Recommended Video
ನಟ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಈಗ ದೊಡ್ಡ ಸಾಹಸ ಮಾಡಲು ಮುಂದಾಗಿದ್ದಾರೆ. ಅವರ ಈ ಸಾಹಸಕ್ಕೆ ಪತಿ ಸುದೀಪ್ ಸಂಪೂರ್ಣ ಸಾಥ್ ನೀಡಿದ್ದಾರೆ.
ಹೌದು, ಪ್ರಿಯಾ ಈಗ 100 ಕೋಟಿ ಬಜೆಟ್ ಚಿತ್ರವನ್ನ ನಿರ್ಮಾಣ ಮಾಡುತ್ತಾರಂತೆ. ಈ ರೀತಿಯ ಸುದ್ದಿಯೊಂದು ಇದೀಗ ಶುರುವಾಗಿದೆ. ಸುದೀಪ್ ಈಗಾಗಲೇ ತಮ್ಮ ಕಿಚ್ಚ ಕ್ರಿಯೇಷನ್ಸ್ ಮೂಲಕ ಕೆಲ ಸಿನಿಮಾಗೆ ಬಂಡವಾಳ ಹಾಕಿದ್ದು, ಇದೇ ಮೊದಲ ಬಾರಿಗೆ ಈ ಮಟ್ಟದ ಸಿನಿಮಾವನ್ನ ನಿರ್ಮಾಣ ಮಾಡುವ ತಯಾರಿ ನಡೆಯುತ್ತಿದೆಯಂತೆ.
ಅಂಬಿ ಚಿತ್ರದಲ್ಲಿ ಪ್ರಿಯಾ ಸುದೀಪ್ ಮೆಚ್ಚಿಕೊಂಡ ಅಂಶಗಳಿವು
ಅಂದಹಾಗೆ, ಪ್ರಿಯಾ ಸುದೀಪ್ ಅವರ ನೂರು ಕೋಟಿ ಚಿತ್ರ ಯಾವುದು?, ಈ ಸಿನಿಮಾ ಬರೋದು ನಿಜಾನಾ? ಎಂಬ ವಿವರ ಮುಂದಿದೆ ಓದಿ...
'ರಾಜಾ ವೀರ ಮದಕರಿ'
ಸುದೀಪ್ ಈ ಹಿಂದೆ 'ವೀರ ಮದಕರಿ' ಸಿನಿಮಾ ಮಾಡಿದ್ದರು. ಆದರೆ ಈಗ ಅವರು 'ರಾಜಾ ವೀರ ಮದಕರಿ' ಚಿತ್ರವನ್ನ ಮಾಡುವ ಪ್ಲಾನ್ ಮಾಡಿದ್ದಾರಂತೆ. ಚಿತ್ರದುರ್ಗದ ಮದಕರಿ ನಾಯಕರ ಜೀವನಾಧಾರಿತ ಸಿನಿಮಾ ಇದಾಗಿದೆಯಂತೆ. ಮದಕರಿ ನಾಯಕರ ಶೌರ್ಯವನ್ನ ಈ ಸಿನಿಮಾ ಸಾರಲಿದೆಯಂತೆ.
ಪ್ರಿಯಾ ಸುದೀಪ್ ನಿರ್ಮಾಣ
ಸುದೀಪ್ ಅವರ ಈ ಮಹಾ ಸಿನಿಮಾವನ್ನ ಅವರ ಪತ್ನಿ ಪ್ರಿಯಾ ಸುದೀಪ್ ನಿರ್ಮಾಣ ಮಾಡಲಿದ್ದಾರಂತೆ. ಈ ಸಿನಿಮಾದ ಮೂಲಕ ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಈ ಚಿತ್ರದ ಕೆಲಸಗಳು ಈಗಾಗಲೇ ಶುರುವಾಗಿದೆಯಂತೆ.
ರಾಕ್ ಲೈನ್ ನಿರ್ಮಾಣದ ಅದ್ದೂರಿ ಐತಿಹಾಸಿಕ ಚಿತ್ರದಲ್ಲಿ ದರ್ಶನ್
ಎರಮ್ಮೂರು ಭಾಷೆಗಳಲ್ಲಿ
ಈ ಸಿನಿಮಾ ಕನ್ನಡದ ಜೊತೆಗೆ ಇನ್ನೂ ಎರಡು ಭಾಷೆಗಳಲ್ಲಿ ನಿರ್ಮಾಣ ಆಗಲಿಯಂತೆ. ಕನ್ನಡದಲ್ಲಿ ಈ ಸಿನಿಮಾಗೆ ಸುದೀಪ್ ನಾಯಕರಾಗಿದ್ದು, ಬೇರೆ ಭಾಷೆಯಲ್ಲಿಯೂ ಅವರೇ ಇರುತ್ತಾರ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಹೊರ ಬಂದಿಲ್ಲ.
ಸಿನಿಮಾ ಬರೋದು ನಿಜನಾ?
ಈ ಸಿನಿಮಾದ ಬಜೆಟ್ ಕೇಳಿದಾಗ ಮೊದಲು ಎಲ್ಲರಿಗೂ ಆಶ್ಚರ್ಯ ಆಗುತ್ತದೆ. 100 ಕೋಟಿ ಬಜೆಟ್ ನಲ್ಲಿ ಕನ್ನಡದಲ್ಲಿ ಸಿನಿಮಾ ಮಾಡಲು ಸಾಧ್ಯನಾ ಎನ್ನುವ ಪ್ರಶ್ನೆ ಮೂಡುತ್ತದೆ. ಈ ಚಿತ್ರದ ಎಲ್ಲಿಯೂ ಯಾರು ಬಹಿರಂಗವಾಗಿ ಮಾತನಾಡದೆ ಇದ್ದರೂ, ಈ ಚಿತ್ರದ ಪ್ಲಾನಿಂಗ್ ನಡೆಯುತ್ತಿರುವುದು ನಿಜ ಎನ್ನಲಾಗುತ್ತದೆ. ಅದೇನೇ ಇದ್ದರೂ ಈ ಮಟ್ಟಕ್ಕೆ ಕನ್ನಡ ಚಿತ್ರರಂಗ ಬೆಳೆಯಬೇಕು ಎನ್ನುವುದು ಎಲ್ಲರ ಆಸೆ.
ಮದಕರಿ ಹಿಂದೆ ದರ್ಶನ್, ಸುದೀಪ್
ಇನ್ನೊಂದು ಕಡೆ ನಟ ದರ್ಶನ್ ಕೂಡ ಮದಕರಿ ನಾಯಕರ ಬಗ್ಗೆ ಸಿನಮಾ ಮಾಡಲು ಮುಂದಾಗಿದ್ದಾರೆ. ರಾಕ್ ಲೈನ್ ವೆಂಕಟೇಶ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು, ಡಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಇರಲಿದೆಯಂತೆ. ದರ್ಶನ್ ಹಾಗೂ ಸುದೀಪ್ ಇಬ್ಬರು ಒಂದೇ ಸಮಯಕ್ಕೆ ಮದಕರಿ ನಾಯಕರ ಬಗ್ಗೆ ಚಿತ್ರವನ್ನ ಮಾಡುವ ಮನಸ್ಸಿನಲ್ಲಿ ಇದ್ದಾರೆ.