Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ'
ಚಿತ್ರದ ಹೆಸರೇ 'ನಾಟಿಕೋಳಿ' ಇನ್ನು ಕೋಳಿ ಜಗಳ ಇರದಿರಲು ಸಾಧ್ಯವೇ? ನಿರ್ದೇಶಕ ಶ್ರೀನಿವಾಸರಾಜು ಚಿತ್ರವನ್ನೇನೋ ಭರ್ಜರಿಯಾಗಿ ಆರಂಭಿಸಿದರು. ಆದರೆ ಆರಂಭದಲ್ಲೇ ಕೋಳಿ ಜಗಳ ಶುರುವಾಗಿ ಈ ಪ್ರಾಜೆಕ್ಟ್ ನಿಂದ ರಾಗಿಣಿ ದ್ವಿವೇದಿಯನ್ನು ಕೈಬಿಡಲಾಗಿದೆ.
ನಾಟಿಕೋಳಿ ಚಿತ್ರದ ಫೋಟೋಶೂಟ್ ನಲ್ಲಿ ರಾಗಿಣಿ ಬಾಯ್ ಫ್ರೆಂಡ್ ಶ್ರೀನಿವಾಸರಾಜು ಮೇಲೆ ಕೈಮಾಡಿದ್ದ ಪರಿಣಾಮ ರಾಗಿಣಿಗೆ ಕೊಕ್ ನೀಡಲಾಗಿದೆ. ಇದೀಗ ಹೊಸ ನಾಟಿಕೋಳಿ ಆಗಮನವಾಗಿದೆ. ಅವರು ಬೇರಾರು ಅಲ್ಲ ಪ್ರಿಯಾಮಣಿ. [ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ']
ಇದಿಷ್ಟೇ ಅಲ್ಲದೆ ನಾಟಿಕೋಳಿ ಚಿತ್ರದ ನಿರ್ಮಾಪಕರಾದ ವೆಂಕಟ್ ಅವರು ರಾಗಿಣಿಗೆ ಕೊಟ್ಟಿದ್ದ ರು.10 ಲಕ್ಷ ಮುಂಗಡ ಹಣವನ್ನು ವಾಪಸ್ ಮಾಡುವಂತೆ ಫಿಲಂ ಚೇಂಬರ್ ಮೆಟ್ಟಿಲೇರಿದ್ದಾರೆ. ರಾಗಿಣಿ ಬಾಯ್ ಫ್ರೆಂಡ್ ನಿರ್ಮಾಪಕ ಹಾಗೂ ನಿರ್ದೇಶಕರ ಮೇಲೆ ಕೈಮಾಡಿದಾಗಲೂ ರಾಗಿಣಿ ಮೌನ ವಹಿಸಿದ್ದು, ಅವರ ವಿರುದ್ಧವೇ ಮಾತನಾಡಿದ್ದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಶ್ರೀನಿವಾಸರಾಜು ಆಕ್ಷನ್ ಕಟ್ ಹೇಳುತ್ತಿರುವ ನಾಟಿಕೋಳಿ ಚಿತ್ರದ ಹಾಟ್ ಫೋಟೋ ಶೂಟ್ ವಿಲ್ಸನ್ ಗಾರ್ಡನ್ ಸ್ಟುಡಿಯೋದಲ್ಲಿ ಸದ್ದಿಲ್ಲದಂತೆ ನಡೆಯುತ್ತಿತ್ತು. ಅಲ್ಲಿಗೆ ಏಕಾಏಕಿ ಆಗಮಿಸಿದ 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ್ ಅವರು ಶ್ರೀನಿವಾಸರಾಜು ಹಾಗೂ ಚಿತ್ರದ ನಿರ್ಮಾಪಕ ವೆಂಕಟ್ ಮೇಲೆ ಹಲ್ಲೆ ಮಾಡಿದ್ದಾರೆ.
ನಮ್ಮ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರಿಗೆ 'ರಾಗಿಣಿ ನನ್ನ ಗರ್ಲ್ಫ್ರೆಂಡ್, ಈ ಚಿತ್ರವನ್ನು ನಿರ್ದೇಶಿಸಿದ್ರೆ ಕೊಲೆ ಮಾಡುತ್ತೇನೆ' ಎಂದು ಅವರ ಕುತ್ತಿಗೆಗೆ ಕೈ ಹಾಕಿರುತ್ತಾನೆ. ತಡೆಯಲು ಬಂದ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುತ್ತಾನೆ ಎಂದು ನಿರ್ಮಾಪಕ ವೆಂಕಟ್ ದೂರು ನೀಡಿದ್ದನ್ನು ಸ್ಮರಿಸಬಹುದು.