Don't Miss!
- News ಮತದಾನಕ್ಕೆ ಕೌಂಟ್ಡೌನ್: ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಸಿದ್ಧತೆ ಹೇಗಿದೆ?-ಮಾಹಿತಿ
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಹಾದಿಯಲ್ಲಿ ರಕ್ಷಿತ್ ಶೆಟ್ಟಿ ಹೆಜ್ಜೆ: ದಾಖಲೆ ಮಾಡ್ತಾರಾ 'ರಿಕ್ಕಿ'.?
ಸದ್ಯದ ಮಟ್ಟಿಗೆ ಕನ್ನಡದ ಅತಿ ದೊಡ್ಡ ಬಜೆಟ್ ಸಿನಿಮಾ ಯಾವುದು ಅಂದ್ರೆ ನಿಖರವಾದ ಮಾಹಿತಿ ಇಲ್ಲ. ಇದು ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ ಹೊರತು ಎಷ್ಟು ಬಜೆಟ್ ಎಂದು ಹೇಳುವುದಿಲ್ಲ. ಈಗ ಕೆಜಿಎಫ್ ವಿಚಾರದಲ್ಲೂ ಅದೇ ಆಗಿದೆ. ಇಲ್ಲಿಯವರೆಗೂ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ಹೊಸ ದಾಖಲೆ ಎನ್ನಲಾಗುತ್ತಿದೆ.
ಅತಿ ಹೆಚ್ಚು ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಬಟ್, ಬಜೆಟ್ ಎಷ್ಟು ಅಂದ್ರೆ, 'ನಾನು ಬೆಲೆಗೆ ಸಂಬಂಧ ಕಟ್ಟಲ್ಲ, ಸಂಬಂಧಕ್ಕೆ ಬೆಲೆ ಕಟ್ತೀನಿ' ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರ್.
100 ಕೋಟಿ ಹಿಡಿದು ಬಂದ ಕಿಚ್ಚನ ಪತ್ನಿ ಪ್ರಿಯಾ
ಸರಿ, ಕನ್ನಡದಲ್ಲಿ ನೂರು ಕೋಟಿ ಬಜೆಟ್ ಸಿನಿಮಾ ಯಾವಾಗ ಬರುತ್ತೆ ಎಂದು ಕೇಳಿದ್ರೆ, ಸದ್ಯಕ್ಕೆ ಉತ್ತರ ಕಿಚ್ಚ ಸುದೀಪ್. ಹೌದು, ಸುದೀಪ್ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬರಲಿರುವ 'ಮದಕರಿ ನಾಯಕ'ನ ಬಯೋಪಿಕ್ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾಗಲಿದೆಯಂತೆ. ಆದ್ರೆ, ಇದು ಅಧಿಕೃತವಾಗಿಲ್ಲ. ಇದೀಗ, ಮತ್ತೊಬ್ಬ ನಟನ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಲಿದೆ ಎಂಬ ಹೊಸ ಸುದ್ದಿ ವೈರಲ್ ಆಗಿದೆ. ಯಾರದು.? ಮುಂದೆ ಓದಿ.....
ರಕ್ಷಿತ್ ಮತ್ತೆ ನಿರ್ದೇಶನ
'ಕಿರಿಕ್ ಪಾರ್ಟಿ' ನಂತರ ಸೈಲೆಂಟ್ ಆಗಿ ಸಿನಿಮಾ ಮಾಡ್ತಿರುವ ರಕ್ಷಿತ್ ಶೆಟ್ಟಿ ಈಗ ನಿರ್ದೇಶನಕ್ಕೆ ವಾಪಸ್ ಆಗುವ ಸುದ್ದಿ ನೀಡಿದ್ದಾರೆ. 'ಉಳಿದವರು ಕಂಡಂತೆ' ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ತಯಾರಾಗಿರುವ ರಕ್ಷಿತ್ ಶೆಟ್ಟಿ 'ಪುಣ್ಯಕೋಟಿ' ಕಥೆ ಹೇಳಲು ಬರ್ತಿದ್ದಾರೆ.
ಅಂತೂ ಇಂತೂ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಶ್ಮಿಕಾ.!
ರಿಷಬ್ ಶೆಟ್ಟಿ ಖಚಿತ ಪಡಿಸಿದ್ರು
ಈ ವಿಷ್ಯವನ್ನ ರಕ್ಷಿತ್ ಶೆಟ್ಟಿ ಸ್ನೇಹಿತ ಹಾಗೂ ಆಪ್ತ ರಿಷಬ್ ಶೆಟ್ಟಿ ಖಚಿತ ಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನ ಹಂಚಿಕೊಂಡಿರುವ ರಿಷಬ್ '' ರಕ್ಷಿತ್ ಶೆಟ್ಟಿ ಮತ್ತೆ ನಿರ್ದೇಶನ ಮಾಡುತ್ತಿರುವುದು ಖುಷಿ ನೀಡಿದೆ. ಉಳಿದವರು ಕಂಡಂತೆ ನಂತರ ಈಗ 'ಪುಣ್ಯಕೋಟಿ' ಕಥೆಯನ್ನ ಹೇಳುತ್ತಿದ್ದಾರೆ. ಆಲ್ ದಿ ಬೆಸ್ಟ್ ಮಗಾ'' ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕ್ ಅಪ್ ಸುದ್ದಿ: ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್
ನೂರು ಕೋಟಿ ಬಜೆಟ್.!
2014ರಲ್ಲಿ ಬಿಡುಗಡೆಯಾಗಿದ್ದ 'ಉಳಿದವರು ಕಂಡಂತೆ' ನಂತರ ರಕ್ಷಿತ್ ನಿರ್ದೇಶನಕ್ಕೆ ಮರಳಿರುವುದು ವಿಶೇಷ. ಆದ್ರೆ, ಈ ಸಿನಿಮಾ ನೂರು ಕೋಟಿ ಬಜೆಟ್ ನಲ್ಲಿ ತಯಾರಾಗಲಿದೆ ಎಂಬ ಸುದ್ದಿ ಎಲ್ಲರಿಗೂ ಅಚ್ಚರಿ ನೀಡಿದೆ. ಹೇಳಿ ಕೇಳಿ ಪುಣ್ಯಕೋಟಿ ಸುಮಾರು 300 ವರ್ಷದ ಹಿಂದಿನ ಕಥೆ. ಅದಕ್ಕೆ ತಕ್ಕಂತೆ ಸೆಟ್ ನಿರ್ಮಾಣ, ಕಲಾವಿದರ ಆಯ್ಕೆ ಎಲ್ಲವೂ ಸೇರಿ ಸುಮಾರು 80-100 ಕೋಟಿ ಅಂದಾಜಿಸಲಾಗಿದೆಯಂತೆ.
ಕುದುರೆ ಮೇಲಿನಿಂದ ಬಿದ್ದ ರಕ್ಷಿತ್ : ಸ್ಪಷ್ಟನೆ ನೀಡಿದರು ಪುಷ್ಕರ್
ಅವನೇ ಶ್ರೀಮನ್ನಾರಾಯಣ
'ಕಿರಿಕ್ ಪಾರ್ಟಿ' ಸಿನಿಮಾ ನಂತರ ರಕ್ಷಿತ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಸದ್ಯ, 'ಅವನೇ ಶ್ರೀಮನ್ನಾರಾಯಣ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈಗ ಪುಣ್ಯಕೋಟಿ ಅನೌನ್ಸ್ ಆಗಿದ್ದು, ಈ ಚಿತ್ರದಲ್ಲಿ ರಕ್ಷಿತ್ ಬರಿ ಡೈರೆಕ್ಷನ್ ಮಾತ್ರ ಮಾಡ್ತಾರಾ ಅಥವಾ ನಟಸಿ ನಿರ್ದೇಶನ ಮಾಡ್ತಾರಾ ಕಾದುನೋಡಬೇಕಿದೆ.