Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಕ್ಲೈನ್ಗೆ ಪ್ರೇಮಭಂಗ : ‘ಸಿಂಗಾರವ್ವ’ ನಾಗಾಭರಣ ವಶ
ಅತ್ತ ನಾಗರಹಾವು ಚಿತ್ರತಂಡ ನ್ಯೂಜಿಲೆಂಡಿಗೆ ಪ್ರಯಾಣ ಬೆಳೆಸುತ್ತಿರುವಂತೆಯೇ ಇತ್ತ ‘ಇದು ಮೋಸ’ ಎಂದು ರಾಕ್ಲೈನ್ ವೆಂಕಟೇಶ್ ಭುಸುಗುಡುತ್ತಿದ್ದಾರೆ. ‘ಇದು ಮೋಸವಷ್ಟೇ ಅಲ್ಲ , ಬಟ್ಟಲಲ್ಲಿ ಬಡಿಸಿದ ಅನ್ನಕ್ಕೆ ಉಚ್ಚೆ ಹುಯ್ದ ನಡವಳಿಕೆ’ ಎನ್ನುತ್ತಾರೆ ರವೀ ಅರ್ಥಾತ್ ಕೆಎಸ್ಎಲ್ ಸ್ವಾಮಿ.
ವಿಷಯ
ಇಷ್ಟು
:
ತಮ್ಮ
‘ಸಿಂಗಾರೆವ್ವ
ಮತ್ತು
ಅರಮನೆ’
ಕೃತಿಯ
ಹಕ್ಕನ್ನು
ರಾಕ್ಲೈನ್ಗೆ
ಕೊಡಲು
ಒಪ್ಪಿಕೊಂಡಿದ್ದ
ಹಿರಿಯ
ಕವಿ
ಚಂದ್ರಶೇಖರ
ಕಂಬಾರ
ಈಗ
ವರಸೆ
ಬದಲಿಸಿದ್ದಾರೆ;
ರಾಕ್ಲೈನ್
ಭಾವದಲ್ಲಿ
ಹೇಳುವುದಾದರೆ
ಪೊರೆ
ಕಳಚಿದ್ದಾರೆ.
ಸಿಂಗಾರವ್ವನ
ಹಕ್ಕುಗಳನ್ನು
ನಾಗಾಭರಣ
ಪಾಲು
ಮಾಡುವ
ಮೂಲಕ
ರಾಕ್ಲೈನ್ಗೆ
ಕಂಬಾರ
ಪ್ರೇಮಭಂಗ
ಮಾಡಿದ್ದಾರೆ.
ಕಲಾತ್ಮಕ ಚಿತ್ರವೊಂದನ್ನು ನಿರ್ಮಿಸಬೇಕೆನ್ನುವ ಕನಸಿನಲ್ಲಿ ಓಲಾಡುತ್ತಿದ್ದ ರಾಕ್ಲೈನ್ಗೆ ಕಂಬಾರರ ಈ ನಡವಳಿಕೆ ಆಶ್ಚರ್ಯ ಮಾತ್ರವಲ್ಲ , ದಿಗ್ಭ್ರಮೆಯನ್ನೂ ಮೂಡಿಸಿದೆ. ಸಿಂಗಾರೆವ್ವನ ನಿರ್ದೇಶನದ ಹೊಣೆಯನ್ನು ರವೀ ಅವರಿಗೆ ರಾಕ್ಲೈನ್ ಒಪ್ಪಿಸಿದ್ದರು. ಕಂಬಾರರನ್ನು ರವೀ ಅವರು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು -
‘ಎರಡು ವರ್ಷಗಳ ಕೆಳಗೆ ಸಿಂಗಾರೆವ್ವನ ಹಕ್ಕುಗಳನ್ನು ಬೇರೆಯವರಿಗೆ ಕೊಟ್ಟಿದ್ದುಂಟು. ಈಗ ಒಪ್ಪಂದದ ಅವಧಿ ಮುಗಿದಿರುವುದರಿಂದ ರಾಕ್ಲೈನ್ಗೆ ಕೊಡಲಡ್ಡಿಯಿಲ್ಲ . ಅವರನ್ನು ಕರೆತನ್ನಿ , ಮಾತನಾಡೋಣ.’
ರಾಕ್ಲೈನ್ ಊರಲ್ಲಿ ಇಲ್ಲದ ಕಾರಣ, ತಾವೇ ಅಡ್ವಾನ್ಸ್ ಕೊಡುವುದಾಗಿ ರವೀ ಹೇಳಿದ್ದರಂತೆ. ಆದರೆ, ಪರವಾಗಿಲ್ಲ , ರಾಕ್ಲೈನ್ ಬಂದಮೇಲೆಯೇ ಮಾತಾಡೋಣ ಎಂದು ಕಂಬಾರರು ಸುಮ್ಮನಾದರಂತೆ. ಆಮೇಲೆ ಒಪ್ಪಂದದ ದಿನ ಫೋನ್ ಮಾಡಿದಾಗ, ಆ ಹ್ತೊತಿಗೆ ಕಂಬಾರರು ಸಿಂಗಾರೆವ್ವನ ಹಕ್ಕುಗಳನ್ನು ನಾಗಾಭರಣರಿಗೆ ಹಸ್ತಾಂತರಿಸಿದ್ದಾಗಿತ್ತು. ರಾಕ್ಲೈನ್ ಸಿಟ್ಟಿಗೇಳಲು ಇನ್ನೇನು ಬೇಕು?
Post your views on Kambara
ಮುಖಪುಟ / ಸ್ಯಾಂಡಲ್ವುಡ್