Don't Miss!
- News Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾದ ರಶ್ಮಿಕಾ ಮಂದಣ್ಣ.!
Recommended Video
'ಚಮಕ್' ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ತೆರೆಕಂಡಿಲ್ಲ. ಆದ್ರೆ, ತೆಲುಗಿನಲ್ಲಿ ಮೂರು ಹಿಟ್ ಸಿನಿಮಾಗಳು ಬಿಡುಗಡೆಯಾಗಿದೆ. ಹಾಗಾಗಿ, ರಶ್ಮಿಕಾ ಅವರು ಕನ್ನಡದಿಂದ ಆಲ್ ಮೋಸ್ಟ್ ದೂರವಾಗ್ತಿದ್ದಾರೆ ಎಂಬ ಮಾತುಗಳೇ ಕೇಳಿಬರ್ತಿತ್ತು.
ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ, ಮುಂದಿನ ಕನ್ನಡ ಸಿನಿಮಾ ಯಾವುದು ಎಂಬ ಕುತೂಹಲ ಕಾಡುತ್ತಿತ್ತು. ಯಾವುದೇ ಕಾರ್ಯಕ್ರಮದಲ್ಲಿ ರಶ್ಮಿಕಾ ಕಾಣಿಸಿಕೊಂಡರು, ನಿಮ್ಮ ಮುಂದಿನ ಕನ್ನಡ ಸಿನಿಮಾ ಯಾವುದು ಅಂತ ಕೇಳ್ತಿದ್ರು.
ಬೆಂಗಳೂರಿಗೆ ಬಂದಿದ್ದ ವಿಜಯ ದೇವರಕೊಂಡ ರಕ್ಷಿತ್, ರಶ್ಮಿಕಾ ಬಗ್ಗೆ ಹೀಗಂದ್ರು!
ಇತ್ತೀಚಿಗಷ್ಟೆ ಜಯನಗರದ ಮಾಲ್ ಉದ್ಘಾಟನೆಗೆ ಬಂದಿದ್ದ ರಶ್ಮಿಕಾಗೆ ಅಲ್ಲಿ ಮಾಧ್ಯಮದವರು ನಿಮ್ಮ ಮುಂದಿನ ಕನ್ನ ಸಿನಿಮಾ ಯಾವುದು ಎಂದಾಗ 'ಒಂದು ಸೂಪರ್ ಆಗಿರೋ ಸಿನಿಮಾ ಬರ್ತಿದೆ. ಅದನ್ನ ನಾನು ಹೇಳಲ್ಲ, ಪ್ರೊಡಕ್ಷನ್ ಹೌಸ್ ಅವರೇ ಹೇಳಲಿ' ಎಂದಿದ್ದರು. ಇದೀಗ, ಆ ಚಿತ್ರ ಯಾವುದು ಎಂದು ಬಹಿರಂಗವಾಗಿದೆ. ಮುಂದೆ ಓದಿ....
ಧ್ರುವ ಸಿನಿಮಾದಲ್ಲಿ ರಶ್ಮಿಕಾ.!
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ. ಆದ್ರೆ, ಇದನ್ನ ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಲ್ಲ. ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ರಶ್ಮಿಕಾ ಹೇಳಿದ್ದ ಸೂಪರ್ ಆಗಿರೋ ಸಿನಿಮಾ ಇದೆನಾ ಅಥವಾ ಇದನ್ನ ಬಿಟ್ಟು ಇನ್ನೊಂದು ಇದೆಯಾ ಗೊತ್ತಿಲ್ಲ.
'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!
ಎರಡನೇ ಶೆಡ್ಯೂಲ್ ಗೆ 'ಕಿರಿಕ್' ಹುಡುಗಿ.!
ಈಗಾಗಲೇ 'ಪೊಗರು' ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದೆ. ವಿಭಿನ್ನ ಶೇಡ್ ನಲ್ಲಿ ಧ್ರುವ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಶಾಲೆಯ ಹುಡುಗನ ಲುಕ್ ನ ಶೂಟಿಂಗ್ ಮುಗಿದಿದೆ. ನವೆಂಬರ್ 20 ರಿಂದ ಎರಡನೇ ಶೆಡ್ಯೂಲ್ ಆರಂಭವಾಗುತ್ತಿದ್ದು, ಅಂದಿನಿಂದ ರಶ್ಮಿಕಾ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಮುಂದಿನ ಬರ್ತಡೇಯಷ್ಟರಲ್ಲಿ ಧ್ರುವ ಸರ್ಜಾ ಮದುವೆ.!
ಅರ್ಜುನ್ ಸರ್ಜಾ ಕಥೆ
ಅಂದ್ಹಾಗೆ, ನಂದಕಿಶೋರ್ ನಿರ್ದೇಶನ ಮಾಡ್ತಿರುವ ಈ ಚಿತ್ರಕ್ಕೆ ಕಥೆ ಬರೆದಿರುವುದು ಧ್ರುವ ಸರ್ಜಾ ಮಾವ ಅರ್ಜುನ್ ಸರ್ಜಾ. ಇಲ್ಲಿಯವರೆಗೂ ಹೀರೋಯಿನ್ ಯಾರು ಎಂಬುದನ್ನ ನಿರ್ಧರಿಸಿರಲಿಲ್ಲ. ಈಗ ಅಂತಿಮವಾಗಿ ರಶ್ಮಿಕಾ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ.
ರಶ್ಮಿಕಾರನ್ನ ತೆಲುಗು ಮಂದಿ ಮೆಚ್ಚಿಕೊಳ್ಳಲು ಕಾರಣ ಹೇಳಿದ ನಾಗಾರ್ಜುನ
ಮೊದಲ ಸಲ...
ರಶ್ಮಿಕಾ ಮಂದಣ್ಣ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ಮೊದಲ ಸಲ. ಹೀಗಾಗಿ, ಸಹಜವಾಗಿ ಈ ಚಿತ್ರದ ಮೇಲೆ ಈಗ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ, ಧ್ರುವ ಮೂರು ಹಿಟ್ ಸಿನಿಮಾ ನೀಡಿ ತಮ್ಮದೇ ಟ್ರೆಂಡ್ ಸೃಷ್ಟಿಸಿಕೊಂಡಿದ್ದಾರೆ. ಅದೇ ರೀತಿ ರಶ್ಮಿಕಾ ಕೂಡ ಕನ್ನಡದಲ್ಲಿ ಮೂರು ಹಿಟ್ ಹಾಗೂ ತೆಲುಗಿನಲ್ಲಿ ಮೂರು ಹಿಟ್ ಸಿನಿಮಾ ನೀಡಿ ಗುರುತಿಸಿಕೊಂಡಿದ್ದಾರೆ.