Don't Miss!
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೂಪರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಶಿಫಾರಸ್ಸು ಮಾಡಿದ್ದು RSS?
2010-11ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಂಡಳಿ ಬುಧವಾರ ಪ್ರಕಟಿಸಿತ್ತು. ಅತ್ಯುತ್ತಮ ಚಲನಚಿತ್ರವಾಗಿ ಉಪೇಂದ್ರ ಅಭಿನಯದ ಸೂಪರ್ ಚಿತ್ರ ಆಯ್ಕೆಯಾಗಿತ್ತು. ಹೆಚ್ಚಾಗಿ ಕಮರ್ಷಿಯಲ್ ಎಲಿಮೆಂಟ್ ಇರುವ ಚಿತ್ರಗಳಿಗೆ ಆಯ್ಕೆ ಮಂಡಳಿ ಮಣೆ ಹಾಕುವುದಿಲ್ಲ. ಇದು ಮಂಡಳಿ ಪಾಲಿಸಿಕೊಂಡು ಬಂದಿರುವ ಅಘೋಷಿತ ಪಾಲಿಸಿ.
ಹಾಗಿದ್ದಾಗ ಸೂಪರ್ ಚಿತ್ರವನ್ನು ಆಯ್ಕೆ ಮಾಡಿದ್ದೇಕೆ? ಅದಕ್ಕೆ ಕಾರಣವಿಲ್ಲದಿಲ್ಲ. ಸೂಪರ್ ಚಿತ್ರ ಅಪ್ಪಟ ದೇಶಾಭಿಮಾನಿಯೊಬ್ಬ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಿನವಾದರೂ ಸಾಧ್ಯವಾಗದ ಕನಸನ್ನು ನನಸು ಮಾಡುವ ಕಥಾಹಂದರವಿರುವ ಚಿತ್ರ. ನಮ್ಮ ಭರತಖಂಡವನ್ನು ವಿಶ್ವದ ಅತ್ಯಂತ ಮುಂದುವರಿದ ರಾಷ್ಟ್ರವನ್ನಾಗಿ ಮಾಡುವ ಕಥೆ ಇರುವ ಚಿತ್ರ.
ಸಿಎಂ ಎಂದರೆ ಮುಖ್ಯಮಂತ್ರಿಯಲ್ಲ ಕಾಮನ್ ಮ್ಯಾನ್ ಎನ್ನುತ್ತಾನೆ ನಾಯಕ. ( ಉಪೇಂದ್ರ ) ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಗಣಿ ಲೂಟಿ ಹೀಗೆ ಪ್ರಚಲಿತ ವಿದ್ಯಮಾನಗಳನ್ನು ತಲೆಗೆ ಹೊಡೆದಂತೆ ಎಳೆಎಳೆಯಾಗಿ ವಿಭಿನ್ನ ರೀತಿಯಲ್ಲಿ ತೆರೆಗೆ ಬಂದು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಯಶಸ್ಸು ಕಂಡ ಚಿತ್ರ ಇದಾಗಿತ್ತು.
ದೇಶ, ದೇಶಾಭಿಮಾನ, ದೇಶಪ್ರೇಮದ ವಿಚಾರದ ಕಥೆಯ ಚಿತ್ರ ಇದಾಗಿರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೂಪರ್ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಶಿಫಾರಸು ಮಾಡಿತ್ತು ಎನ್ನುವುದು ಗಾಂಧಿನಗರದಲ್ಲಿ ಹಬ್ಬಿರುವ ಘಾಸಿಪ್! ಅದೆಷ್ಟು, ಸರಿಯೋ ಸುಳ್ಳೋ?